ವಿಶ್ವದ ಮೊದಲ ರಾಜಕೀಯ ತಜ್ಞ ಬಸವಣ್ಣ; ರಂಜಾನ್‌ ದರ್ಗಾ

ಲಿಂಗದೀಕ್ಷೆ ಮೂಲಕ ಸಾಮರಸ್ಯದ ಪಾಠ ಮಾಡಿದ ಬಸವಣ್ಣನವರು ದೇಶದ ಅಪರೂಪದ ಮಾಣಿಕ್ಯ

Team Udayavani, May 4, 2022, 3:19 PM IST

ವಿಶ್ವದ ಮೊದಲ ರಾಜಕೀಯ ತಜ್ಞ ಬಸವಣ್ಣ; ರಂಜಾನ್‌ ದರ್ಗಾ

ನೆಲಮಂಗಲ: ವಿಶ್ವದ ಮೊದಲ ರಾಜಕೀಯ ತಜ್ಞ ಬಸವಣ್ಣ ಎಂಬುದನ್ನು ಜಗತ್ತಿನ ಜನರು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಸಾಹಿತಿ ರಂಜಾನ್‌ ದರ್ಗಾ ಅಭಿಪ್ರಾಯಪಟ್ಟರು.

ನಗರದ ಪವಾಡ ಬಸವಣ್ಣ ದೇವರ ಮಠದಲ್ಲಿ ಪರಮಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಬಸವ ಜಯಂತಿ ಉತ್ಸವ ಹಾಗೂ ಪವಾಡಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ದೇಶದಲ್ಲಿ ಧರ್ಮ ಸಂಘರ್ಷಗಳು ಕೊನೆಯಾಗಲು ಬಸವ ತತ್ವ ಅನುಸರಿಸಿ ಪಾಲಿಸಿಕೊಂಡು ಹೋದರೆ ಸಾಕು. ಬಸವಣ್ಣನವರಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ.

ಈಗಿನ ಸಂಸತ್‌ ರಚನೆಯಾಗುವ ಮೊದಲೇ ಬಸವಣ್ಣನವರ ಅನುಭವ ಮಂಟಪದಲ್ಲಿ ಸಮಾನ ಹಕ್ಕು, ಜಾತಿ ಪದ್ಧತಿ ನಿರ್ಮೂಲನೆ, ಅಂತರ್ಜಾತಿ ವಿವಾಹ, ಮೂಢನಂಬಿಕೆ ನಿರ್ಮೂಲನೆ, ಮಹಿಳೆಯರಿಗೆ ಸಮಾನ ಹಕ್ಕು, ಮೂಲಭೂತ ಸೌಕರ್ಯ ಸೇರಿ ನೂರಾರು ಬದಲಾವಣೆಗೆ 12ನೇ ಶತಮಾನದಲ್ಲಿಯೇ ಸಾಕ್ಷಿಯಾಗಿದೆ ಎಂದರು. ಮೇಲುಕೀಳು ಎಂಬುದನ್ನು ದೂರ ಮಾಡುತ್ತಾ ಅಂತರ್‌ ಜಾತಿ ವಿವಾಹ ಜಾರಿಗೆ ತಂದು ಮಹಿಳಾ ಹಕ್ಕುಗಳಿಗೆ ಶಕ್ತಿ ನೀಡಿ ಲಿಂಗದೀಕ್ಷೆ ಮೂಲಕ ಸಾಮರಸ್ಯದ ಪಾಠ ಮಾಡಿದ ಬಸವಣ್ಣನವರು ದೇಶದ ಅಪರೂಪದ ಮಾಣಿಕ್ಯ ಎಂದರು.

ಶ್ರದ್ಧೆಯಿಂದ ಕಾಯಕ ಮಾಡಿ: ಬೆನ್ನುಮೂಳೆ ಶಸ್ತ್ರ ಚಿಕಿತ್ಸಾ ತಜ್ಞ ಡಾ.ವಿದ್ಯಾಧರ ಮಾತನಾಡಿ, ನಮ್ಮ ನಡುವೆ ಕೆಲವು ಪವಾಡಗಳು ಸಂಭವಿಸುತ್ತವೆ. ಆದರೆ, ಬಸವಣ್ಣನವರು ಹೇಳಿದಂತೆ ನಮ್ಮ ಕಾಯಕ ವೃತ್ತಿಯಲ್ಲಿ ಶ್ರದ್ಧೆಯಿಂದ ಮಾಡಿದರೆ ಪ್ರತಿನಿತ್ಯವೂ ಪವಾಡ ಕಾಣಬಹುದು. ಬಸವಣ್ಣನವರ ವಿಚಾರಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ನಾನು, ನನ್ನದು ಎಂಬುದನ್ನು ಬಿಟ್ಟು ಕಾಯಕದ ಮೂಲಕ ಸಮಾಜಕ್ಕೆ ಮಾದರಿ ಆಗುತ್ತಾರೆ ಎಂದರು.

ಶ್ರೀಮಠ ಎಲ್ಲರಿಗೂ ಮಾದರಿ: ಎನ್‌ ಡಿಎ ಅಧ್ಯಕ್ಷ ಎಸ್‌.ಆರ್‌ ವಿಶ್ವನಾಥ್‌ ಮಾತನಾಡಿ, ವಿದೇ ಶಗಳಲ್ಲೂ ಬಸವಣ್ಣನವರನ್ನು ಒಪ್ಪಿಕೊಂಡಿದ್ದಾರೆ ಎಂದರೆ ಅವರ ವಚನಗಳು, ವಿಚಾರಗಳು ಯಾವ ಪ್ರಮಾಣಕ್ಕೆ ಜಗತ್ತನ್ನು ಆವರಿಸಿದೆ ಎಂಬುದನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಬಸ ವಣ್ಣನವರ ವಿಚಾರಗಳಲ್ಲಿ ಸಾಗುತ್ತಿರುವ ಪವಾಡ ಬಸವಣ್ಣ ದೇವರ ಮಠ ನಮಗೆಲ್ಲರಿಗೂ ಮಾದರಿ ಎಂದರು.

ಕಲಾ ತಂಡಗಳು ಮೆರಗು: ಶ್ರೀ ಪವಾಡ ಬಸವಣ್ಣ ದೇವರ ರಥೋತ್ಸವವನ್ನು ಶ್ರೀ ಸಿದ್ಧಲಿಂಗ  ಸ್ವಾಮೀಜಿ ಹಾಗೂ 20ಕ್ಕೂ ಹೆಚ್ಚು ಮಠಗಳ ಸ್ವಾಮೀಜಿ  ಸಮ್ಮುಖದಲ್ಲಿ ನಡೆಸಲಾಯಿತು. ರಥೋತ್ಸವಕ್ಕೆ ವೀರಗಾಸೆ, ಗೊಂಬೆ ಕುಣಿತ, ಕೇರಳ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮೆರಗು  ತಂದವು, ಸಾವಿರಾರು ಭಕ್ತರು ಭಾಗವಹಿಸಿದ್ದರು.

ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ ಶಿವಚಾರ್ಯ ಸ್ವಾಮೀಜಿ, ಗದ್ದುಗೆ ಮಠದ ಶ್ರೀ ಮಹಂತಸ್ವಾಮೀಜಿ, ಮಕ್ಕಳ ದೇವರ ಮಠದ ಶ್ರೀ ಮೃತ್ಯುಂಜಯ ಸ್ವಾಮಿ, ವೀರಶೈವ ಅಭಿವೃದ್ಧಿ ನಿಗಮ ಪರಮಶಿವಯ್ಯ, ಮಾಜಿ ಶಾಸಕ ಎಂ.ವಿ ನಾಗರಾಜು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೊಂಬಯ್ಯ, ನಗರಸಭೆ ಸದಸ್ಯ  ಗಂಗಾಧರ್‌ ಗಣಿ, ಪೂರ್ಣಿಮಾ ಸುಗ್ಗರಾಜು, ಗಣೇಶ್‌, ಪ್ರದೀಪ್‌, ನಾಗರಾಜು, ಶಾಂತಕುಮಾರ್‌, ಅಖಿಲ ಭಾರತ ವೀರ ಶೈವ ಮಹಾ ಸಭಾ ಜಿಲ್ಲಾ ಧ್ಯಕ್ಷೆ ರಾಜಮ್ಮ, ತಾಲೂಕು ಅಧ್ಯಕ್ಷೆ ವೇದಾವತಿ, ಬಸವರಾಜು, ಶಶಿಕಿರಣ್‌, ಕಸಾಪ ತಾಲೂಕು ಅಧ್ಯಕ್ಷ ಪ್ರದೀಪ್‌ ಕುಮಾರ್‌ ಮತ್ತಿತರರು ಇದ್ದರು.

ಪವಾಡ ಶ್ರೀ ಪ್ರಶಸ್ತಿ ಪ್ರದಾನ
ಪವಾಡ ಬಸವಣ್ಣ ದೇವರ ಮಠದಿಂದ ನೀಡುವ ಪವಾಡಶ್ರೀ ಪ್ರಶಸ್ತಿಯನ್ನು ಮೊದಲು ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರ ಸ್ವಾಮೀಜಿಗೆ ನೀಡಲಾಗಿತ್ತು. 2021ರ ಪವಾಡ ಶ್ರೀ ಪ್ರಶಸ್ತಿಯನ್ನು ಹಿರಿಯ ಸಾಹಿತಿ, ಪತ್ರಕರ್ತ ರಂಜಾನ್‌ ದರ್ಗಾಗೆ ಹಾಗೂ 2022ರ ಪವಾಡ ಶ್ರೀ ಪ್ರಶಸ್ತಿಯನ್ನು ರಾಜ್ಯದ ಏಕೈಕ ಬೆನ್ನುಮೂಳೆ ಶಸ್ತ್ರ ಚಿಕಿತ್ಸಾ ತಜ್ಞ ಮಣಿಪಾಲ್‌ ಸ್ಕ್ಯಾನ್‌ ಕೇರ್‌ ಸೆಂಟರ್‌ ಆಸ್ಪತ್ರೆ ವೈದ್ಯ ಡಾ.ವಿದ್ಯಾಧರರಿಗೆ ಬಿಡಿಎ ಅಧ್ಯಕ್ಷ ಎಸ್‌. ಆರ್‌. ವಿಶ್ವನಾಥ್‌ ಹಾಗೂ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪ್ರಧಾನ ಮಾಡಿದರು.

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.