ಹಲಸನ್ನು ಕಡಿಮೆ ಬೆಲೆಗೆ ಮಾರುವ ಸ್ಥಿತಿ
Team Udayavani, May 22, 2021, 4:08 PM IST
ದೊಡ್ಡಬಳ್ಳಾಪುರ: ಕೊರೊನಾ ಲಾಕ್ಡೌನ್ ಪರಿಣಾಮ ಹಲಸು ಮಾರಾಟದ ಮೇಲೂ ಬಿದ್ದಿದ್ದು,ತಾಲೂಕಿನಲ್ಲಿ ಹಲಸು ಕೊಳ್ಳುವವರಿಲ್ಲದೇ ರೈತರುತಂದಿರುವ ಹಲಸನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು ಹಿಂದೂಪುರ ಹೆದ್ದಾರಿಯ ನಗರದಹೊರವಲಯದ ಟಿ.ಬಿ ವೃತ್ತದ ಬಳಿಯ ರಸ್ತೆಯಬದಿಯಲ್ಲಿ ಪ್ರತಿವರ್ಷ ಹಲಸಿನ ಸೀಸನ್ನಲ್ಲಿ ಹಲಸಿನ ಹಣ್ಣುಗಳ ರಾಶಿ ಕಾಣುತ್ತಿತ್ತು, ಆದರೆ ಈ ಬಾರಿಫಸಲು ಬಂದಿದ್ದರೂ ಮಾರಾಟದ ಭರಾಟೆ ಕಾಣುತ್ತಿಲ್ಲ. ತಾಲೂಕಿನಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಮಾರಾಟಕ್ಕೆ ತೊಡಕಾಗಿದ್ದು, 10 ಗಂಟೆಯ ನಂತರ ಇಲ್ಲಿಮಾರಾಟ ಮಾಡಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದುಹಲಸು ಮಾರಾಟಗಾರರು ದೂರುತ್ತಾರೆ.
ತೂಬಗೆರೆ ಹೋಬಳಿ ಹಲಸು ಹೆಸರುವಾಸಿ,ಇದರೊಂದಿಗೆ ಕಸಬಾ ದೊಡ್ಡಬೆಳವಂಗಲ ಹೋಬಳಿಗಳಲ್ಲಿಯೂ ಹಲಸು ಬೆಳಯುತ್ತಾರೆ. ಹಲಸಿನಹಣ್ಣುಗಳು ಗಾತ್ರಕನ್ನನುಗುಣವಾಗಿ 50 ರಿಂದ 100ರೂಗಳವರೆಗೆ ಮಾರಾಟವಾಗುತ್ತಿವೆ. ನೆರೆಯ ಆಂಧ್ರಹಾಗೂ ಸುತ್ತಮುತ್ತಲಿನ ತಾಲೂಕುಗಳಿಂದ ಹಲಸನ್ನುಖರೀದಿಸಲು ಆಗಮಿಸುತ್ತಿದ್ದರು.
ಆದರೆ ಕೊರೊನಾಲಾಕ್ಡೌನ್ ಹಿನ್ನಲೆಯಲ್ಲಿ ಆಂಧ್ರ ಹಾಗೂ ಹೊರಪ್ರದೇಶಗಳಿಂದ ಬರುವವರು ತೀರಾಕಡಿಮೆ ಆಗಿದೆ.
ಸಗಟು ಮಾರಾಟ ಕುಸಿತ: ಹಲಸಿನ ತೋಪುಗಳುಕಡಿಮೆಯಾಗುತ್ತಿದ್ದರೂ ತೋಟಗಳಲ್ಲಿ ಬೆಳಸಿರುವಹಲಸಿನ ಮರಗಳಲ್ಲಿ ಸೀಸನ್ನ6ತಂಗಳ ಮುಂಚೆಯೇ ವ್ಯಾಪಾರ ಮಾಡಿ ಅಡ್ವಾನ್ಸ್ನೀಡಲಾಗುತ್ತಿತ್ತು.
ಆದರೆ ಈ ಬಾರಿ ಕೊರೊನಾಪರಿಣಾಮ ರೈತರ ತೋಟಗಳಿಗೆ ಅಷ್ಟಾಗಿ ವ್ಯಾಪಾರಮಾಡಿಲ್ಲ. ಪರಿಸ್ಥಿತಿ ನೋಡಿ ಖರೀದಿ ಮಾಡೋಣಎಂದು ಮಾರಾಟಗಾರರು ಮುಂದೂಡಿದ್ದರಿಂದತೋಟಗಳಲ್ಲಿ ಹಣ್ಣುಗಳು ಹಾಗೆಯೇ ಉಳಿಯುತ್ತಿವೆಎನ್ನುತ್ತಾರೆ ಹಲಸು ಬೆಳೆದ ರೈತರು.
ಪ್ರತಿವರ್ಷ ರೈತರ ತೋಟದಲ್ಲಿ ಖರೀದಿಸುತ್ತಿದ್ದೇವೆ.ಒಂದು ಹುಂಡಿಗೆ (ಗುಡ್ಡೆ) ಸುಮಾರು 100ರಿಂದ200 ಕಾಯಿಗಳು ಇರುತ್ತವೆ. ಸಾಮಾನ್ಯವಾಗಿಕಾಯಿಗಳ ಗಾತ್ರದ ಮೇಲೆ ಹುಂಡಿಗೆ2 ಸಾವಿರದಿಂದ5 ಸಾವಿರದವರೆಗೆ ಬೆಲೆ ಇರುತ್ತದೆ. ಆದರೆ ಈ ಬಾರಿ ಕೊರೊನಾ ಪರಿಣಾಮದಿಂದ ಬೆಲೆ ಕಡಿಮೆಯಾಗಿದ್ದು, ನಾವು ಖರೀದಿಸಿ ಅಡ್ವಾನ್ಸ್ ನೀಡಿದ್ದ 150 ಮರಗಳಫಸಲನ್ನು ಮಾರಾಟ ಮಾಡುವುದು ಹೇಗೆ ಎಂಬಚಿಂತೆ ಎದುರಾಗಿದೆ ಎನ್ನುತ್ತಾರೆ ಮಾರಾಟಗಾರರು.
ತೋಟಗಳಲ್ಲಿ ಕಾಯಿ ಕೀಳಲು ಕೂಲಿಕಾರರಸಮಸ್ಯೆ ಎದುರಾಗಿದೆ. ಆಂಧ್ರಕ್ಕೆ ನಾವೇ ವಾಹನದಲ್ಲಿ ಹೋಗಿ ಮಾರಾಟ ಮಾಡಲು ಸಿದ್ದರಾದರೂ ಈಗಿನ ಸಂದರ್ಭದಲ್ಲಿ ಅವರು ಕೇಳಿದ ಬೆಲೆಗೆ ನಾವು ಮಾರಾಟ ಮಾಡಿ ಬರಬೇಕಿದೆ ಎನ್ನುತ್ತಾರೆ ಹಲಸು ಮಾರಾಟಗಾರ ನೆಲ್ಲುಕುಂಟೆ ಮಂಜುನಾಥ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್ ಸಮಸ್ಯೆ
Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ
Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್ ಸ್ಪರ್ಧೆ
Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ
Road Dispute: ರಸ್ತೆ ವಿವಾದ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!