

Team Udayavani, Sep 11, 2020, 12:02 PM IST
ದೇವನಹಳ್ಳಿ: ತಾಲೂಕಿನಲ್ಲಿ ಮಂಗಳವಾರ ಮತ್ತು ಬುಧವಾರ ಸುರಿದ ಉತ್ತಮ ಮಳೆಯಿಂದಾಗಿ ಕೆರೆ, ಕುಂಟೆಗಳಿಗೆ ಅಲ್ಪ ಪ್ರಮಾಣದಲ್ಲಿ ನೀರು ಬಂದಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ತಾಲೂಕಿನ ಕೊಯಿರಾ ಗ್ರಾಮದ ಕೆರೆಯಲ್ಲಿ ರೋಟರಿ ಸಂಸ್ಥೆ ವತಿಯಿಂದ ಇತ್ತೀಚೆಗೆ ಹೂಳೆತ್ತಲಾಗಿತ್ತು. ಇನ್ನೊಂದು ಮಳೆಯಾದರೆ ಕೆರೆ ಕೋಡಿ ಹರಿಯುತ್ತಿತ್ತು. ಮಳೆಯಿಂದಾಗಿ ಈ ಭಾಗದ ಜ್ಯೋತಿಪುರ ಕಲ್ಯಾಣಿ, ಇತರೆ ಕುಂಟೆಗಳು ಜಲಾವೃತವಾಗಿವೆ. ತಾಲೂಕಿನ ಅಣ್ಣೇಶ್ವರ ಗ್ರಾಮದ ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿರುವುದರಿಂದ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿದೆ. ಸ್ಥಳೀಯ ಗ್ರಾಪಂ ಕಸ ಹಾಕುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕೆಂದು ರೈತ ಮುನಿರಾಜು ಆಗ್ರಹಿಸಿದ್ದಾರೆ.
ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಕರೀಗೌಡ ನೇತೃತ್ವದಲ್ಲಿ ಹಲವು ಕೆರೆಗಳ ಅಭಿವೃದ್ಧಿಗೆ ಹೂಳೆತ್ತಲಾಗಿತ್ತು. ಪರಿಣಾಮ ಕೆರೆಗಳಲ್ಲಿ ನೀರು ತುಂಬಿಕೊಂಡು ಅಂತರ್ಜಲಮಟ್ಟ ಹೆಚ್ಚಾಗಲು ಸಹಕಾರಿಯಾಗಿದೆ. ತಾಲೂಕಿನಲ್ಲಿ 92ಮಿ.ಮೀ ಮಳೆಯಾಗಿದ್ದು, ಕುಂದಾಣ ಹೋಬಳಿಯಲ್ಲಿ 14ಮಿ.ಮೀ, ವಿಜಯಪುರ ಹೋಬಳಿ 17ಮಿ.ಮೀ, ಚನ್ನರಾಯಪಟ್ಟಣ ಹೋಬಳಿ 33ಮಿ. ಮೀ, ದೇವನಹಳ್ಳಿ ಕಸಬಾ ಹೋಬಳಿ 28ಮಿ.ಮೀಮಳೆಯಾಗಿದೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ ತಿಳಿಸಿದ್ದಾರೆ.
Ad
Nelamangala: ಬಸ್ ಕಲ್ಪಿಸಿಕೊಟ್ಟ ಶಾಸಕ ಎನ್. ಶ್ರೀನಿವಾಸ್ ಗೆ ಗ್ರಾಮಸ್ಥರಿಂದ ಅಭಿನಂದನೆ
Nelamangala: ಪ್ಲೈವುಡ್ ಗೋದಾಮಿನಲ್ಲಿ ಬೆಂಕಿ; ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ
ಅಶ್ಲೀ*ಲ ಮೆಸೇಜ್ ಮಾಡಿದ್ದಕ್ಕೆ ಯುವಕನ ಕಿಡ್ನಾಪ್: ರೇಣುಕಾಸ್ವಾಮಿ ಹೆಸರು ಹೇಳಿ ಹಲ್ಲೆ
ಗ್ರಾಮಾಂತರ ಇನ್ಮುಂದೆ ಬೆಂಗಳೂರು ಉತ್ತರ ಜಿಲ್ಲೆ
Road Mishap: ಲಾರಿ ಓವರ್ ಟೇಕ್ ಭರದಲ್ಲಿ ಕಾರು ಪಲ್ಟಿ; ನಾಲ್ವರು ಸ್ಥಳದಲ್ಲೇ ದುರ್ಮರಣ
You seem to have an Ad Blocker on.
To continue reading, please turn it off or whitelist Udayavani.