ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕಟಿ ಬದ್ಧ
ನಿತ್ಯ ಸಚಿವರೊಂದಿಗೆ ಸಮಾಲೋಚನೆ; ಕಂದಾಯ ಸಚಿವ ಅಶೋಕ್ ಭರವಸೆ
Team Udayavani, Apr 22, 2020, 5:45 PM IST
ಆನೇಕಲ್: ಕೋವಿಡ್ ನಿಯಂತ್ರಣಕ್ಕೆ ಮುಖ್ಯಮಂತ್ರಿಗಳು ನನ್ನನ್ನು ಸೇರಿದಂತೆ ಹಲವು ಮಂತ್ರಿಗಳು ಪ್ರತಿದಿನ ಸಭೆ ನಡೆಸುತ್ತಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಕಟಿ
ಬದ್ಧವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಜಿಗಣಿ ನಿತ್ಯಾನಂದ ಶಾಲಾ ಆವರಣದಲ್ಲಿ ಆಹಾರ ಕಿಟ್ ವಿತರಿಸಿ ಸುದ್ದಿಗಾರೊಂದಿಗೆ ಮಾತನಾಡಿ, ದೇಶದಲ್ಲಿ ಕೇರಳ ಬಿಟ್ಟರೆ ನಮ್ಮ ರಾಜ್ಯವೇ ಕೋವಿಡ್ ನಿಯಂತ್ರಣ ಸಾಧಿಸಿದೆ. ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಬೆಂಗಳೂರಿನಲ್ಲಿ
ಕಳೆದ ಎರಡು ದಿನಗಳಿಂದ ಪ್ರಕರಣದ ವರದಿಯಾಗಿಲ್ಲ. ಮೈಸೂರು, ಬೆಳಗಾವಿ, ಬಾಗಲಕೋಟೆಗಳಲ್ಲಿ ಹೆಚ್ಚು ನಿಗಾ ವಹಿಸುವ ಸಿದ್ಧತೆಯಲ್ಲಿ ಸರ್ಕಾರ ಕಾರ್ಯ ಪ್ರವೃತ್ತವಾಗಿದೆ
ಎಂದು ಹೇಳಿದರು.
ಕೇರಳ ಮತ್ತು ಉತ್ತರ ಪ್ರದೇಶದ ಮಾದರಿಲ್ಲೇ ಕಾಯ್ದೆ ಜಾರಿಗೊಳಿಸುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಕಾನೂನು ಸಚಿವರು ಅದರ ಜವಾಬ್ದಾರಿ ಹೊತ್ತು ನಿಯಮ ರೂಪಿಸುತ್ತಿದ್ದಾರೆ. ಕೇರಳ ಮತ್ತು ಉತ್ತರ ಪ್ರದೇಶದ ಕಾಯ್ದೆಗಳಿಗಿಂತ ಕಠಿಣವಾಗಲಿದೆ ಎಂದು ಹೇಳಿದರು. ಪ್ರಕೃತಿ ವಿಕೋಪದಿಂದ ನಷ್ಟವಾದ ಬೆಳೆಗಳಿಗೆ ಪರಿಹಾರವಾಗಿ ತಾಲೂಕಿಗೆ ಸುಮಾರು 45 ಕೋಟಿ ಬಿಡುಗಡೆಯಾಗಿದೆ. ಕೊರೊನಾ ಹಿನ್ನಲೆಯಲ್ಲಿ ರೈತರಿಗೆ ಆಗುತ್ತಿರುವ ನಷ್ಟ ತಡೆಯಲು ಮುಖ್ಯಮಂತ್ರಿಗಳು ಚರ್ಚೆ ನಡೆಸುತ್ತಿದ್ದಾರೆ.
ಸೂಕ್ತ ರೀತಿಯಾಗಿ ಸರ್ಕಾರ ಸ್ಪಂದಿಸಲಿದೆ ಎಂದು ಅವರು ಹೇಳಿದರು.ಶಾಸಕ ಎಂ.ಕೃಷ್ಣಪ್ಪ ಮಾತನಾಡಿದರು. ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜಶೇಖರ ರೆಡ್ಡಿ, ಮಾಜಿ ಅಧ್ಯಕ್ಷ ರಮೇಶ್ ಜಿಪಂ ಸದಸ್ಯ ವೆಂಕಟೇಶ್ ಗೌಡ, ಪುರಸಭೆ ಸದಸ್ಯ ಮಲ್ಲಿಗೆ ಆನಂದ್, ಮರಿಯಪ್ಪ, ನಾಗೇಶ್, ಪವಿತ್ರ ಬಾಬು, ಶಾಂತಕುಮಾರ್, ಮಾಜಿ ಗ್ರಾಪಂ ಅಧ್ಯಕ್ಷ ರಾಜಣ್ಣ, ಮುಖಂಡ ಮುನಿರಾಜು, ಶಿವರಾಮರೆಡ್ಡಿ, ಮೊದಲಾದವರಿದ್ದರು.
ಸಹಿಸಲಾಗುವುದಿಲ್ಲ..
ಪಾದರಾಯನಪುರ ಘಟನೆ ಸಹಿಸಿಕೊಳ್ಳುವಂತಹದ್ದಲ್ಲ. ಹಲವರನ್ನು ಈಗಾಗಲೇ ಬಂಧಿಸಲಾಗಿದ್ದು, ಜೈಲಿನಲ್ಲಿದ್ದಾರೆ. ಇಂತಹ ಗೂಂಡಾಗಳನ್ನು ಸೆದೆ ಬಡಿಯಲು ಹೊಸ ಕಾಯ್ದೆ
ತರುತ್ತಿದ್ದೆವೆ. 2-3 ದಿನಗಳಲ್ಲಿ ಸುಗ್ರೀವಾಜ್ಞೆ ತಂದು ಸಮಾಜ ಘಾತುಕ ಶಕ್ತಿಗಳನ್ನು ಮಟ್ಟಹಾಕಲಾಗುವುದು ಎಂದು ಸಚಿವ ಅಶೋಕ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ