ಆರೋಗ್ಯ ಸಿಬ್ಬಂದಿಗೆ ಪ್ರಶಂಸೆ ಪತ್ರ
Team Udayavani, Jul 16, 2021, 7:11 PM IST
ದೊಡ್ಡಬಳ್ಳಾಪುರ: ಕೋವಿಡ್-19 3ನೇಅಲೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿರಾಜ್ಯದಲ್ಲಿಯೇ ಮೊದಲ ಬಾರಿಗೆ ಜಾರಿಗೊಳಿಸಲಾದ ಮಕ್ಕಳ ತಜ್ಞರ ನಡೆ ಹಳ್ಳಿಯಮಕ್ಕಳ ಕಡೆಗೆ ಕಾರ್ಯಕ್ರಮ 28 ದಿನಗಳನಂತರ ಸಮಾರೋಪಗೊಂಡಿತು.ತಂಡದಲ್ಲಿ ಭಾಗಿಯಾದ ವೈದ್ಯಕೀಯತಂಡದ ಸಿಬ್ಬಂದಿಗೆ ಶಾಸಕ ಟಿ.ವೆಂಕಟರಮಣಯ್ಯ ಪ್ರಶಂಸೆ ಪತ್ರ ವಿತರಿಸಿದರು.
ಪೌಷ್ಟಿಕಾಂಶದ ಅರಿವು: ತಹಶೀಲ್ದಾರ್ಟಿ.ಎಸ್.ಶಿವರಾಜ್ ಮಾತನಾಡಿ, ಕೋವಿಡ್ ಹಿನ್ನೆಲೆ ರಾಜ್ಯದಲ್ಲಿ ಪ್ರಥಮ ಬಾರಿಗೆಜಾರಿ ಮಾಡಲಾಗಿದ್ದ ಮಕ್ಕಳ ತಜ್ಞರ ನಡೆಹಳ್ಳಿಯ ಮಕ್ಕಳ ಕಡೆಗೆ ಕಾರ್ಯಕ್ರಮಯಶಸ್ವಿಯಾಗಿ ನೆರವೇ ರಿದೆ. ವೈದ್ಯರ ಈತಂಡ ತಾಲೂಕಿನ ಗ್ರಾಮ ಗಳಿಗೆ ತೆರಳಿಗೆ31233 ಮಕ್ಕಳನ್ನು ತಪಾ ಸಣೆ ನಡೆಸಿದ್ದು,ಅಪೌಷ್ಟಿಕ ಮಕ್ಕಳನ್ನು ಗುರುತಿಸಿ, ಪೌಷ್ಟಿಕ ಆಹಾರದ ಕಿಟ್ ವಿತರಿಸಿದೆ.
ಕೋವಿಡ್ಸಂದರ್ಭ ನಮಗೆ ಜೀವ ನದ ವಾಸ್ತವತೆಯ ಅರಿವು ಮೂಡಿಸಿದೆ ಎಂದರು.ಕೋವಿಡ್ ನಿರ್ವಹಣೆಯಲ್ಲಿ ಶಾಸಕರಸಹಕಾರ ಮಾರ್ಗದರ್ಶನಾಪರವಾಗಿದ್ದು,ಯೋಜನೆಯಲ್ಲಿ ಪಾಲ್ಗೊಂಡ ಎÇÉಾಸಿಬ್ಬಂದಿಗಳ ಪಾತ್ರ ಪ್ರಶಂಸನೀಯಎಂದರು. ಶಾಸಕ ಟಿ.ವೆಂಕಟರಮಣಯ್ಯಮಾತನಾಡಿ, ತಾಲೂಕಿನಲ್ಲಿ ಮಕ್ಕಳತಪಾಸಣೆ ಮಾಡಿ ಅವರ ಸ್ಥಿತಿಗತಿ ಬಗ್ಗೆವರದಿ ನೀಡಿದ್ದರಿಂದ ಮುಂದಿನ ಕ್ರಮವಹಿಸಲು ಅನುಕೂಲವಾಗಲಿದೆ.
ಗುರುತಿಸಲಾದ ಅಪೌಷ್ಟಿಕ ಮಕ್ಕಳನ್ನು ಸ್ಥಳೀಯಆರೋಗ್ಯ ಕೇಂದ್ರಗಳು, ಅಂಗನವಾಡಿಕೇಂದ್ರಗಳ ಮೂಲಕ ಪಾಲನೆ ಮಾಡಬೇಕಿದೆ. ಅಲ್ಲದೆ ಹೃದಯ ಸಂಬಂಧಿ,ಕಿಡ್ನಿಸಂಬಂಧಿತ ಹಾಗೂ ಇತರೆ ಕಾಯಿಲೆಗಳಹೆಚ್ಚಿನ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆಕೊಡಿಸಲು ಬೆಂಗಳೂರಿನ ಆಸ್ಪತ್ರೆಗಳಿಂದವಿಶೇಷ ತಜ್ಞರ ಶಿಬಿರ ಆಯೋಜಿಸಿ,ವೈದ್ಯರು, ಸಿಬ್ಬಂದಿ ಯಾವುದೇ ಆತಂಕಕ್ಕೆಒಳಗಾಗದೆ ನಿರ್ಭಯವಾಗಿ ಕೆಲಸಮಾಡುವಂತೆ ಸಲಹೆ ನೀಡಿದರು. ಈವೇಳೆ ತಾಲೂಕು ಆರೋಗ್ಯಾಧಿಕಾರಿಡಾ.ಪರಮೇಶ್ವರ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ