“ಹುಲಿಕಲ್ ನಟರಾಜ್ ನಿಧನ” ವದಂತಿ: ದೂರು
Team Udayavani, May 8, 2021, 3:40 PM IST
ದೊಡ್ಡಬಳ್ಳಾಪುರ: ಕಳೆದೆರಡು ದಿನಗಳಿಂದ ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ ಅವರ ನಿಧನದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಕುರಿತು ಆರೋಗ್ಯವಾಗಿ ಇರುವುದಾಗಿ ಸ್ಪಷ್ಟನೆ ನೀಡಿರುವ ಹುಲಿಕಲ್ ನಟರಾಜ್ ಸುದ್ದಿ ಹರಿಬಿಟ್ಟವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಕೃತ ಮನಸ್ಸಿನವರು: ನಿಧನ ವದಂತಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು, ಹಿತೈಷಿಗಳು, ಸ್ವಾಮೀಜಿಗಳು ಗಣ್ಯರಿಂದ ಹಿಡಿದು ಸಾರ್ವಜನಿಕ ವಲಯದಿಂದ ಸಂತಾಪದ ಪೋಸ್ಟರ್ ಹರಿದಾಡಿದ್ದವು. ಈ ಕುರಿತಂತೆ ಸ್ಪಷ್ಟನೆ ನೀಡಿ,ಇಂಥ ಸುಳ್ಳು ಸುದ್ದಿಗಳನ್ನು ಏಕೆ ಹರಿಬಿಡು ತ್ತಾರೋ ತಿಳಿಯ ದಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ವಿಕೃತ ಮನಸ್ಸಿನ ವ್ಯಕ್ತಿಗಳ ವಿರುದ್ಧ ಕಾನೂನುಕ್ರಮ ಜರುಗಿ ಸಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಠಾಣೆಗೆ ದೂರು: ಹುಲಿಕಲ್ ನಟರಾಜ್ ಕಿಡಿಗೇಡಿಗಳ ವಿರುದ್ಧ ದೊಡ್ಡಬಳ್ಳಾಪುರ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಹುಲಿಕಲ್ ನಟ ರಾಜ್ ತಿಳಿಸಿದ್ದಾರೆ. ರಕ್ಷಿತ್ ಈರಪ್ಪ ಎಂಬವರು ಮೊದಲಿಗೆ ಈ ಪೋಸ್ಟ್ ಹರಿಬಿಟ್ಟಿದ್ದಾರೆ.ಅದನ್ನು ಫಾರ್ವರ್ಡ್ ಮಾಡಿ ಹುಲಿಕಲ್ನಟರಾಜ್ ಕೋವಿ ಡ್ಗೆ ಬಲಿ ಎಂದು ಮತ್ತೂಬ್ಬ ಕೆ.ಎಂ.ಸುಬ್ಬೇಗೌಡ ಎಂಬವರು ಪೋಸ್ಟ್ ಮಾಡಿದ್ದು ಇವರಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ವಾಮಾಚಾರದ ನಂಟು?: ಇತ್ತೀಚೆಗೆಹಾಸನದ ಪಂಡಿತ್ ಕಾರ್ತಿಕ್ ಎಂಬವ್ಯಕ್ತಿ ವಾಮಾಚಾರ ಮಾಡುವುದಾಗಿಹೇಳಿದ್ದ. ಏತನ್ಮಧ್ಯೆ ವದಂತಿ ಹಬ್ಬುತ್ತಿದ್ದಂತೆ ಗಾಬರಿಯಾದ ಕಾರ್ತಿಕ್ ಕ್ಷಮೆಯಾಚಿಸಿದ್ದಾನೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ಕಾಂಗ್ರೆಸ್ ಪುರಸಭೆ ಸದಸ್ಯನ ಭೀಕರ ಹತ್ಯೆ; ಆನೇಕಲ್ನಲ್ಲಿ ಉದ್ವಿಗ್ನ ಸ್ಥಿತಿ
Ganja peddler: ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಗಾಂಜಾ ಪೆಡ್ಲರ್ಗೆ ಗುಂಡೇಟು; ಸೆರೆ
Assembly Electionನಲ್ಲಿ ಮೈತ್ರಿಗೆ ದೇವೇಗೌಡರು ಒಪ್ಪಲಿಲ್ಲ: ಅಶೋಕ್
Devanahalli: ಗ್ರಾಮ ಪಂಚಾಯಿತಿಗಳಲ್ಲಿ ಇ- ಜನ್ಮ ದಾಖಲೆ
Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್ ಅಡ್ಡೆಯಾದ ಹೆದ್ದಾರಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.