ನೀರಿನ ಕೊರತೆಯಿಂದ ಆಹಾರಕ್ಕೆ ಕೊಕ್ಕರೆಗಳ ಪರದಾಟ


Team Udayavani, May 23, 2022, 3:44 PM IST

ನೀರಿನ ಕೊರತೆಯಿಂದ ಆಹಾರಕ್ಕೆ ಕೊಕ್ಕರೆಗಳ ಪರದಾಟ

ದೇವನಹಳ್ಳಿ: ತಾಲೂಕಿನ ಆಲೂರು ದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡಕೆರೆಯಾದ ಬನ್ನಿಮಂಗಲ ಕೆರೆಯಲ್ಲಿ ಕೊಕ್ಕರೆಗಳ ಕಲರವದ ದೃಶ್ಯ ನೋಡಬಹುದಾಗಿದೆ. ಮಳೆಯಿಂದಾಗಿ ಕೆರೆಯ

ತಳಭಾಗದಲ್ಲಿ ಒಂದಿಷ್ಟು ನೀರಿನಲ್ಲಿ ಮೀನುಗಾರಿಕೆ ಇಲಾಖೆಯವರು ಮೀನುಮರಿಗಳನ್ನು ಟೆಂಡರ್‌ ಮೂಲಕ ಬಿಡಲಾಗಿದೆ. ಮೀನುಗಳನ್ನು ತಿಂದು ಬದುಕುವಂತಹ ಕೊಕ್ಕರೆಗಳಿಗೆ ಮತ್ತು ಮೀನುಗಳಿಗೆ ಕೆರೆಯಲ್ಲಿರಬೇಕಾದಷ್ಟು ನೀರು ಇಲ್ಲದಿರುವುದು ವಿಪರ್ಯಾಸವಾಗಿದೆ.

ಪಕ್ಷಿಗಳ ಕಲರವದಿಂದ ಹೊಸ ಕಳೆ: ಬನ್ನಿಮಂಗಲ ಕೆರೆಯಲ್ಲಿ ದಕ್ಷಿಣ ಭಾರತದ ಕೊಕ್ಕರೆ ಪ್ರಭೇದಗಳ ಅವಾಸಸ್ಥಾನವಾಗಿರುವುದರಿಂದ ಸಾಮಾನ್ಯವಾಗಿ ಇಲ್ಲಿಗೆ ಮಧ್ಯ ಏಷ್ಯಾದ ಗ್ರೇಹೆರಾನ್‌, ವೈಟ್‌ ಪೆಲಿಕಾನ್‌, ಗ್ರೇವೆಲಿಕಾನ್‌, ಪೈಂಟೆಂಡ್‌ ಸ್ಟ್ರಾಕ್‌ ಇತ್ರೆ ಹೊಸ ಪ್ರಭೇದಗಳ ಪಕ್ಷಿಗಳು ಬಂದು ಕೆರೆಗೆ ಮತ್ತಷ್ಟು ಮೆರಗು ನೀಡಲಿವೆ. ಸರ್ಕಾರ ಇಂತಹ ಕೆರೆಗಳಿಗೆ ಮೊದಲ ಆದ್ಯತೆ ನೀಡಿದರೆ, ಇಲ್ಲಿನ ವಾತಾವರಣ ಕೊಕ್ಕರೆ ಬೆಳ್ಳೂರಿನಂತೆ ಕಂಗೊಳಿಸುವಲ್ಲಿ ಎರಡು ಮಾತಿಲ್ಲ.

ಸಾಮಾನ್ಯವಾಗಿ ಪೆಲಿಕಾನ್‌ ಪಕ್ಷಿಗಳು ಹೆಚ್ಚಿನ ನೀರಿರುವ ಕೆರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ. ಪ್ರಸ್ತತ ತಾಲೂಕಿನ ಬನ್ನಿಮಂಗಲ ಕೆರೆಯಲ್ಲಿ ಹೆಚ್ಚು ನೀರು ಇಲ್ಲದಿದ್ದರೂ ಸಹ ಇರುವ ನೀರಿನಲ್ಲಿ ಮೀನುಗಳಿರುವುದರಿಂದ ಆಹಾರಕ್ಕಾಗಿ ಪಕ್ಷಿಗಳು ಬೆಳ್ಳಂಬೆಳಗ್ಗೆ ಗುಂಪು ಗುಂಪಾಗಿರುವುದನ್ನು ಕಾಣಬಹುದು.

ಅಂತರ್ಜಲ ಹೆಚ್ಚಿಸಿ: ಕೆರೆಯು ಸುಮಾರು ಎಕರೆಯಷ್ಟು ವಿಸ್ತೀರ್ಣ ಹೊಂದಿರುವುದರಿಂದ ಈ ಹಿಂದೆ ಸರ್ಕಾರದ ಹಂತದಲ್ಲಿ ಶುದ್ಧೀಕರಿಸಿದ ನೀರನ್ನು ಬಿಡಲು ಪ್ರಸ್ತಾಪಿಸಲಾಗಿತ್ತು. ದುರದೃಷ್ಟವಷತ್‌ ಕೆರೆಗೆ ಪೈಪ್‌ಲೇನ್‌ ಸಹ ಆಗಿಲ್ಲ. ಬನ್ನಿಮಂಗಲದ ಕೆರೆಯಲ್ಲಿ ತಮಿಳು ಗ್ರಂಥಲಿಪಿ ಶಾಸನವೂ ಸಹ ಇದ್ದು, ಕೆರೆಗೆನೀರು ಹಾಯಿಸಿದರೆ ಅಂತರ್ಜಲ ಹೆಚ್ಚಾಗಿ ಈ ಭಾಗದಲ್ಲಿ ಹಚ್ಚ ಹಸಿರಿನ ಸಮೃದ್ಧ ವಾತಾವರಣಸೃಷ್ಟಿಯಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ನೀರಿನ ಕೊರತೆಯಲ್ಲೂ ಆಹಾರ ಅರೆಸಿ ಬರುವಂತಹ ಕೊಕ್ಕರೆಗಳು ಕೆರೆಯಂಗಳದಲ್ಲಿಬಿಡಾರಹೂಡಿದ್ದು ನೋಡುಗರ ಕಣ್ಮನಸೆಳೆಯುತ್ತಿವೆ. ಕೆರೆಗೆ ಮರುಜೀವ ನೀಡಲು ಸರ್ಕಾರ

ಮುಂದಾಗಲಿ: ಬಿರು ಬೇಸಿಗೆಯಲ್ಲಿ ಬತ್ತಿಹೋಗುವ ಕೆರೆಗೆ ಮರುಜೀವ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಕೆರೆ ಅಭಿವೃದ್ಧಿಪಡಿಸಿ ವರ್ಷ ಕಳೆಯುತ್ತಿದ್ದರೂ ಸಹ ಕೆರೆಯ ಮಡಿಲು ಮಾತ್ರಬರಿದಾಗಿದೆ. ಕಳೆದ ವರ್ಷದಲ್ಲಂತೂ ಕೆರೆಯಲ್ಲಿಒಂದು ತೊಟ್ಟು ನೀರು ಸಹ ಇರಲಿಲ್ಲ. ಇದೀಗ ಮಳೆಯಿಂದಾಗಿ ಅಲ್ಪಸ್ವಲ್ಪ ನೀರು ಕಾಣಿಸುತ್ತಿದೆ. ಕೈಗಾರಿಕಾ ಪ್ರದೇಶವಾಗಿರುವ ದೊಡ್ಡಬಳ್ಳಾಪುರತಾಲೂಕಿನ ಗಡಿಯಂಚಿನಲ್ಲಿರುವ ಈ ಕೆರೆಯೂದೊಡ್ಡಬಳ್ಳಾಪುರದಿಂದ ಸುಮಾರು 10 ಕಿ.ಮೀ.ದೂರದಲ್ಲಿದೆ. ಆಲೂರುದುದ್ದನಹಳ್ಳಿ ಗ್ರಾಪಂಗೆಸೇರಿರುವ ಕೆರೆಗೆ ಮರುಜೀವ ನೀಡುವ ಕೈಂಕರ್ಯಕ್ಕೆ ಸರ್ಕಾರ ಮುಂದಾಗಬೇಕಾಗಿದೆ.

ಬಿರು ಬೇಸಿಗೆಯಲ್ಲಿ ಪಕ್ಷಿ ಪ್ರಭೇದಗಳಿಗೆ ಕೆರೆ, ಕುಂಟೆ ಮತ್ತು ಇತರೆ ನೀರಿನ ಮೂಲಗಳೇ ಜೀವಾಳ. ಆದರೆ, ಬನ್ನಿಮಂಗಲ ಕೆರೆಯಲ್ಲಿ ನೀರಿಲ್ಲದೆ ಬರಿದಾಗುತ್ತಿರುವುದು ಪಕ್ಷಿಗಳ ಅವನತಿಗೆ ಮತ್ತು ಕೆರೆಯ ನಿರ್ಲಕ್ಷ್ಯತನಕ್ಕೆ ಕೈಗನ್ನಡಿಯಾಗಿದೆ. – ಮೀನಾಕುಮಾರಿ, ಗ್ರಾಪಂ ಸದಸ್ಯೆ, ಆಲೂರುದುದ್ದನಹಳ್ಳಿ

ನೀರಿನ ಕೊರತೆಯಲ್ಲೂ ಮುಂಜಾನೆಯಲ್ಲಿ ಪಕ್ಷಿಗಳ ಕಲರವನ್ನು ಕೆರೆಯಲ್ಲಿ ನೋಡಬಹುದು. ಸರ್ಕಾರದ ನಿರ್ಲಕ್ಷ್ಯದಿಂದಕೆರೆಗೆ ನೀರು ಬಂದಿಲ್ಲ. ಆಲೂರು ದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬನ್ನಿ ಮಂಗಲ ಕೆರೆಯೂ ದೊಡ್ಡಕೆರೆಯಾಗಿರುವು ದರಿಂದ ಈ ಕೆರೆಗೆ ಆದಷ್ಟು ಬೇಗ ನೀರು ತುಂಬಿಸಲು ಸರ್ಕಾರ ಮನಸ್ಸು ಮಾಡಬೇಕು. – ಆರ್‌.ರಘು, ಗ್ರಾಪಂ ಸದಸ್ಯ, ಆಲೂರುದುದ್ದನಹಳ್ಳಿ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.