ವೀರ ಮಹಿಳೆಯ ಅಪರೂಪದ ವೀರಗಲ್ಲು ಪತ್ತೆ


Team Udayavani, Mar 6, 2023, 2:24 PM IST

tdy-8

ದೇವನಹಳ್ಳಿ: ವಿಶ್ವನಾಥಪುರ ಗ್ರಾಮದಲ್ಲಿನ ಖಾಸಗಿ ಜಮೀನೊಂದರಲ್ಲಿ ಹುದಗಿ ಹೋಗಿದ್ದ ವೀರಗಲ್ಲುಗಳನ್ನು ಹೊರತೆಗೆದು ಸಂರಕ್ಷಿಸಲಾಗಿದೆ. ವೀರ ಮಹಿಳೆಯನ್ನು ಹೊಂದಿರುವ ವೀರಗಲ್ಲು ದೊರೆತಿರುವುದು ಅಪರೂಪವಾಗಿದೆ ಎಂದು ಇತಿಹಾಸ ಸಂಶೋಧಕ ಬಿಟ್ಟಸಂದ್ರ ಬಿ.ಜಿ. ಗುರುಸಿದ್ಧಯ್ಯ ಹೇಳಿದರು.

ತಾಲೂಕಿನ ವಿಶ್ವನಾಥಪುರ ಗ್ರಾಮದಲ್ಲಿ ಸುಮಾರು 2 ವರ್ಷದಿಂದ ಗ್ರಾಮದಲ್ಲಿ ಶಾಸನ ಮತ್ತು ವೀರಗಲ್ಲು ಇದೆ ಎಂದು ಹುಡುಕಾಟ ಮಾಡಲಾಗುತ್ತಿತ್ತು. ಇಲ್ಲಿನ ಖಾಸಗಿ ಜಮೀನಿನ ನೀಲಗಿರಿ ತೋಪಿನಲ್ಲಿ ಒಂದೆರಡು ವೀರಗಲ್ಲುಗಳಿವೆ ಎಂದು ಮಾಹಿತಿ ತಿಳಿದು ಪತ್ತೆಗಾಗಿ ಬೆನ್ನಟ್ಟಲಾಯಿತು. ಈ ಸಂದರ್ಭದಲ್ಲಿ ಖಾಸಗಿ ಜಮೀನಿನಲ್ಲಿದ್ದ ವೀರಗಲ್ಲು ಪ್ರದೇಶದಲ್ಲಿ ನಿಧಿಗಾಗಿ ಕೆಲವರು ಯತ್ನಿಸಿ ರುವುದು ಸಹ ಕಂಡು ಬಂದಿರುತ್ತದೆ. ಕೂಡಲೇ ಎರಡೂ ವೀರಗಲ್ಲು ಕಲ್ಲುಗಳಿದ್ದ ಜಾಗವನ್ನು ಸಂರಕ್ಷಿಸುವ ಸಂದ ರ್ಭದಲ್ಲಿ ಮತ್ತೆರಡು ವೀರಗಲ್ಲುಗಳು ಮತ್ತು ಒಂದು ಶಾಸನ ಕಲ್ಲು ದೊರೆತಿದೆ. ಇದೊಂದು ಐತಿಹಾಸಿಕ ವೀರ ಗಲ್ಲು ಆಗಿರುವುದರಿಂದ ಸ್ಥಳೀಯ ಗ್ರಾಪಂಗೆ ಮಾಹಿತಿ ನೀಡಲಾಯಿತು. ಗ್ರಾಪಂ ಅವರ ಸಹಕಾರ ಪಡೆದು ಭೂಮಿಯಲ್ಲಿ ಹುದಗಿದ್ದ ವೀರಗಲ್ಲುಗಳನ್ನು ಜೆಸಿಬಿ ಮೂಲಕ ಹೊರತೆಗೆದು ಸಂರಕ್ಷಿಸಲಾಗಿದೆ ಎಂದರು.

ಸುಮಾರು 8-9ನೇ ಶತಮಾನಗಳ ಇತಿಹಾಸವನ್ನು ಹೊಂದಿರುತ್ತದೆ. ಈ ವೀರಗಲ್ಲುಗಳು ಅಪರೂಪದ ತುರುಗೋಳ್‌ ವೀರಗಲ್ಲಾಗಿದ್ದು, ನಾಲ್ಕು ವೀರಗಲ್ಲುಗಳ ಪೈಕಿ ಒಂದು ವಿಶೇಷವಾಗಿದೆ. ದೊರೆತಿರುವ ಒಂದು ತೃಟಿತ ಶಾಸನವನ್ನು ಮೈಸೂರಿನಲ್ಲಿನ ಶಾಸನ ತಜ್ಞರಿಗೆ ಕಳುಹಿಸಿಕೊಟ್ಟಾಗ ಅವರು ಹೇಳಿರುವ ಪ್ರಕಾರ ಈ ಹಿಂದೆ ಈ ಪ್ರದೇಶದಲ್ಲಿ ಘೋರವಾದ ಯುದ್ಧವಾಗಿದೆ ಎಂದು ಅಂದಾಜಿಸಲಾಗಿದೆ. ಈ ಕಲ್ಲಿನಲ್ಲಿ ಕೆತ್ತಲ್ಪಟ್ಟವಲ್ಲಿ ಅಶ್ವ, ಅಶ್ವದ ಮೇಲೆ ಛತ್ರಿ, ಸ್ವರ್ಗ ಆರೋಹಣ, ಮಹಿಳೆ/ಸರದಾರನ ಅದ್ಭುತ ಚಿತ್ರ ವ ನ್ನು ಕಾಣಬಹುದಾಗಿದೆ. ಯುದ್ಧ ದಲ್ಲಿ ಮಡಿದಾಗ ಇದನ್ನು ಈ ಜಾಗದಲ್ಲಿ ಇಡಲಾಗಿ ತ್ತೆಂದು ಹೇಳಲಾಗುತ್ತಿದೆ ಎಂದು ವಿವರಣೆ ನೀಡಿದರು.

ವಿಶ್ವನಾಥಪುರ ಗ್ರಾಪಂ ಕಾರ್ಯದರ್ಶಿ ಪದ್ಮಮ್ಮ ಕೆ.ವಿ.ಸ್ವಾಮಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಈ ತರಹದ ಬೃಹತ್‌ ಕಲ್ಲುಗಳ ವೀರಗಲ್ಲುಗಳಿವೆ ಎಂದು ಸಾಹಿತಿ ಬಿಟ್ಟಸಂದ್ರ ಗುರುಸಿದ್ಧಯ್ಯ ಅವರು ಗ್ರಾಪಂಗೆ ಮಾಹಿತಿ ನೀಡಿದಾಗ ಕೂಡಲೇ ಗ್ರಾಪಂಯಿಂದ ಸ್ಥಳ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ ಎರಡು ವೀರಗಲ್ಲು ಮಾತ್ರ ಇರುವುದು ತಿಳಿಯಿತು. ಆ ವೀರಗಲ್ಲುಗಳನ್ನು ತೆಗೆಯುವಾಗ ಮತ್ತೆರಡು ವೀರಗಲ್ಲುಗಳು ದೊರೆತಿರುತ್ತದೆ. ಇದು ವಿಶ್ವನಾಥಪುರದ ಇತಿಹಾಸವನ್ನು ತಿಳಿಸುವಂತಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲೆ ವೀರಗಲ್ಲುಗಳು, ಶಾಸನಗಳು ದೊರೆತಲ್ಲಿ ಕೂಡಲೇ ಗ್ರಾಮಸ್ಥರು ಮಾಹಿತಿ ನೀಡಿದರೆ, ಇಂಥ ಹಲವಾರು ಐತಿಹಾಸಿಕ ಘಟನಾವಳಿಯನ್ನು ಮೆಲುಕು ಹಾಕುವಂತೆ ಆಗುತ್ತದೆ ಎಂದರು.

ವಿಶ್ವನಾಥಪುರ ಗ್ರಾಮದ ಮುಖಂಡ ನಾರಾಯಣಸ್ವಾಮಿ, ಗ್ರಾಪಂ ಸಿಬ್ಬಂದಿ ಇತರರು ಇದ್ದರು.

ವಿಶ್ವನಾಥಪುರ ಗ್ರಾಮದ ಇತಿಹಾಸ : ಪ್ರಸ್ತುತ ಹೆಸರಿಸಿರುವ ವಿಶ್ವನಾಥಪುರ ಗ್ರಾಮಕ್ಕೆ ಶತಮಾನಗಳ ಹಿಂದೆ ಗ್ರಾಮದ ಹಿರಿಯರು ಕಾಶಿಯಲ್ಲಿ ಕಾಶಿಗೆ ಹೋಗಿ, ಕಾಶಿಯಿಂದ ವಿಶ್ವನಾಥನ ಲಿಂಗವನ್ನು ಇಲ್ಲಿಗೆ ತಂದು, ಆ ಲಿಂಗವನ್ನು ರಾಷ್ಟ್ರೀಯ ಹೆದ್ದಾರಿ 7ರ ಪಕ್ಕವಿರುವ ಪ್ರಾಚೀನ ಶಿಲಾ ಕಟ್ಟಡದಲ್ಲಿ ಕಟ್ಟಡ ನಿರ್ಮಿಸಿ ಶಿವ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಅಂದಿನಿಂದ ಈ ಗ್ರಾಮಕ್ಕೆ ಕಾಶಿವಿಶ್ವನಾಥಪುರವೆಂದು ಕರೆಯಲಾಗುತ್ತಿತ್ತು. ಕಾಲಕಳೆದಂತೆ, ವಿಶ್ವನಾಥಪುರ ಎಂಬ ಹೆಸರಿನಿಂದ ಕರೆಯಲಾಗಿದೆ ಎಂದು ಗ್ರಾಮ ಇತಿಹಾಸದಲ್ಲಿ ಪೂರ್ವಜರು ಹೇಳುತ್ತಾರೆ.

ಟಾಪ್ ನ್ಯೂಸ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.