ಜಾತ್ಯತೀತ ಬಡವರ ಪರ ಕಾಂಗ್ರೆಸ್ ಸರ್ಕಾರ
Team Udayavani, May 14, 2023, 1:29 PM IST
ಹೊಸಕೋಟೆ: ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿದೆ. ನೆಮ್ಮದಿ ಶಾಂತಿ ಸಮೃದ್ಧಿಯ ನವ ಕರ್ನಾಟಕ ನಿರ್ಮಾಣದ ಜಾತ್ಯತೀತ ಹಾಗೂ ಬಡವರ ಪರ ಸರ್ಕಾರ ಕಾಂಗ್ರೆಸ್ ಸರ್ಕಾರ ರಚನೆ ಯಾಗಲಿದೆ ಎಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವಿಜೇತ ಅಭ್ಯರ್ಥಿ ಶರತ್ ಬಚ್ಚೇಗೌಡ ಹೇಳಿದರು.
ಅವರ ಪ್ರತಿ ಸ್ಪರ್ಧಿ ಹಾಲಿ ಸಚಿವ ಎಂಟಿಬಿ ನಾಗರಾಜ್ರನ್ನು 5172 ಮತಗಳಿಂದ ಸೋಲಿಸಿ ಮಾತನಾಡಿದರು. ಸೂಲಿಬೆಲೆಯಲ್ಲಿ ಶನಿವಾರ ಸಂಜೆ ಗೆಲುವಿನ ಸಂಭ್ರಮದ ವಿಜಯೋತ್ಸವ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯ ಬೇಕಾದರೆ ಅದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ. ಯಾವುದೇ ಕೋಮುವಾದ ದ್ವೇಷವಿಲ್ಲದೇ ಸದಾ ಜನಪರ ಯೋಜನೆಗಳನ್ನು ನೀಡುವ ಬಡವರ ಸರ್ಕಾರ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆ ಯುವ ಸರ್ಕಾರ ಸಿದ್ದರಾಮಯ್ಯನವರು ನೀಡಿದ 160 ವಾಗ್ಧಾನಗಳಲ್ಲಿ 155 ವಾಗ್ಧಾನಗಳನ್ನು ಈಡೇ ರಿಸಿದ ಸರ್ಕಾರ ಈಗ ನಾವು ನೀಡಿರುವ ವಾಗ್ಧಾನಗಳನ್ನು ಸಹ ಈಡೇರಿಸುತ್ತೇವೆ ಎಂದರು.
ಮತಗಳ ವಿವರ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ಪಡೆದ ಮತಗಳು 106769, ಸಚಿವ ನಾಗರಾಜ್ ಪಡೆದ ಮತಗಳು 101597 ಗೆಲುವಿನ ಅಂತರ 5172 ಮತಗಳು. ಯುವ ಮುಖಂಡರಾದ ಜಿ.ನಾರಾಯಣಗೌಡ, ಬಿ.ಎನ್.ಗೋಪಾಲಗೌಡ, ಮಾಜಿ ಅಧ್ಯಕ್ಷ ಜನಾ ರ್ದನರೆಡ್ಡಿ, ಉಪಾಧ್ಯಕ್ಷ ಶಿವರುದ್ರಪ್ಪ, ಅಲ್ತಾಪ್ ಪಾಷ, ಸೈಯದ್ ಮಹಬೂಬ್, ಆನಂದ್, ಮುನೀರ್, ಖಾಜಾ,ಮಾರಪ್ಪ, ಇಸಾಕ್, ಅಕºರ್ ಅಲಿಖಾನ್, ಇತರರು ಇದ್ದರು.
ಸಂವಿಧಾನವನ್ನು ತಿರುಚುವ ಷಡ್ಯಂತ್ರ ಮಾಡಿದ ಸರ್ಕಾರಕ್ಕೆ ಜನ ತಕ್ಕ ಬುದ್ದಿ ಕಲಿಸಿದ್ದಾರೆ ಜಾತ್ಯತೀತ ಸಿದ್ಧಾಂತಗಳಿಗೆ ಮನ್ನಣೆ ಸಿಕ್ಕಿದೆ.ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಲಿದೆ. ● ಶರತ್ ಬಚ್ಚೇಗೌಡ, ವಿಜೇತ ಅಭ್ಯರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್ ಸಮಸ್ಯೆ
Kanakapura ಚುನಾವಣೆ ಉಸ್ತುವಾರಿ ಹೊಣೆ ನಾನೇ ಹೊತ್ತುಕೊಳ್ಳುವೆ: ಸಿಪಿವೈ
Lok sabha polls: ಬೆಂ. ಗ್ರಾಮಾಂತರ; ಡಾ.ಮಂಜುನಾಥ್ ಸ್ಪರ್ಧೆ
Bannerghatta Biological Park: ಚಿರತೆ ಮರಿಗಳಿಗೆ ಉದ್ಯಾನವನದ ಸಿಬ್ಬಂದಿ ಆಸರೆ
Road Dispute: ರಸ್ತೆ ವಿವಾದ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ