ಬಿರುಗಾಳಿ ಮಳೆಗೆ ಹಾರಿಹೋದ ಶೆಡ್ಗಳು
Team Udayavani, May 25, 2020, 7:41 AM IST
ಆನೇಕಲ್: ಭಾನುವಾರ ಸಂಜೆ ಸುರಿದ ಭಾರೀ ಬಿರುಗಾಳಿ ಮಳೆಯಿಂದಾಗಿ ತಾಲೂಕಿನ ಅತ್ತಿಬೆಲೆ ಗಡಿಯಲ್ಲಿ ಪೊಲೀಸರು ಹಾಗೂ ಆರೋಗ್ಯ ಇಲಾಖೆ ತಪಾಸಣೆಗೆಂದು ಹಾಕಿದ್ದ ಶೆಡ್ಗಳು ಹಾರಿಹೋಗಿವೆ. ತಮಿಳುನಾಡಿನಿಂದ ಬರುವ ವಾಹನ ತಪಾ ಸಣೆಗೆ ಹಾಗೂ ಜನರನ್ನು ಚೆಕ್ ಮಾಡಿ ಕಳುಹಿಸಲು ಅತ್ತಿಬೆಲೆ ಟೋಲ್ ಬಳಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿತ್ತು.
ತಪಾಸಣೆಗೆ ಬಳಸಲು ಬೇಕಾದ ವಸ್ತುಗಳನ್ನು ಈ ಶೆಡ್ ಒಳಗೆ ಇಡಲಾಗಿತ್ತು. ಸಂಜೆ ಸುರಿದ ಭಾರೀ ಬಿರುಗಾಳಿ ಗುಡುಗು ಸತ ಮಳೆಯಿಂದಾಗಿ ಶೆಡ್ಗಳು ಗಾಳಿಗೆ ಹಾರಿಹೋಗಿ ತಲೆಕೆಳಗಾಗಿ ಬಿದ್ದಿದ್ದವು. ಗಾಳಿಮಳೆ ಬಂದಿದ್ದರಿಂದ ಸೆಡ್ಡು ಒಳಗೆ ಕುಳಿತಿದ್ದ ಪೊಲೀಸರು ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಹೊರಗೆ ಬಂದಿದ್ದರಿಂದ ಅವಘಡ ಸಂಭವಿಸಿಲ್ಲ.
ಬಿರುಗಾಳಿಯೊಂದಿಗೆ ಭಾರೀ ಮಳೆ ಸುರಿದಿದ್ದರಿಂದ ಒಳಗಿದ್ದ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಂಗಡಿ ಮುಂಗಟ್ಟು ಎದುರು ನಿಂತು ಆಸರೆ ಪಡೆ ದರು. ಸ್ಥಳೀಯವಾಗಿ ವಾಹನದಲ್ಲಿ ಬರುತ್ತಿದ್ದ ಕೆಲ ವರು ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆಯ ವರೆಗೆ ಸಹಾಯ ಮಾಡಿ ಮಾನವೀಯತೆ ಮೆರೆ ದರು. ಮಳೆ ನಿಂತ ನಂತರ ಶೆಡ್ ನಿಲ್ಲಿಸಿಕೊಂಡು ಅದರಲ್ಲೇ ಆಶಾ ಕಾರ್ಯಕರ್ತೆಯರು ತಮ್ಮ ಕೆಲಸ ಮಾಡಿದರು. ಭಾರಿ ಗಾಳಿಗೆ ಕುಳಿತುಕೊಳ್ಳಲು ಹಾಕಿದ್ದ ಕುರ್ಚಿಗಳು ಹೆದ್ದಾರಿಗೆ ಬಂದು ಬಿದ್ದಿದ್ದವು.
ಆನೇಕಲ್ ಪಟ್ಟಣ ಅತ್ತಿಬೆಲೆ-ಸರ್ಜಾಪುರ ಭಾಗ ದಲ್ಲಿ ಭಾರೀ ಮಳೆಯಾಗಿದ್ದರಿಂದ ಅಂಗಡಿಗಳ ಮುಂಗಟ್ಟುಗಳಲ್ಲಿ ಹಾಕಿದ್ದ ನಾಮಪಲಕಗಳು ಗಾಳಿಗೆ ಹಾರಿಹೋಗಿದ್ದವು. ಕರ್ನಾಟಕದ ಗಡಿ ಸೋಲೂರು ಭಾಗದಲ್ಲಿ ಮರಗಳ ಕೊಂಬೆಗಳು ಮುರಿದು ಬಿದ್ದಿದ್ದವು. ಅಲ್ಲಲ್ಲಿ ಮರಗಳು ಧರೆಗೆ ಉರುಳಿದ್ದು, ಸಂಜೆ ಸುರಿದ ಮಳೆಯಿಂದಾಗಿ ಆನೇ ಕಲ್ ತಾಲೂಕಾದ್ಯಂತ ಮರಗಳು ಧರೆಗುರುಳಿವೆ. ಕಾರಣವಿಲ್ಲದೆ ರಸ್ತೆಯಲ್ಲಿ ಓಡಾಡುತ್ತಿದ್ದ ಜನ ಮಳೆಯಿಂದ ಮನೆ ಸೇರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು