ಶರಣರ ಬದುಕಿನ ಮಾರ್ಗ ಅನುಕರಣೀಯವಾದುದು


Team Udayavani, May 14, 2019, 3:00 AM IST

sharanara

ವಿಜಯಪುರ: ಸಕಲಜೀವಿಗಳಲ್ಲಿ ಲೇಸನ್ನು ಬಯಸಿದ ಶರಣರ ಬದುಕಿನ ಮಾರ್ಗವು ಸಾರ್ವಕಾಲಿಕ ಅನುಕರಣೀಯ. ಕಾಯಕನಿಷ್ಠೆ. ಧರ್ಮನಿಷ್ಠರಾಗಿ ಶರಣಸಂಸ್ಕೃತಿಯನ್ನು ಕಟ್ಟಿಕೊಳ್ಳುವ ಕಾಯಕದಲ್ಲಿ ಎಲ್ಲರೂ ತೊಡಗಿಕೊಳ್ಳಬೇಕಿದೆ.

ಸಮಾಜದ ಹಿತಕ್ಕಾಗಿ ತತ್ವನಿಷ್ಠೆ, ಮೌಲ್ಯನಿಷ್ಠೆಯಿಟ್ಟುಕೊಂಡು ಧೀರೋದ್ಧಾತ ಶ್ರೇಷ್ಠ ಬದುಕು ಮಾರ್ಗದಲ್ಲಿ ಧ್ಯೇಯ, ಉದಾತ್ತತೆ ಇರಿಸಿಕೊಳ್ಳುವಂತಾಗಬೇಕು ಎಂದು ನಿಡುಮಾಮಿಡಿ ಶ್ರೀ ಮಾನವ ಸದ್ಧರ್ಮಸಿಂಹಾಸನ ಪೀಠಾಧ್ಯಕ್ಷ ಶ್ರೀ ವೀರಭದ್ರಚನ್ನಮಲ್ಲ ದೇಶೀಕೇಂದ್ರಸ್ವಾಮೀಜಿ ಹೇಳಿದರು.

ಪಟ್ಟಣ ಸುಬ್ಬಮ್ಮಚನ್ನಪ್ಪ ಸಮುದಾಯಭವನದಲ್ಲಿ ಶ್ರೀ ವೀರೇಶಚಾರಿಟಬಲ್‌ ಟ್ರಸ್ಟ್‌, ದೇವನಹಳ್ಳಿ ಸಾಕ್ಷಿಮುರುಘ ಸೇವಾಟ್ರಸ್ಟ್‌ಗಳ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಸಿ.ಎಂ.ವೀರಣ್ಣ ಸಂಸ್ಮರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ವೀರಣ್ಣನವರ ಕೊಡುಗೆ ಅಪಾರ: ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮಿಕ ಮತ್ತು ಸಾಹಿತ್ಯಿಕ ಕ್ಷೇತ್ರಕ್ಕೆ ಸಿ.ಎಂ.ವೀರಣ್ಣನವರ ಕೊಡುಗೆ ಅಪಾರವಾದುದು. ಅಕ್ಕನಬಳಗ, ಅರಿವಿನ ಮನೆಯ ಮೂಲಕ ಮಹಿಳೆಯರಿಗೆ, ಕಿರಿಯರಿಗೆ ಧರ್ಮಪ್ರಸಾರ ಮಾಡಲು ಮಾಡಿದ ಸೇವೆಯನ್ನು ಅನುಕರಿಸಬೇಕು ಎಂದರು.

ಜಚನಿ ಕಾರ್ಯ ಪ್ರಶಂಸನೀಯ: 12 ನೇ ಶತಮಾನದ ನಂತರ ಶ್ರಮಜೀವಿಸಂಸ್ಕೃತಿಗೆ ಪೂರಕವಾಗಿ ನಿರಕ್ಷರಕುಕ್ಷಿಗಳನ್ನು ಸಾಹಿತ್ಯಸೃಷ್ಟಿಯೆಡೆಗೆ ಓಲೈಸುವ ಕಾರ್ಯದಲ್ಲಿ ಶರಣರಷ್ಟೇ ಮಹತ್ವಪೂರ್ಣವಾಗಿ ಸೇವೆಸಲ್ಲಿಸದ ನಿಡುಮಾಮಿಡಿ ಕ್ಷೇತ್ರಾಧ್ಯಕ್ಷ ಸಾಹಿತ್ಯಸೂರ್ಯ ಜಚನಿ ಗುರುಗಳ ಕಾರ್ಯವು ಶ್ಲಾಘನೀಯವಾದುದು ಎಂದು ತಿಳಿಸಿದರು.

ಸಿ.ಎಂ.ವೀರಣ್ಣ ಪ್ರಶಸ್ತಿ ನೀಡಬೇಕು: ಸಾಹಿತ್ಯಚಂದ್ರ ಸಿ.ಎಂ.ವೀರಣ್ಣ ಅವರ ಹೆಸರಿನಲ್ಲಿ ಶ್ರೀ ವೀರೇಶ ಚಾರಿಟಬಲ್‌ ಟ್ರಸ್ಟ್‌ನ ವತಿಯಿಂದ ಪ್ರತಿವರ್ಷವೂ ಕೊಡುವ ಯೋಜನೆಯು ಜಾರಿಯಾಗಬೇಕು. ಸತ್ಪ್ರೇರಣೆ, ಸದ್ಚಿಂತನೆ ಬಂದು ಹೊಸಬೆಳಕು ಮೂಡಿ ಹೊಸಭಾವನೆ ಪ್ರತಿಫ‌ಲಿಸಲು ನಿಸರ್ಗವೇ ಮಾರ್ಗತೋರಬೇಕಿದೆ ಎಂದು ಹೇಳಿದರು.

ಸಾಧೆನೆ ಮೂಲಕ ಸಾಫ‌ಲ್ಯ: ವನಕಲ್ಲು ಶ್ರೀ ಮಲ್ಲೇಶ್ವರಸಂಸ್ಥಾನಮಠಾಧ್ಯಕ್ಷ ಶ್ರೀ ಬಸವರಮಾನಂದಸ್ವಾಮೀಜಿ ಅನುಭವಾಮೃತವನ್ನು ನೀಡಿ, ಮನುಷ್ಯನು ನಾನಾಕ್ಷೇತ್ರಗಳಲ್ಲಿ ಸಾಧನೆ, ಸಿದ್ಧಿಗಳ ಮೂಲಕ ಜೀವನದಲ್ಲಿ ಸಾಫ‌ಲ್ಯವನ್ನು ಪಡೆಯಲು ಸಾಧ್ಯವಿದ್ದು, ಧಾರ್ಮಿಕ ರಂಗದಲ್ಲಿ ವ್ರತ, ನಿಯಮ, ಶರಣರ ನಿಷ್ಠಾನುಷ್ಠಾನ, ಗುರುಲಿಂಗಜಂಗಮದಲ್ಲಿ ಪ್ರೇಮವನ್ನಿರಿಸಕೊಳ್ಳಬಹುದಾಗಿದೆ. ಉತ್ತಮ ಸೇವಾಮನೋಭಾವನೆಯಿರಿಸಿಕೊಳ್ಳುವ ಮೂಲಕ ಪಾಪಪುಣ್ಯಾಧಿಕರ್ಮಗಳಿಂದ ಹೊರಬರಲು ಸಾಧ್ಯವಿದೆ ಎಂದರು.

ಎಲ್ಲರೊಳಗೊಂದಾಗಿ ಬದುಕಿ: ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್‌.ಎಸ್‌.ರುದ್ರೇಶಮೂರ್ತಿ ಮಾತನಾಡಿ, ಎಲ್ಲರೊಳಗೊಂದಾಗಿ ಬದುಕಲು ಮಾಗಿದ ಮನಸ್ಸುಗಳಿಗೆ ಮಾತ್ರ ಸಾಧ್ಯವಿದೆ. ವಾಸ್ತವವಾಗಿ ಹಿರಿತನ ಬರುವುದು ವಯಸ್ಸು, ಅಧಿಕಾರ, ಹಣ, ವಿದ್ವತ್ತಿನಿಂದ ಅಲ್ಲ. ಸದಾಸಾತ್ವಿಕತೆ, ವಿನಯಶೀಲತೆ, ಅಹಂನಿರಸನಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಚಿಕ್ಕಬಳ್ಳಾಪುರ ವಾಪಸಂದ್ರ ನಿಡುಮಾಮಿಡಿ ಶಾಖಾಮಠಾಧ್ಯಕ್ಷೆ ಡಾ.ಶಿವಜ್ಯೋತಿತಾಯಿ, ದೇವನಹಳ್ಳಿ ಸಾಕ್ಷಿಮುರುಘ ಸೇವಾಟ್ರಸ್ಟ್‌ನ ಅಧ್ಯಕ್ಷ ತುಪ್ಪದ ಚಕ್ಕವೀರಭದ್ರಪ್ಪ, ಶ್ರೀ ವೀರಭದ್ರಸ್ವಾಮಿಗೋಷ್ಠಿ ಅಕ್ಕನ ಬಳಗ ಸೇವಾಟ್ರಸ್ಟ್‌ನ ಅಧ್ಯಕ್ಷ ಸಿ.ಬಸಪ್ಪ, ಪಿ.ರುದ್ರಪ್ಪ, ಚುಟುಕು ಕವಿ ಜರಗನಹಳ್ಳಿ ಶಿವಶಂಕರ್‌, ನಗರ್ತ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್‌.ಎಸ್‌.ಬಸವರಾಜು, ತಾಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಸುರೇಶ್‌ಬಾಬು, ಶ್ರೀ ವೀರೇಶಚಾರಿಟಬಲ್‌ ಟ್ರಸ್ಟ್‌ನ ಅಧ್ಯಕ್ಷ ಅನಿಲ್‌ಕುಮಾರ್‌, ಕಾರ್ಯದರ್ಶಿ ವಿಮಲಾಂಬ, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

Ad

ಟಾಪ್ ನ್ಯೂಸ್

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

Mumbai; ಹಲ್ಲೆಕೋರ ಮಹಾರಾಷ್ಟ್ರ “ಶಿಂಧೆ’ ಶಾಸಕನ ವಿರುದ್ಧ 2 ದಿನ ಬಳಿಕ ಎಫ್ಐಆರ್‌

Mumbai; ಹ*ಲ್ಲೆಕೋರ ಮಹಾರಾಷ್ಟ್ರ “ಶಿಂಧೆ’ ಶಾಸಕನ ವಿರುದ್ಧ 2 ದಿನ ಬಳಿಕ ಎಫ್ಐಆರ್‌

ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌

ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌

ಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆ

ಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆ

Kolukkumala; ಹೂ ಬದಲು ಹುಲಿಯ ದರ್ಶನ: ಸ್ವಲ್ಪದರಲ್ಲೇ ಕೇರಳ ಚಾರಣಿಗ ಪಾರು

Kolukkumala; ಹೂ ಬದಲು ಹುಲಿಯ ದರ್ಶನ: ಸ್ವಲ್ಪದರಲ್ಲೇ ಕೇರಳ ಚಾರಣಿಗ ಪಾರು

Mumbai: ಹಣವಿದ್ದ ಬ್ಯಾಗ್‌ ಜತೆ ಮಹಾರಾಷ್ಟ್ರ ಸಚಿವ: ವಿಪಕ್ಷಗಳಿಂದ ಟೀಕೆ

Mumbai: ಹಣವಿದ್ದ ಬ್ಯಾಗ್‌ ಜತೆ ಮಹಾರಾಷ್ಟ್ರ ಸಚಿವ: ವಿಪಕ್ಷಗಳಿಂದ ಟೀಕೆ

Chhattisgarh: ಒಟ್ಟು 37.5 ಲಕ್ಷ ರೂ. ಇನಾಮು ಹೊತ್ತಿದ್ದ 22 ನಕ್ಸಲರ ಶರಣಾಗತಿ

Chhattisgarh: ಒಟ್ಟು 37.5 ಲಕ್ಷ ರೂ. ಇನಾಮು ಹೊತ್ತಿದ್ದ 22 ನಕ್ಸಲರ ಶರಣಾಗತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-nelamangala

Nelamangala: ಬಸ್ ಕಲ್ಪಿಸಿಕೊಟ್ಟ ಶಾಸಕ ಎನ್. ಶ್ರೀನಿವಾಸ್ ಗೆ ಗ್ರಾಮಸ್ಥರಿಂದ ಅಭಿನಂದನೆ

3-nelamangala

Nelamangala: ಪ್ಲೈವುಡ್ ಗೋದಾಮಿನಲ್ಲಿ ಬೆಂಕಿ; ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

2

ಅಶ್ಲೀ*ಲ ಮೆಸೇಜ್‌ ಮಾಡಿದ್ದಕ್ಕೆ ಯುವಕನ ಕಿಡ್ನಾಪ್:‌ ರೇಣುಕಾಸ್ವಾಮಿ ಹೆಸರು ಹೇಳಿ ಹಲ್ಲೆ

6

ಗ್ರಾಮಾಂತರ ಇನ್ಮುಂದೆ ಬೆಂಗಳೂರು ಉತ್ತರ ಜಿಲ್ಲೆ

Road Mishap: ಲಾರಿ ಓವರ್‌ಟೇಕ್‌ ಭರದಲ್ಲಿ ಕಾರು ಪಲ್ಟಿ; ನಾಲ್ವರು ಸ್ಥಳದಲ್ಲೇ ದುರ್ಮರಣ

Road Mishap: ಲಾರಿ ಓವರ್‌ ಟೇಕ್‌ ಭರದಲ್ಲಿ ಕಾರು ಪಲ್ಟಿ; ನಾಲ್ವರು ಸ್ಥಳದಲ್ಲೇ ದುರ್ಮರಣ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

police

ಬಾಕಿ ಬಿಲ್‌ ಕೇಳಿದ ಮಾಲಕ: ಅಂಗಡಿ ಬ್ಯಾನರ್‌ಗೆ ಬೆಂಕಿ ಹಚ್ಚಿದ ಗ್ರಾಹಕ

arrest-lady

ವಿಚಾರಣಾಧೀನ ಕೈದಿಗೆ ನೀಡಲು ತಂದಿದ್ದ ಅನುಮಾನಾಸ್ಪದ ಪುಡಿ; ಮಹಿಳೆ ವಶಕ್ಕೆ

Malpe ಸೈಂಟ್‌ ಮೇರಿಸ್‌ ಬಳಿ ನಾಡದೋಣಿ ದುರ್ಘ‌ಟನೆ: ದೋಣಿ ಮಗುಚಿ ಓರ್ವ ಸಾವು, ಇಬ್ಬರಿಗೆ ಗಾಯ

Malpe ಸೈಂಟ್‌ ಮೇರಿಸ್‌ ಬಳಿ ನಾಡದೋಣಿ ದುರ್ಘ‌ಟನೆ: ದೋಣಿ ಮಗುಚಿ ಓರ್ವ ಸಾವು, ಇಬ್ಬರಿಗೆ ಗಾಯ

bosaraju

ಕೊಡಗಿನಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ: ಮುನ್ನೆಚ್ಚರ ವಹಿಸಲು ಸಚಿವರ ಸೂಚನೆ

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.