BJP ಆತ್ಮಾವಲೋಕನ ಸಭೆ ;ಅಥಣಿಯಲ್ಲಿ ದೌರ್ಜನ್ಯ ರಾಜಕೀಯ ಸಹಿಸುವುದಿಲ್ಲ: ಕುಮಟಳ್ಳಿ
Team Udayavani, May 22, 2023, 7:47 PM IST
ಅಥಣಿ: ಜನಾದೇಶಕ್ಕೆ ತೆಲೆ ಬಾಗುವೆ, ಅಧಿಕಾರದ ನಷೆ ನನಗಿಲ್ಲ, ಒಬ್ಬ ಶಾಸಕನಾಗಿ ಎನೇಲ್ಲ ಕೆಲಸ ಮಾಡಬೇಕು ಎಂಬುದನ್ನು ತೋರಿಸಿದ್ದು ನನಗೆ ತೃಪ್ತಿ ಇದೆ ಎಂದು ಮಾಜಿ ಶಾಸಕ ಮಹೇಶ ಕುಮಟಳ್ಳಿ ಮಾತನಾಡಿದರು.
ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ರಾಜಕೀಯವಾಗಿ ನಾನು ಅಧಿಕಾರವನ್ನು ಎಂದು ಬಯಸಿಲ್ಲ, ಸುಮಾರು 2800 ಕೋಟಿ ರೂ. ಅನುದಾನ ಜನರಿಗೆ ತಲುಪಿಸಿದ್ದೇವೆ. ಮುಂದಿನ ದಿನಮಾನಗಳಲ್ಲಿ ಯಾರನ್ನೂ ದ್ವೇಸಿಸುವುದಿಲ್ಲ ಆದರೆ ದೌರ್ಜನ್ಯವನ್ನು ಸಹಿಸಲ್ಲ,ಹೋರಾಟದಿಂದ ಬಂದಂತವನು ನಾನು ಎಂದರು.
ತಹಶೀಲ್ದಾರ ಮತ್ತು ಪೊಲೀಸ್ ಠಾಣೆಗಳಲ್ಲಿ ರಾಜಕೀಯೆ ಮಾಡಿದರೆ ನಾವು ಸುಮ್ಮನಿರಲಾರೆವು, ವೈಯಕ್ತಿಕ ಯಾರದಲ್ಲ, ಬಾಬಾಸಾಹೇಬರು ಬರೆದ ಸಂವಿಧಾನದಿಂದ ಎಂದರು.
ಚುನಾವಣೆಯಲ್ಲಿ ಹಣದ ಹೊಳೆ ಹರೆದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ದುಡಿದು ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡೋಣ ಎಂದರು.
ಕುಮಟಳ್ಳಿ ಅವರು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ ಅವರ ಎದುರು ಬರೋಬ್ಬರಿ 76,112 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ