ಚಿಕ್ಕೋಡಿ: ಏತ ನೀರಾವರಿ ಯೋಜನೆ: ಸಚಿವ ಕಾರಜೋಳ ಅವರಿಗೆ ರೈತರ ಅಭಿನಂದನೆ
Team Udayavani, Jul 18, 2022, 6:55 PM IST
ಚಿಕ್ಕೋಡಿ: ತಾಲೂಕಿನ ಪಶ್ಚಿಮ ಭಾಗದ ರೈತರ ಬಹುದಿನಗಳ ಬೇಡಿಕೆಯಾದ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ವಿಶೇಷ ಆಧ್ಯತೆ ನೀಡಿ ಮಂಜೂರು ನೀಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ಶಾಸಕ ಗಣೇಶ ಹುಕ್ಕೇರಿ ನೇತೃತ್ವದಲ್ಲಿ ಸೋಮವಾರ ರೈತರು ಸನ್ಮಾನಿಸಿ ಗೌರವಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಚಿಕ್ಕೋಡಿಗೆ ಆಗಮೀಸಿದ ಸಂದರ್ಭದಲ್ಲಿ ನೀರಾವರಿಗೆ ಒಳಪಡುವ ಪಟ್ಟಣಕುಡಿ, ಚಿಂಚಣಿ, ನವಲಿಹಾಳ, ನಾಯಿಂಗ್ಲಜ, ಯಾದ್ಯಾನವಾಡಿ, ದೂಳಗನವಾಡಿ, ಕುಪ್ಪಾಣವಾಡಿ, ಕೋಥಳಿ,ಕುಠಾಳಿ, ರಾಮಪೂರ ಮುಂತಾದ ಗ್ರಾಮಗಳ ರೈತರು ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಸಚಿವರನ್ನು ಗೌರವಿಸಿದರು.
ಚಿಕ್ಕೋಡಿ ತಾಲೂಕಿನ ಬಹುದಿನಗಳ ಬೇಡಿಕೆಯಾದ ೩೮೨ ಕೋಟಿ ರೂಪಾಯಿ ಮೊತ್ತದ ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಯನ್ನು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ನಿಗಮ ನಿರ್ದೇಶನ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಿದ್ದು ಸಂತಸ ತಂದಿದೆ. ಶೀಘ್ರವಾಗಿ ಯೋಜನೆಯ ಕಾಮಗಾರಿ ಆರಂಭಿಸಬೇಕು ಎಂದು ಸಚಿವರ ಬಳಿ ಮನವಿ ಮಾಡಿದರು.
ರವೀಂದ್ರ ಮಿರ್ಜೆ, ಮಲ್ಲಿಕಾರ್ಜುನ ಪಾಟೀಲ, ಬಸವರಾಜ ಪಾಟೀಲ, ಪುರಸಭೆ ಸದಸ್ಯ ಸಾಭೀರ ಜಮಾದಾರ, ರಾಮಾ ಮಾನೆ, ಮುದ್ದಸರ ಜಮಾದಾರ, ವಿನೋಧ ಕಾಗೆ, ಶಿವಕುಮಾರ ಕಮತೆ, ಕುಮಾರ ಪಾಟೀಲ, ಕಲಗೌಡ ಪಾಟೀಲ, ನಸಲಾಪೂರೆ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ