ಸಮಸ್ಯೆ ಬಂದಾಗ ಧೈರ್ಯವಾಗಿ ಎದುರಿಸಿ: ಭಜಂತ್ರಿ
Team Udayavani, Jun 15, 2020, 6:44 AM IST
ರಾಯಬಾಗ: ಅಧಿಕಾರದಲ್ಲಿದ್ದಾಗ ಕ್ರಿಯಾಶೀಲತೆ, ಪ್ರಾಮಾಣಿಕತೆಯಿಂದ ದಕ್ಷವಾಗಿ ಆಡಳಿತ ನಡೆಸಿ ಜನಸಾಮಾನ್ಯರ ಜೊತೆಗೆ ಜನಸಾಮಾನ್ಯರಾಗಿ ಸೇವೆ ಒದಗಿಸಿದಾಗ ಜನತಾ ಜನಾರ್ದನ ಸೇವೆಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ಭಜಂತ್ರಿ ಹೇಳಿದರು.
ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಬಡ್ತಿ ಹೊಂದಿ ಗ್ರೇಡ್ಒನ್ ಅಧಿಕಾರಿಯಾಗಿ ಮಧುಗಿರಿ ಜಿಲ್ಲೆಯ ದೈಹಿಕ ಶಿಕ್ಷಣ ಅಧೀಕ್ಷಕರಾಗಿ ಆಯ್ಕೆಯಾಗಿ ಪದೋನ್ನತಿ ಹೊಂದಿದ ಡಿ.ಎಸ್. ಡಿಗ್ರಜ್ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಸ್ಯೆಗಳು ಬರುವುದು ಸಾಮಾನ್ಯ. ಅವುಗಳಿಂದ ವಿಚಲಿತರಾಗದೆ ಧೈರ್ಯ ಹಾಗೂ ಜಾಣ್ಮೆಯಿಂದ ಬಗೆಹರಿಸಿಕೊಂಡು ಶಿಕ್ಷಕರು ಸಮಾಜದಲ್ಲಿ ಬೆರೆಯಬೇಕೆಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿ.ಎಸ್. ಡಿಗ್ರಜ್, ಸೇವಾ ವೃತ್ತಿಯಲ್ಲಿನ ತೊಂದರೆಗಳನ್ನು ಸರಿಪಡಿಸಿಕೊಂಡು ಎಲ್ಲರ ಜೊತೆಗೆ ಅವಿನಾಭಾವದಿಂದ ವರ್ತಿಸಬೇಕು. ಇಲಾಖೆ ಆದೇಶಗಳನ್ನು ಪಾಲಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಬಿ.ಎಂ. ಮಾಳಿ, ಎಸ್.ಆರ್. ಕಂಬಾರ, ಎಚ್.ಬಿ. ಬೆನಾಡೆ, ಆರ್.ಟಿ. ಅರವಳ್ಳಿ, ಎಸ್.ಆರ್. ಗೊಂದಳಿ, ಆರ್.ವಿ. ಸತ್ತಿಕರ, ಅಶೋಕ ಗಸ್ತಿ, ಪಿ.ಎಸ್. ಶಾರಬಿದರಿ, ಅಮೋಘ ನಾಯಿಕ, ಜಡ್.ಆರ್. ಮುಲ್ಲಾ, ಎಲ್.ಬಿ. ಬಂಡಗರ, ಆರ್.ಎಸ್. ಮಿಟಾರೆ, ವಿ.ಡಿ. ಉಪಾಧ್ಯ, ಎಂ.ಜಿ. ಭೋರಗಾಂವಿ, ಡಿ.ವೈ. ನಂದಿಹಾಳ, ಎಂ.ಬಿ. ಕಸರಡ್ಡಿ, ಆರ್.ಎ. ನಾಯಕ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ