ಪಕ್ಷೇತರರಾಗಿ ಪೂಜಾರಿ ಸ್ಪರ್ಧಿಸುವಂತೆ ಒತ್ತಾಯ
Team Udayavani, Nov 18, 2019, 11:53 AM IST
ಗೋಕಾಕ: ಅಶೋಕ ಪೂಜಾರಿ ಉಪ ಚುನಾವಣೆಗೆ ಪಕ್ಷೇತರರಾಗಿ ಸ್ವರ್ಧಿಸುವಂತೆ ಒತ್ತಾಯಿಸಿ ಅಶೋಕ ಪೂಜಾರಿ ಮನೆ ಎದುರು ಅವರ ಬೆಂಬಲಿಗರು ರವಿವಾರ ಪ್ರತಿಭಟನೆ ನಡೆಸಿದರು.
ನಿನ್ನೆಯಷ್ಟೇ ಕೇಂದ್ರ ಸಚಿವ ಸುರೇಶ ಅಂಗಡಿ ಮತ್ತು ರಮೇಶ್ ಜಾರಕಿಹೊಳಿ ಅಶೋಕ್ ಪೂಜಾರಿ ಮನೆಗೆ ಭೇಟಿ ನಂತರ ರವಿವಾರ ಅಶೋಕ ಪೂಜಾರಿ ಚುನಾವಣೆಗೆ ಸ್ವ ರ್ಧಿಸುವಂತೆ ಅವರು ಮನೆ ಎದುರು ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಅಶೋಕ ಪೂಜಾರಿ ಅವರು ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬಾರದೂ. ಸ್ವತಂತ್ರವಾಗಿ ಅಥವಾ ಯಾವುದಾದರೂ ಪಕ್ಷದಿಂದ ಉಪಚುನಾವಣೆಗೆ ಸ್ಪರ್ಧೆ ಮಾಡಬೇಕು ಯಾವುದೇ ಕಾರಣಕ್ಕೂ ಚುಣಾವಣಾ ಕಣದಿಂದ ಹಿಂದೆ ಸರಿಯಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ದಸ್ತಗೀರ ಪೈಲ್ವಾನ್, ನ್ಯಾಯವಾದಿ ಎಂ.ಎ. ಪೀರಜಾದೆ, ಕಲ್ಲಯ್ಯ ಮಠಪತಿ, ಈರಣ್ಣ ಹಿರೇಮಠ, ಬಿಲಾಲ ಕಲ್ಲೋಳಿ, ಚಂದ್ರಶೇಖರ ಬಬಲಿ, ಗುರು ಬೆನವಾಡ, ಅನೀಲ ಸಂಕಾವಿ, ನಾಗು ದೇಸಾಯಿ, ಮಂಜುನಾಥ ಪಾಟೀಲ, ರವಿ ಮಡಿವಾಳ ಸೇರಿದಂತೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ