ಇಂಗಳಿ ಗ್ರಾಮ; ಜನಮನ ಸೆಳೆದ ಜಂಗಿ ನಿಕಾಲಿ ಕುಸ್ತಿ
ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವ ಪ್ರಸಾದ ಜೊಲ್ಲೆ ಕುಸ್ತಿ ವೀಕ್ಷಿಸಿದರು.
Team Udayavani, Sep 1, 2022, 6:13 PM IST
ಚಿಕ್ಕೋಡಿ: ತಾಲೂಕಿನ ಇಂಗಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ನಡೆದ ನಿಕಾಲಿ ಜಂಗಿ ಕುಸ್ತಿಗಳು ಜನಮನ ಸೆಳೆದವು. ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹೆಸರಾಂತ ಕುಸ್ತಿಪಟುಗಳು ಭಾಗಿಯಾಗಿದ್ದರು.
ಕುಸ್ತಿ ನೋಡಲು ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು. ದಾವಣಗೆರೆಯ ಕಾರ್ತಿಕ ಕಾಟೆ, ಬಾರಾಮತಿಯ ಭರತ ಮದನೆ ನಡುವೆ 2ನೇ ಸ್ಥಾನಕ್ಕಾಗಿ ಕುಸ್ತಿ ಜರುಗಿತು. ಈ ಇದರಲ್ಲಿ ಕಾರ್ತಿಕ ಕಾಟೆ ಜಯಶಾಲಿಯಾದರು. ಇನ್ನು ತೀವ್ರ ಕುತೂಹಲ ಕೆರಳಿಸಿದ್ದ 1ನೇ ಸ್ಥಾನದ ಕುಸ್ತಿಯು ಪಂಜಾಬದ ಭೋಲಾ ಹಾಗೂ ಹರ್ಯಾಣಾದ ವಿಕ್ರಾಂತಕುಮಾರ ಮಧ್ಯೆ ನಡೆಯಿತು. ಇದರಲ್ಲಿ ಪಂಜಾಬದ ಭೋಲಾ ಜಯಶಾಲಿಯಾದರು. ಜಯಶಾಲಿಯಾದ ಕುಸ್ತಿಪಟುಗಳಿಗೆ ಗದೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಶಾಸಕ ಗಣೇಶ ಹುಕ್ಕೇರಿ ಹಾಗೂ ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವ ಪ್ರಸಾದ ಜೊಲ್ಲೆ ಕುಸ್ತಿ ವೀಕ್ಷಿಸಿದರು. ಈ ಕುಸ್ತಿ ಪಂದ್ಯಾವಳಿಗಳಿಗೆ 10 ಸಾವಿರ ರೂ. ದೇಣಿಗೆ ನೀಡುವುದಾಗಿ ಬಸವಪ್ರಸಾದ ಜೊಲ್ಲೆ ತಿಳಿಸಿದರು. ಶಾಸಕ ಹುಕ್ಕೇರಿಯವರು ಈ ಬಾರಿಯ ಕುಸ್ತಿ ಪಂದ್ಯಾವಳಿಗೆ 25 ಸಾವಿರ ಹಾಗೂ ಮುಂದಿನ ವರ್ಷದ ಕುಸ್ತಿ ಪಂದ್ಯಾವಳಿಗೆ 50 ಸಾವಿರ ರೂ. ನೀಡುವುದಾಗಿ ಘೋಷಿಸಿದರು. ಗ್ರಾಪಂ ಮಾಜಿ ಸದಸ್ಯರಾದ ಸಂಜಯ ಕುಡಚೆ, ವಿಶಾಲ ಕುಡಚೆ ಸೇರಿ 30 ಸಾವಿರ ರೂ. ದೇಣಿಗೆ ನೀಡಿದರಲ್ಲದೇ ಮುಂದಿನ ವರ್ಷ 1 ಲಕ್ಷ ರೂ. ನೀಡುವುದಾಗಿ ಸಂಜಯ ಕುಡಚೆ ತಿಳಿಸಿದರು.
ವಸಂತ ಜೋಶಿ, ಆನಂದ ಜಾಧವ, ಶಂಕರ ಪೂಜಾರಿ, ಸಂಜಯ ಕುಡಚೆ ಗಣಪತಿ ಧನವಡೆ, ರಾಮಾ ಐವಳೆ, ಶಶಿಕಾಂತ ಧನವಡೆ, ಭೂಪಾಲ ಪನದೆ, ಮಾರುತಿ ಮಗದುಮ್ಮ. ಬಾಳು ಅವಟಿ, ಮಾಹಾದೆವ ಜಾಧವ, ಕುಶಪ್ಪಾ ಅಂಬಿ, ನಂದು ಘಾಟಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
ಗೋ ಸಾಗಾಟ ತಡೆದು ಹಲ್ಲೆ:7 ಹಿಂದೂ ಕಾರ್ಯಕರ್ತರ ಬಂಧನ