122 ಜನರನ್ನು ರಕ್ಷಿಸಿದ ಎನ್ಡಿಆರ್ಎಫ್ ತಂಡ
Team Udayavani, Aug 9, 2019, 11:57 AM IST
ಗೋಕಾಕ: ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ನೆರೆ ಹಾವಳಿಯಲ್ಲಿ ಸಿಲುಕಿದ ಸಂತ್ರಸ್ತರನ್ನು ಕರೆ ತರಲಾಯಿತು.
ಗೋಕಾಕ: ಘಟಪ್ರಭಾ ನದಿ ಅಷ್ಟೇ ಅಲ್ಲ, ನಗರದ ಹೊರ ವಲಯದಲ್ಲಿ ಹರಿಯುವ ಮಾರ್ಕಂಡೇಯ ನದಿಗೂ ಪ್ರವಾಹ ಬಂದಿದ್ದು ಪ್ರವಾಹದಿಂದಾಗಿ ತೋಟ (ನಡುಗಡ್ಡೆ)ಯಲ್ಲಿ ಸಿಲುಕಿದ ಯುವಕ ಗುರುವಾರದಂದು ಪ್ರವಾಹವನ್ನು ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಳೆದ 4-5 ದಿನಗಳಿಂದ ನಗರದ ಹೊರವಲಯದಲ್ಲಿರುವ ಯೋಗಿಕೊಳ್ಳ ರಸ್ತೆಯ ಘಟ್ಟಿ ಬಸವಣ್ಣ ದೇವಸ್ಥಾನ ಹತ್ತಿರವಿರುವ ಹೆಜ್ಜೆಗಾರ ಅವರ ತೋಟದ (ನಡುಗಡ್ಡೆ)ಯಲ್ಲಿ ಸಿಲುಕಿರುವ ಯುವಕ ಮಾಧವಾನಂದ (ನಂದು) ದೊಡಮನಿ (23) ಎಂಬ ಯುವಕನು ದನಗಳಿಗೆ ಮೇವುನ್ನು ಹಾಕಿ ಹೊರ ಬರುವಷ್ಟರಲ್ಲಿ ಪ್ರವಾಹದ ಸುಳಿಗೆ ಸಿಲುಕಿದ್ದನ್ನು. ಗುರುವಾರದಂದು ಆತನನ್ನು ಹೊರ ತರಲು ತಾಲೂಕಾಡಳಿತ ಹೆಲಿಕಾಪ್ಟರ್ಹಾಗೂ ಯಾಂತ್ರಿಕೃತ ಬೋಟ್ ಮೂಲಕ ಕರೆ ತರುವ ಏರ್ಪಾಟು ಮಾಡುವ ಮೊದಲೇ ಯುವಕನು ಪ್ರವಾಹದಲ್ಲಿ ಸುಮಾರು ಒಂದು ಕಿ.ಮೀ. ಈಜಿ ದಡ ಸೇರಿದ್ದಾನೆ. ಎನ್ಡಿಆರ್ಎಫ್ ತಂಡ ಹೆಲಿಕಾಪ್ಟರ್ ಹಾಗೂ ಯಾಂತ್ರೀಕೃತ ಬೋಟಗಳನ್ನು ಬಳಿಸಿ ಪ್ರವಾಹದಲ್ಲಿ ಸಿಲುಕಿದ್ದ ಹುಣಶ್ಯಾಳ ಪಿ.ವೈ.ದಲ್ಲಿ 60 ಜನರನ್ನು, ಅಂಕತಂಗೇರಹಾಳದಲ್ಲಿ 30ಜನರನ್ನು, ಸುಣಧೋಳಿಯಲ್ಲಿ ಇಬ್ಬರನ್ನು, ಉದಗಟ್ಟಿಯಲ್ಲಿ 16 ಜನರನ್ನು ರಕ್ಷಿಸಿದ್ದು ಅದರಲ್ಲಿಯ ಉದಗಟ್ಟಿ ಗ್ರಾಮದ 16 ಜನರನ್ನು ಹೆಲಿಕಾಪ್ಟರ್ ರಕ್ಷಿಸಲಾಗಿದೆ ಎಂದು ಎಸಿ ಶಿವಾನಂದ ಭಜಂತ್ರಿ ಪತ್ರಿಕೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
MUST WATCH
ಹೊಸ ಸೇರ್ಪಡೆ
Kasaragod ವಿವಿಪ್ಯಾಟ್ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ