ಬೀದಿಗೆ ಬಿದ್ದ ಹಂಪಿಹೊಳಿ ಗ್ರಾಮದ ನೆರೆ ಸಂತ್ರಸ್ತರು
Team Udayavani, Jul 19, 2021, 7:57 PM IST
ರಾಮದುರ್ಗ: ಮರಳಿ ನೆರೆ ಹಾವಳಿ ಹೊಸ್ತಿಲಿಗೆ ಬಂದರೂ ನೆರೆ ಸಂತ್ರಸ್ತರಿಗೆ ಸಿಗದ ಸೂರು. ಇದು ತಾಲೂಕಿನ ಸುರೇಬಾನ ಸಮೀಪದ ಅವರಾದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಂಪಿಹೊಳಿ ಗ್ರಾಮದ ನೆರೆ ಸಂತ್ರಸ್ತರ ಗತಿ.
ಕಳೆದ ಎರಡು ವರ್ಷಗಳಿಂದ ಸತತವಾಗಿ ಅಬ್ಬರಿಸುತ್ತಿರುವ ಮಲಪ್ರಭಾ ನದಿಗೆ ನೆರೆ ಹಾವಳಿಗೆ ತುತ್ತಾದ ನದಿ ಪಾತ್ರದ ಗ್ರಾಮಸ್ಥರ ಬದುಕು ಈಗ ಬೀದಿಗೆ ಬಂದಿದೆ. ಹಂಪಿಹೊಳಿ ಗ್ರಾಮದ ಒಂಬತ್ತು ದಲಿತ ಕುಟುಂಬಗಳಿಗೆ ಇದುವರೆಗೂ ಶಾಶ್ವತವಾಗಿ ನೆಲೆ ಇಲ್ಲದಂತಾಗಿದೆ. ಶುಕ್ರವಾರ ರಾಮದುರ್ಗ ತಹಶೀಲ್ದಾರ್ ನೇತೃತ್ವದಲ್ಲಿ ಗೊಣ್ಣಾಗರ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಮಾರಡಗಿ ಗ್ರಾಮಸ್ಥರಿಗಾಗಿ ನಿರ್ಮಿಸಿರುವ ಸಂತ್ರಸ್ತರ ಮನೆಗಳಲ್ಲಿ ಹಂಪಿಹೊಳಿ ಗ್ರಾಮಸ್ಥರು ನೆಲೆಸಿದ್ದಾರೆ ಎಂಬ ಕಾರಣಕ್ಕೆ ಆ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಮನೆಯಿಂದ ಹೊರಹಾಕಿದ ಘಟನೆ ನಡೆದಿದೆ.
ಮಾರಡಗಿ ಗ್ರಾಮಸ್ಥರಿಗೆ ಈ ಹಿಂದೆ ಹಕ್ಕು ಪತ್ರಗಳನ್ನು ನೀಡಲಾಗಿತ್ತು. ಹಕ್ಕು ಪತ್ರ ಪಡೆದ ಫಲಾನುಭವಿಗಳು ಅಲ್ಲಿ ವಾಸವಿರದ ಕಾರಣ, ಕಳೆದ ವರ್ಷ ತಹಶೀಲ್ದಾರ್ ಗಿರೀಶ ಸ್ವಾಧಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಾವು ವಾಸವಿದ್ದೇವೆ ಎಂದು ಹಂಪಿಹೊಳಿ ಗ್ರಾಮದ ನೆರೆ ಸಂತ್ರಸ್ತರು ಹೇಳುತ್ತಾರೆ. ರಾಮದುರ್ಗ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಪೊಲೀಸರ ಸಹಕಾರದಿಂದ ನಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ. ಮಳೆಗಾಲವಾದ್ದರಿಂದ ಅವರು ನಮಗೆ ಬೇರೆಡೆ ವಾಸಿಸಲು ಅವಕಾಶ ಮಾಡಿ ಮಾನವೀಯತೆ ಮೆರೆಯಬೇಕಿತ್ತು ಎಂತಾರೆ ದಲಿತ ಕುಟುಂಬದ. ರಾಮದುರ್ಗ ವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ