![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಸಾರ್ವಜನಿಕರಿಗೆ ಪಾಸ್ ಪರದಾಟ
Team Udayavani, Mar 22, 2020, 5:44 PM IST
![ಸಾರ್ವಜನಿಕರಿಗೆ ಪಾಸ್ ಪರದಾಟ](https://www.udayavani.com/wp-content/uploads/2020/03/bg-tdy-1-17-620x351.jpg)
ಸಾಂದರ್ಭಿಕ ಚಿತ್ರ
ಬೈಲಹೊಂಗಲ: ತಾಲೂಕಿನ ಸಾಣಿಕೊಪ್ಪ ಗ್ರಾಮದ ಬಳಿ ಬೆಳಗಾವಿ-ಸವದತ್ತಿ ಮಾರ್ಗದ ರಸ್ತೆಗೆ ನಿರ್ಮಿಸಲಾದ ಟೋಲ್ ನಾಕಾದಲ್ಲಿ ಮೂಲ ಸೌಕರ್ಯಗಳಿಲ್ಲದೇ ನಾಗರಿಕರು ನಿತ್ಯ ಪರದಾಡುವಂತಾಗಿದೆ.
ಕಳೆದ ಮೂರು ತಿಂಗಳ ತಿಂದೆ ನಿರ್ಮಾಣಗೊಂಡ ಬೆಳಗಾವಿ-ಸವದತ್ತಿ ರಸ್ತೆ ಮಧ್ಯೆ ಸಾಣಿಕೊಪ್ಪ ಬಳಿ ಟೋಲ್ ನಾಕಾ ನಿರ್ಮಿಸಬಾರದೆಂದು ನಾಗರಿಕರು ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದ ನಂತರವೂ ಪ್ರಾರಂಭಗೊಂಡ ಟೋಲ್ ನಾಕಾ ನಾನಾ ಸಮಸ್ಯೆಗಳನ್ನು ಎದುರಿಸಿ ಗೊಂದಲದ ಗೂಡಾಗಿ ಪರಿಣಮಿಸಿದೆ.
ಟೋಲ್ನಾಕಾ ಬಳಿ ಸಂಚರಿಸುವ ಹಲವು ವಾಹನ ಸವಾರರು ಸ್ಥಳೀಯವಾಗಿ ಬೆಳಗಾವಿಗೆ ಉದ್ಯೋಗಕ್ಕಾಗಿಸಂಚರಿಸುತ್ತಾರೆ. ಅಂಥವರಿಗೆ ಮಾಸಿಕ ಪಾಸ್ ನಿಗದಿಪಡಿಸಿದ್ದು, ನಿಗದಿತ ಪಾಸ್ಗಾಗಿ ಹಣ ಎಷ್ಟೆಂದು ಟೋಲ್ನಲ್ಲಿ ದರ ಪಟ್ಟಿಯ ನಾಮಫಲಕ ಅಳವಡಿಸ ದಿರುವುದರಿಂದ ನಾಗರಿಕರಿಗೆ ಸಮಸ್ಯೆಯಾಗಿದೆ. ಅಲ್ಲದೇ ಮಾಸಿಕ ಪಾಸ್ ಗಾಗಿ ಹಣ ಪಡೆಯುವ ಸಿಬ್ಬಂದಿ ನಾಗರಿಕರಿಗೆ ತಕ್ಷಣ ಪಾಸ್ ವಿತರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿವೆ.
ಪಾಸ್ ನೀಡಲು ಸಿಬ್ಬಂದಿ ಹಿಂದೇಟು: ಪಾಸ್ ನೀಡಿದ ರಸೀದಿ ಆ ಕೂಡಲೇ ನೀಡದೆ ನಾಳೆ ಕೊಡುತ್ತೇನೆಂದು ಸತಾಯಿಸುವ ಸಿಬ್ಬಂದಿ ಪ್ರತಿ ಬಾರಿ ವಾಹನದಲ್ಲಿ ಸಂಚರಿಸುವ ಚಾಲಕರು ಕೇಳಿದಾಗ ಬೆಳಗ್ಗೆ ಸಂಜೆ ಎನ್ನುತ್ತಲೇ ಕಾಲ ಕಳೆಯುತ್ತಾರೆ. ಓರ್ವ ಗ್ರಾಹಕರ ಪಾಸ್ ಮೂರು ದಿನವಾದವಾದರೂ ವಿತರಿಸದೆ ಪಾಸ್ನ್ನು ಸಿಬ್ಬಂದಿ ತಮ್ಮ ಮನೆಗೆ ಒಯ್ದ ಘಟನೆಗಳು ನಡೆಯುತ್ತಿವೆ. ಗ್ರಾಹಕರು ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿ ತಗಾದೆ ತೆಗೆದ ನಂತರ ಪಾಸ್ ವಿತರಿಸಲಾಗಿದೆ ಎಂದು ಗ್ರಾಹಕರು ದೂರಿದ್ದಾರೆ. ಮಾಸಿಕ ಪಾಸ್ ವಿತರಿಸಿದ ನಂತರ ಪಾಸ್ನಲ್ಲಿ ಪೆನ್ನಿನ ಮೂಲಕ ಮಾರ್ಕ್ ಮಾಡಲಾಗುತ್ತಿದ್ದು, ಈ ಪದ್ಧತಿಯನ್ನು ಕೈಬಿಟ್ಟು ಸೆನ್ಸರ್ ಮೂಲಕ ನೇರವಾಗಿ ವಾಹನ ಗುರುತಿಸಿ ವಾಹನ ಮುಂದೆ ಹೋಗುವಂತೆ ನೋಡಿಕೊಳ್ಳುವ ಪದ್ಧತಿ ಜಾರಿಯಾಗಬೇಕಿದೆ.
ಸೌಜನ್ಯಯುತ ವರ್ತನೆ ಬೇಕಿದೆ: ಸಿಬ್ಬಂದಿ ಗ್ರಾಹಕರೊಂದಿಗೆ ಒರಟುತನದಿಂದ ವರ್ತಿಸುವದರಿಂದ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದು, ಅವರಲ್ಲಿ ಸೌಜನ್ಯ, ಪ್ರಾಮಾಣಿಕತೆ ಮೂಡಿಸುವ ಅವಶ್ಯಕತೆಯಿದೆ. ಅಲ್ಲದೇ ಮೇಲಧಿಕಾರಿಗಳು ಸಿಬ್ಬಂದಿ ಮೇಲೆ ನಿಗಾವಹಿಸಿ ಉತ್ತಮ ಕಾರ್ಯ ನಿರ್ವಹಣೆಗೆ ಸೂಚಿಸುವ ಅಗತ್ಯವಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಟೋಲ್ನಾಕಾ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಬಗ್ಗೆ ಹಾಗೂ ಸಿಬ್ಬಂದಿ ಒರಟುತನದ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅಗತ್ಯ ಸೇವೆ ಒದಗಿಸುವ ಪ್ರಯತ್ನಿಸಲಾಗುವುದು. –ಮಲ್ಲಿಕಾರ್ಜುನ, ಸಾಣಿಕೊಪ್ಪ ಟೋಲ್ನಾಕಾ ವ್ಯವಸ್ಥಾಪಕರು
-ಸಿ.ವೈ. ಮೆಣಶಿನಕಾಯಿ
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.