ಸಾರ್ವಜನಿಕರಿಗೆ ಪಾಸ್ ಪರದಾಟ
Team Udayavani, Mar 22, 2020, 5:44 PM IST
ಸಾಂದರ್ಭಿಕ ಚಿತ್ರ
ಬೈಲಹೊಂಗಲ: ತಾಲೂಕಿನ ಸಾಣಿಕೊಪ್ಪ ಗ್ರಾಮದ ಬಳಿ ಬೆಳಗಾವಿ-ಸವದತ್ತಿ ಮಾರ್ಗದ ರಸ್ತೆಗೆ ನಿರ್ಮಿಸಲಾದ ಟೋಲ್ ನಾಕಾದಲ್ಲಿ ಮೂಲ ಸೌಕರ್ಯಗಳಿಲ್ಲದೇ ನಾಗರಿಕರು ನಿತ್ಯ ಪರದಾಡುವಂತಾಗಿದೆ.
ಕಳೆದ ಮೂರು ತಿಂಗಳ ತಿಂದೆ ನಿರ್ಮಾಣಗೊಂಡ ಬೆಳಗಾವಿ-ಸವದತ್ತಿ ರಸ್ತೆ ಮಧ್ಯೆ ಸಾಣಿಕೊಪ್ಪ ಬಳಿ ಟೋಲ್ ನಾಕಾ ನಿರ್ಮಿಸಬಾರದೆಂದು ನಾಗರಿಕರು ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದ ನಂತರವೂ ಪ್ರಾರಂಭಗೊಂಡ ಟೋಲ್ ನಾಕಾ ನಾನಾ ಸಮಸ್ಯೆಗಳನ್ನು ಎದುರಿಸಿ ಗೊಂದಲದ ಗೂಡಾಗಿ ಪರಿಣಮಿಸಿದೆ.
ಟೋಲ್ನಾಕಾ ಬಳಿ ಸಂಚರಿಸುವ ಹಲವು ವಾಹನ ಸವಾರರು ಸ್ಥಳೀಯವಾಗಿ ಬೆಳಗಾವಿಗೆ ಉದ್ಯೋಗಕ್ಕಾಗಿಸಂಚರಿಸುತ್ತಾರೆ. ಅಂಥವರಿಗೆ ಮಾಸಿಕ ಪಾಸ್ ನಿಗದಿಪಡಿಸಿದ್ದು, ನಿಗದಿತ ಪಾಸ್ಗಾಗಿ ಹಣ ಎಷ್ಟೆಂದು ಟೋಲ್ನಲ್ಲಿ ದರ ಪಟ್ಟಿಯ ನಾಮಫಲಕ ಅಳವಡಿಸ ದಿರುವುದರಿಂದ ನಾಗರಿಕರಿಗೆ ಸಮಸ್ಯೆಯಾಗಿದೆ. ಅಲ್ಲದೇ ಮಾಸಿಕ ಪಾಸ್ ಗಾಗಿ ಹಣ ಪಡೆಯುವ ಸಿಬ್ಬಂದಿ ನಾಗರಿಕರಿಗೆ ತಕ್ಷಣ ಪಾಸ್ ವಿತರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿವೆ.
ಪಾಸ್ ನೀಡಲು ಸಿಬ್ಬಂದಿ ಹಿಂದೇಟು: ಪಾಸ್ ನೀಡಿದ ರಸೀದಿ ಆ ಕೂಡಲೇ ನೀಡದೆ ನಾಳೆ ಕೊಡುತ್ತೇನೆಂದು ಸತಾಯಿಸುವ ಸಿಬ್ಬಂದಿ ಪ್ರತಿ ಬಾರಿ ವಾಹನದಲ್ಲಿ ಸಂಚರಿಸುವ ಚಾಲಕರು ಕೇಳಿದಾಗ ಬೆಳಗ್ಗೆ ಸಂಜೆ ಎನ್ನುತ್ತಲೇ ಕಾಲ ಕಳೆಯುತ್ತಾರೆ. ಓರ್ವ ಗ್ರಾಹಕರ ಪಾಸ್ ಮೂರು ದಿನವಾದವಾದರೂ ವಿತರಿಸದೆ ಪಾಸ್ನ್ನು ಸಿಬ್ಬಂದಿ ತಮ್ಮ ಮನೆಗೆ ಒಯ್ದ ಘಟನೆಗಳು ನಡೆಯುತ್ತಿವೆ. ಗ್ರಾಹಕರು ಹಿರಿಯ ಅಧಿಕಾರಿಯನ್ನು ಸಂಪರ್ಕಿಸಿ ತಗಾದೆ ತೆಗೆದ ನಂತರ ಪಾಸ್ ವಿತರಿಸಲಾಗಿದೆ ಎಂದು ಗ್ರಾಹಕರು ದೂರಿದ್ದಾರೆ. ಮಾಸಿಕ ಪಾಸ್ ವಿತರಿಸಿದ ನಂತರ ಪಾಸ್ನಲ್ಲಿ ಪೆನ್ನಿನ ಮೂಲಕ ಮಾರ್ಕ್ ಮಾಡಲಾಗುತ್ತಿದ್ದು, ಈ ಪದ್ಧತಿಯನ್ನು ಕೈಬಿಟ್ಟು ಸೆನ್ಸರ್ ಮೂಲಕ ನೇರವಾಗಿ ವಾಹನ ಗುರುತಿಸಿ ವಾಹನ ಮುಂದೆ ಹೋಗುವಂತೆ ನೋಡಿಕೊಳ್ಳುವ ಪದ್ಧತಿ ಜಾರಿಯಾಗಬೇಕಿದೆ.
ಸೌಜನ್ಯಯುತ ವರ್ತನೆ ಬೇಕಿದೆ: ಸಿಬ್ಬಂದಿ ಗ್ರಾಹಕರೊಂದಿಗೆ ಒರಟುತನದಿಂದ ವರ್ತಿಸುವದರಿಂದ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದು, ಅವರಲ್ಲಿ ಸೌಜನ್ಯ, ಪ್ರಾಮಾಣಿಕತೆ ಮೂಡಿಸುವ ಅವಶ್ಯಕತೆಯಿದೆ. ಅಲ್ಲದೇ ಮೇಲಧಿಕಾರಿಗಳು ಸಿಬ್ಬಂದಿ ಮೇಲೆ ನಿಗಾವಹಿಸಿ ಉತ್ತಮ ಕಾರ್ಯ ನಿರ್ವಹಣೆಗೆ ಸೂಚಿಸುವ ಅಗತ್ಯವಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಟೋಲ್ನಾಕಾ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಬಗ್ಗೆ ಹಾಗೂ ಸಿಬ್ಬಂದಿ ಒರಟುತನದ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅಗತ್ಯ ಸೇವೆ ಒದಗಿಸುವ ಪ್ರಯತ್ನಿಸಲಾಗುವುದು. –ಮಲ್ಲಿಕಾರ್ಜುನ, ಸಾಣಿಕೊಪ್ಪ ಟೋಲ್ನಾಕಾ ವ್ಯವಸ್ಥಾಪಕರು
-ಸಿ.ವೈ. ಮೆಣಶಿನಕಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು