ಜನಾಕ್ರೋಶಕ್ಕೆ ರಸ್ತೆ ಸಂಚಾರ ಮತ್ತೆ ಶುರು
ಕೊರೊನಾ ನಿಯಂತ್ರಣಕ್ಕೆ ಉಗಾರ-ಐನಾಪುರ, ಉಗಾರ ಕುಡಚಿ ರಸ್ತೆ ಮುಚ್ಚಿದ್ದ ಆಡಳಿತ
Team Udayavani, Jun 13, 2021, 5:17 PM IST
ಕಾಗವಾಡ: ತಾಲೂಕಿನಲ್ಲಿ ಶನಿವಾರ ಉಗಾರ ಖುರ್ದ ಮತ್ತು ಉಗಾರ ಬುದ್ರುಕ ಪಟ್ಟಣಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದರಿಂದ ಜಿಲ್ಲಾ ಧಿಕಾರಿಗಳ ಆದೇಶ ಮೇರೆಗೆ ಶನಿವಾರ ಉಗಾರ-ಐನಾಪುರ ಮತ್ತು ಉಗಾರ-ಕುಡಚಿ ರಸ್ತೆ ಸಂಚಾರ ಕಡಿತಗೊಳಿಸಿದ್ದರು. ಆದರೆ, ಆಕಸ್ಮಿಕವಾಗಿ ಸಂಚಾರ ಕಡಿತಗೊಳಿಸಿದ್ದರಿಂದ ಜನಾಕ್ರೋಶ ಮೇರೆಗೆ ಕಾಗವಾಡ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಮತ್ತೆ ಸಂಜೆ ರಸ್ತೆ ಸಂಚಾರ ಪ್ರಾರಂಭಿಸಿದ್ದಾರೆ.
ಶನಿವಾರ ಉಗಾರ ಖುರ್ದ ಪಟ್ಟಣದಲ್ಲಿ ಒಂದೇ ದಿನ 10 ಸೋಂಕಿತರು ಪತ್ತೆಯಾಗಿದ್ದರಿಂದ ಜಿಲ್ಲಾ ಧಿಕಾರಿಗಳ ಆದೇಶ ಮೇರಿಗೆ ಕೊರೊನಾ ನಿಯಂತ್ರಣಕ್ಕೆ ಉಗಾರ-ಐನಾಪುರ ಮತ್ತು ಉಗಾರ-ಕುಡಚಿ ಮಧ್ಯದ ಎರಡು ರಸ್ತೆಗಳ ಮೇಲೆ ಕಲ್ಲು-ಮಣ್ಣು ಹಾಕಿ ಸಂಚಾರ ಕಡಿತಗೊಳಿಸಲಾಗಿತ್ತು. ಆಕಸ್ಮಿಕವಾಗಿ ಒಮ್ಮೆಲೇ ಸಂಚಾರ ಸ್ಥಗಿತಗೊಳಿಸಿದ್ದರಿಂದ ಕಾಗವಾಡದಿಂದ ಉಗಾರ ಮಾರ್ಗವಾಗಿ ಜಮಖಂಡಿ, ಕುಡಚಿ, ರಾಯಬಾಗ ಹಾಗೂ ಅಥಣಿ, ಐನಾಪುರ ಗ್ರಾಮಗಳಿಗೆ ಸಂಚಾರಿಸುವ ಎಲ್ಲ ವಾಹನಗಳು ಸಾಲುಗಟ್ಟಿ ನಿಂತವು. ಅನೇಕ ಪ್ರಯಾಣಿಕರು ಆಡಳಿತದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು.
ಸಚಿವ ಶ್ರೀಮಂತ ಪಾಟೀಲ ಅವರಿಗೆ ಮಾಹಿತಿ ತಲುಪಿ ಅವರು ಅಧಿಕಾರಿಗಳ್ಳೋಂದಿಗೆ ಚರ್ಚಿಸಿದರು. ಜನರಿಗೆ ತೊಂದರೆಯಾಗುವಂತೆ ಯಾವುದೇ ನಿರ್ಣಯ ಕೈಗೊಳ್ಳಬೇಡಿ. ಕೊರೊನಾ ಸೋಂಕಿತರು ಪತ್ತೆಯಾದ ಓಣಿಗಳಲ್ಲಿ ಬ್ಯಾರಿಕೇಡ್ ಹಾಕಿರಿ. ಮುಖ್ಯ ರಸ್ತೆ ಬಂದ್ ಮಾಡಬೇಡಿ ಎಂದು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮತ್ತೆ ರಸ್ತೆ ಸಂಚಾರ ಆರಂಭಿಸಲಾಯಿತು. ಉಗಾರ ಪುರಸಭೆ ಅಧ್ಯಕ್ಷ ಮಂಜುನಾಥ ತೇರದಾಳೆ ಮಾಹಿತಿ ನೀಡುವಾಗ, ಉಗಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದರಿಂದ ಜಿಲ್ಲಾ ಧಿಕಾರಿಗಳ ಆದೇಶ ಮೇರೆಗೆ ತಹಶೀಲ್ದಾರ್ ಮತ್ತು ಉಗಾರ ಪುರಸಭೆ ವತಿಯಿಂದ ನಿರ್ಣಯ ಕೈಗೊಳ್ಳಲಾಗಿತ್ತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ