ನೆರೆ ಮನೆ ಸಂಕಟ!


Team Udayavani, Sep 23, 2019, 12:03 PM IST

bg-tdy-3

ಬೆಳಗಾವಿ: ನದಿಗಳು ಶಾಂತವಾಗಿವೆ. ಪರಿಹಾರ ಕೇಂದ್ರಗಳ ಬಾಗಿಲು ಮುಚ್ಚಿವೆ. ಮುಳುಗಡೆ ಮತ್ತು ಜಲಾವೃತವಾಗಿದ್ದ ಯಾವ ಗ್ರಾಮದಲ್ಲೂ ಈಗ ಗ್ರಾಮಗಳ ಕಟ್ಟೆಯ ಮೇಲೆ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡು ಇಲ್ಲವೇ ಎಲೆ, ಅಡಕೆ ಜಗಿಯುತ್ತ ಕುಳಿತಿರುವ ಜನ ಕಾಣುವುದಿಲ್ಲ.

ಬಿದ್ದ ಮನೆಗಳನ್ನು ಸರಿಪಡಿಸಿಕೊಳ್ಳುವವರು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವಪಾತ್ರೆ, ಬಟ್ಟೆ ಬರೆ, ತಗಡುಗಳನ್ನು ಹುಡುಕಿ ಮೊದಲಿನಂತೆ ಮಾಡುವವರು, ಮಕ್ಕಳನ್ನು ಎಂದಿನಂತೆ ಶಾಲೆಗೆ ತಯಾರು ಮಾಡುವವರು, ನಷ್ಟದ ಅಂದಾಜನ್ನು ಅಂಕಿ-ಅಂಶಗಳ ಸಮೇತ ಸಿದ್ಧಪಡಿಸಲು ತಮ್ಮ ಊರಿಗೆ ಬರುವ ಅಧಿಕಾರಿಗಳಿಗೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ನಷ್ಟದ ದಾಖಲೆಗಳನ್ನು ಫೋಟೋ ಸಮೇತ ಸಿದ್ಧ ಮಾಡಿಕೊಳ್ಳುವವರು ಸಿಗುತ್ತಾರೆ. ಮುಳುಗಡೆ ಹಾಗೂ ಜಲಾವೃತವಾಗಿದ್ದ ಗ್ರಾಮಗಳಲ್ಲಿ ಈಗ ಕೆಲಸ ಮಾಡದವರೇ ಇಲ್ಲ. ಸೋಮಾರಿಗಳಿದ್ದರೂ ಅವರ ಸಂಖ್ಯೆ ಬಹಳ ಕಡಿಮೆ. ಗ್ರಾಮಕ್ಕೆ ಯಾರಾದರೂ ಅಧಿಕಾರಿಗಳು, ಅಪರಿಚಿತರು ಅಥವಾ ಸಂಘ ಸಂಸ್ಥೆಗಳ ಸದಸ್ಯರು ಬಂದರೆ ಸಾಕು ಇಡೀ ಗ್ರಾಮಕ್ಕೆ ಗ್ರಾಮವೇ ಅವರನ್ನು ಮುತ್ತಿಕೊಳ್ಳುತ್ತದೆ. ಆಸೆಗಣ್ಣಿನಿಂದ ಹೊಸ ಆಸರೆಗಾಗಿ ಹಾತೊರೆಯುತ್ತಾರೆ. ಬಂದವರು ಅಲ್ಲಿಂದ ಹೋಗಿದ್ದೇ ತಡ ಮತ್ತೆ ಹೊಸ ಬದುಕು ಕಟ್ಟಿಕೊಳ್ಳುವ ಕಾಯಕ ಆರಂಭವಾಗುತ್ತದೆ.

ಕೃಷ್ಣಾ ನದಿ ತೀರದ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನ ಜನರಿಗೆ ಪ್ರವಾಹ ರೂಢಿಯಾದಂತಾಗಿದೆ. 14 ವರ್ಷಗಳ ಹಿಂದಿನ ಪ್ರವಾಹ ಭೀಕರತೆಯನ್ನು ಅವರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಎರಡು ಲಕ್ಷ ಕ್ಯೂಸೆಕ್‌ ನೀರು ಅಂದರೆ ಅವರಿಗೆ ಏನೂ ಅಲ್ಲ. ಭಯದ ಮಾತೂ ದೂರ. ಆದರೆ ಈ ಬಾರಿ ಹೆಚ್ಚು ಹೊಡೆತ ತಿಂದವರು ಘಟಪ್ರಭಾ ಹಾಗೂ ಮಲಪ್ರಭಾ ನದಿ ತೀರದ ಜನರು. ಈ ನದಿಗೆ ನಿರ್ಮಾಣ ಮಾಡಿರುವ ಹಿಡಕಲ್‌ ಹಾಗೂ ಮಲಪ್ರಭಾ ಜಲಾಶಯಗಳಿಗೆ ದಾಖಲೆಯ ಪ್ರಮಾಣದಲ್ಲಿ ನೀರು ಹರಿದು ಬಂತು. ಇದರ ನೇರ ಪರಿಣಾಮ ಆಗಿದ್ದು ನದಿ ತೀರದ ಗ್ರಾಮಗಳ ಮೇಲೆ. ರಾತ್ರೋರಾತ್ರಿ ಬರುತ್ತಿದ್ದ ನೀರು ನೆಮ್ಮದಿಯಿಂದ ಇದ್ದ ಜನರ ದಿಕ್ಕು ತಪ್ಪಿಸಿತು. ಮೈಲುಗಟ್ಟಲೇ ನೀರೇ ನೋಡದೇ ಇದ್ದ ಗ್ರಾಮಸ್ಥರು ಯಾಕಾದರೂ ಮಳೆ ಬಂತು ಎಂದು ಶಪಿಸಿಕೊಳ್ಳುವಂತಾಯಿತು. ಒಂದು ತಿಂಗಳ ಹಿಂದೆ ಪ್ರವಾಹ ಸಂತ್ರಸ್ತರ ಕಂಡು ಮರುಗಿದ್ದ ಕಣ್ಣುಗಳು ಈಗ ಅವರ ಧೈರ್ಯ ಹಾಗೂ ಆತ್ಮವಿಶ್ವಾಸಕ್ಕೆ ತಲೆದೂಗುತ್ತಿವೆ. ಗಂಜಿ ಕೇಂದ್ರಗಳಲ್ಲಿ ಇವರಿಗೆ ಊಟ ಹಾಗೂ ವಸತಿಯ ತೊಂದರೆ ಇರಲಿಲ್ಲ. ಆದರೆ ಬಟ್ಟೆ ಬರೆ ಇಲ್ಲದೆ ಭಿಕ್ಷುಕರಂತೆ ಜೀವನ ನಡೆಸಬೇಕಾಗಿದ್ದು ತೀರಾ ನೋವಿನ ಸಂಗತಿ. ಹದಿನೈದು ದಿನಗಳಲ್ಲಿ ನೀರು ಮಾಡಿದ ಅನಾಹುತ ಈಜನರ ಮನದಲ್ಲಿ ಮರೆಯದ ಆಚ್ಚೊತ್ತಿ ನಿಂತಿದೆ.

ಹೊಲದಲ್ಲಿ ಮರಳು ಸಾಮ್ರಾಜ್ಯ : ನನಗೀಗ 75 ವರ್ಷ. 1962ರಿಂದ ಇದುವರೆಗೆ ನಾಲ್ಕೈದು ಪ್ರವಾಹ ನೋಡಿದ್ದೇನೆ. ಆಗ ಇಷ್ಟೊಂದು ನಷ್ಟ ಅಥವಾ ಹೆದರಿಕೆ ಎಂದೂ ಆಗಿಲ್ಲ. ಆದರೆ ಈ ಬಾರಿ ಹೇಳಲೂ ಭಯ. ಮನೆಗಳು ಬಿದ್ದವು. ಹೊಲದಾಗ ನೀರು ಮಾತ್ರ ಅಲ್ಲ ರಾಶಿ ರಾಶಿ ಉಸುಕು ಹಾಗೂ ಕಲ್ಲುಗಳು ಬಂದು ಬಿದ್ದವು. ಅದನ್ನು ಹೇಗೆ ತೆಗೆಯಬೇಕು. ಇದಕ್ಕೆ ನೀವೇ ಪರಿಹಾರ ತೋರಿಸಿ ಎಂದು ಹನುಮಂತಪ್ಪ ಹೇಳಿದಾಗ ಅವರ ಮುಂದಿನ ಬದುಕಿನ ದಾರಿಯ ದುರ್ಗಮತೆಯ ಅರಿವಾಗುತ್ತದೆ. ಈ ಸಲದ ಪ್ರವಾಹ ಭೀಕರ ಹಾಗೂ ಭಯಾನಕ. 14 ವರ್ಷದ ಹಿಂದೆ ಇದೇ ರೀತಿ ಪ್ರವಾಹದಿಂದ ಮನೆ ಮುಳುಗಿತ್ತು. ಈಗ ಮನೆಯ ಜೊತೆಗೆ ಬದುಕೂ ಮುಳುಗಿದೆ. ಸಕ್ಕರೆ, ಕಡ್ಡಿಪೆಟ್ಟಿಗೆ ಸೇರಿದಂತೆ ಎಲ್ಲವನ್ನೂ ಹೊಸದಾಗಿ ಖರೀದಿ ಮಾಡಬೇಕಿದೆ. ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಮುಂದಿನ ದಾರಿ ಗೊತ್ತಿಲ್ಲ ಎಂದು ಚಿಕ್ಕೋಡಿ ತಾಲೂಕಿನ ಕಲ್ಲೋಳದ ಚಂದ್ರಕಾಂತ ನೋವು ತೋಡಿಕೊಳ್ಳುತ್ತಾರೆ.

 ಗೋಗರೆದಾಗ ನೀರು ಬಿಡಲಿಲ್ಲ!:  ತನ್ನ 80 ವರ್ಷದ ಜೀವನದಲ್ಲಿ ಒಮ್ಮೆಯೂ ಇಷ್ಟೊಂದು ನೀರು ನೋಡದೇ ಇದ್ದ ರಾಮದುರ್ಗ ತಾಲೂಕಿನ ಚಿಕ್ಕಹಳ್ಳಿ ಹಂಪಿಹೊಳಿಯ ಭೀಮಪ್ಪ, ಇದು ನಮ್ಮ ಮೇಲೆ ದೇವರ ಸಿಟ್ಟೋ ಅಥವಾ ಅಧಿಕಾರಿಗಳ ಸಿಟ್ಟೋ ಗೊತ್ತಿಲ್ಲ. ನಮ್ಮಲ್ಲಿ ಮೊದಲೇ ಮಳೆ ಕಡಿಮೆ. ಮೂರು ತಿಂಗಳ ಹಿಂದೆ ಕುಡಿಯಲು ನೀರು ಬಿಡಿ ಎಂದು ಗೋಗರೆದುಕೊಂಡೆವು. ಡ್ಯಾಮ್‌ದಿಂದ ನೀರು ಬಿಡ್ರಿ ಎಂದ್ರೂ ಬಿಡಲಿಲ್ಲ. ಈಗ ನೀರು ಬಿಡಬ್ಯಾಡ್ರಪ ಬಂದ್‌ ಮಾಡಿ ಎಂದರೂ ಬಂದ್‌ ಮಾಡವಲ್ಲರು. ಎಲ್ಲಾ ನೀರಿನಲ್ಲಿ ಕೊಚ್ಚಿಕೊಂಡು ಹೋತು ಎಂದು ಅಳುತ್ತಲೇ ಹೇಳಿದಾಗ ಅಲ್ಲಿನ ಜನ ಎದುರಿಸಿದ ಭಯಾನಕತೆಯ ಅರಿವಾಗುತ್ತದೆ.

ದಟ್ಟ ಮೋಡ ಕವಿದರೆ ಢವಢವ:  ಮನೆಯಲ್ಲಿ ತುಂಬಿಕೊಂಡಿದ್ದ ಕೆಸರು, ನೀರಿನ ಪ್ರವಾಹದ ಜೊತೆಗೆ ಮನೆ ಸುತ್ತಲೂ ಬಂದು ಬಿದ್ದಿದ್ದ ಕಸ ಗುಡಿಸಿ ಸ್ವತ್ಛ ಮಾಡುವದರಲ್ಲಿ ತಲ್ಲೀನವಾಗಿದ್ದ ಹಂಪಿಹೊಳಿಯ ಚಂದ್ರವ್ವ ಚಿಕ್ಕನರಗುಂದ ಈಗ ನೀರು ಕಂಡರೆ ಬೆಚ್ಚಿ ಬೀಳುತ್ತಾರೆ. ನದಿ ಪಕ್ಕದಲ್ಲೇ ಮನೆ ಇರದಿದ್ದರೂ ತಮ್ಮ ಮನೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದ ನೀರಿನಿಂದ ಹೆದರಿಕೊಂಡಿರುವ ಚಂದ್ರವ್ವ ಇದುವರೆಗೂ ಅದರಿಂದ ಹೊರಬಂದಿಲ್ಲ. ಮೇಲೆ ದಟ್ಟ ಮೋಡ ಕಾಣಿಸಿದರೆ ಸಾಕು ಎಲ್ಲಿ ಮತ್ತೆ ಡ್ಯಾಮ್‌ದಿಂದ ನೀರು ಬಿಡುತ್ತಾರೆ ಎಂಬ ಚಿಂತೆ ಅವರದ್ದು. ಇದೇ ಭಯದಲ್ಲೇ ಎಲ್ಲವನ್ನೂ ಕಳೆದುಕೊಂಡೆ ಎನ್ನುತ್ತಾರೆ ಒಂದೇ ಮಾತಿನಲ್ಲಿ. ಇದು ಒಬ್ಬಿಬ್ಬರ ನೋವಿನ ಕತೆ. ಸಂಕಟ ಅಲ್ಲ. ಪ್ರವಾಹಕ್ಕೆ ಸಿಲುಕಿದ ಸಾವಿರಾರು ಮಂದಿಯ ಬದುಕಿನ ಚಿತ್ರ. ಒಂದು ರೀತಿಯಲ್ಲಿ ಎಲ್ಲ ಇದ್ದೂ ಇಲ್ಲದಂತಾದವರು. ನದಿಗಳ ಅಬ್ಬರ ಇಳಿದು ಗಂಜಿ ಕೇಂದ್ರಗಳು ಮುಚ್ಚಿದ ನಂತರ ಮತ್ತೂಂದು ಬದುಕು ಕಟ್ಟಿಕೊಳ್ಳಲು ಬಂದಿರುವ ನೂರಾರು ಗ್ರಾಮಗಳ ಜನರಿಗೆ ಈಗ ನಷ್ಟದ ಜೊತೆಗೆ ರೋಗಗಳ ಆತಂಕ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಸಂತ್ರಸ್ತರ ಮುಖದಲ್ಲಿ ಮೊದಲಿನ ನಗು ಕಾಣುತ್ತಿಲ್ಲ.

ಎಲ್ಲಿದೆ ನನ್ನ ಆಸ್ತಿ?:  ದಾನಿಗಳು, ಸಂಘ ಸಂಸ್ಥೆಗಳು ಮತ್ತು ಸರ್ಕಾರ ಏನೇ ಕೊಟ್ಟರೂ ಅವರಿಗೆ ಮೊದಲಿದ್ದ ಭದ್ರತೆ, ನೆಮ್ಮದಿ, ಉತ್ಸಾಹ ಹಾಗೂ ಭರವಸೆಗಳನ್ನು ಕೊಡಲಾಗದು. ಸಂಪೂರ್ಣವಾಗಿ ಕುಸಿದು ಹೋದ ಕುಟುಂಬದ ಅರ್ಥಿಕ ಸ್ಥಿತಿಯನ್ನು ಮರು ಸ್ಥಾಪಿಸಿಕೊಳ್ಳುವುದು ಎಷ್ಟು ಕಷ್ಟ ಎಂಬುದು ನೀರಿನಲ್ಲಿ ಎಲ್ಲವನ್ನೂ ಕಳೆದುಕೊಂಡವರಿಗೇ ಗೊತ್ತು. ಸರ್ಕಾರ ಒಂದಿಷ್ಟು ಪರಿಹಾರ, ತಾತ್ಕಾಲಿಕ ಮನೆ, ತಕ್ಷಣಕ್ಕೆ ಅಕ್ಕಿ, ಬೇಳೆ, ಪಾತ್ರೆ ಕೊಡಬಹುದು. ಆದರೆ ಮನೆಯಲ್ಲಿ ಇಟ್ಟಿದ್ದ ಆಪದ್ಧನ, ಬಂಗಾರ, ದವಸ ಧಾನ್ಯದ ದಾಸ್ತಾನು, ಬಟ್ಟೆ ಬರೆ ಎಲ್ಲಕ್ಕಿಂತ ಮುಖ್ಯವಾಗಿ ಇದು ನನ್ನದೇ ಆಸ್ತಿ ಎಂದು ಹೇಳುವ ದಾಖಲೆ, ಕಾಗದಪತ್ರಗಳನ್ನು ಯಾರು ಕೊಡುತ್ತಾರೆ. ಎಷ್ಟೋ ಕಡೆ ಹೊಲಗಳಲ್ಲಿ ಗೇಣುದ್ದ ಉಸುಕು ಹಾಗೂ ಕಲ್ಲುಗಳ ರಾಶಿ ಬಂದು ಬಿದ್ದಿದೆ. ಈ ಹೊಲಗಳು ಮತ್ತೆ   ಉಳುಮೆ ಮಾಡಲು ಬರಬೇಕೆಂದರೆ ಅದಕ್ಕೆ ಲಕ್ಷಗಟ್ಟಲೇ ಖರ್ಚು ಮಾಡಬೇಕು. ಇದೆಲ್ಲವೂ ಸರಿಹೋಗುವದು ಯಾವಾಗ ಎಂಬುದು ಮಾತ್ರ ಯಕ್ಷ ಪ್ರಶ್ನೆ.

 

-ಕೇಶವ ಆದಿ

ಟಾಪ್ ನ್ಯೂಸ್

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.