ಕರ್ಬೂಜ ಜನರಿಗೆ ದಾನ ಮಾಡಿದ ಕೃಷಿಕ
ಮಾರುಕಟ್ಟೆ ಕೊರತೆಯಿಂದಾಗಿ 8 ಎಕರೆಯಲ್ಲಿ ಬೆಳೆದಿದ್ದ ಹಣ್ಣು
Team Udayavani, Apr 10, 2020, 7:25 PM IST
ಬಳ್ಳಾರಿ: ಕೊರೊನಾ ವೈರಸ್ ಭೀತಿಯಿಂದಾಗಿ ಮಾರುಕಟ್ಟೆ ವ್ಯವಸ್ಥೆ ಸಿಗದೆ ಹೊಲದಲ್ಲೇ ನಷ್ಟಕ್ಕೀಡಾಗುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಕಬೂìಜ ಹಣ್ಣನ್ನು ರೈತರೊಬ್ಬರು ಸಾರ್ವಜನಿಕರಿಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯ ಸಂಡೂರು ತಾಲೂಕು ಕೊಡಾಲು ಗ್ರಾಮದ ತಿಮ್ಮನಗೌಡ ಹಣ್ಣನ್ನು ದಾನ ಮಾಡಿದ ರೈತ. ಗ್ರಾಮದ 8 ಎಕರೆ ಪ್ರದೇಶದಲ್ಲಿ ಕರ್ಬೂಜ ಹಣ್ಣನ್ನು ಬೆಳೆದಿದ್ದನು.
ಇಳುವರಿ ಉತ್ತಮವಾಗಿ ಬಂದಿದ್ದರೂ, ಕೊರೊನಾ ವೈರಸ್ ಆವರಿಸಿದ್ದ ಪರಿಣಾಮ ಲಾಕ್ಡೌನ್ ವಿಧಿಸಿದ್ದು, ಹಣ್ಣುಗಳನ್ನು ಮಾರಲು ಮಾರುಕಟ್ಟೆಯೇ ಇಲ್ಲವಾಗಿದ್ದು, ಹಣ್ಣುಗಳನ್ನು ಖರೀದಿ ಮಾಡಲು ವರ್ತಕರು ಸಹ ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಹಾಗಾಗಿ ಹಣ್ಣುಗಳು ಹೊಲದಲ್ಲೇ ಬಿಸಿಲಿಗೆ ಕೊಳೆತು ಹೋಗುವ ಬದಲಿಗೆ ಸಮೀಪದ ಗ್ರಾಮಗಳಲ್ಲಿ ಮನೆಮನೆಗೆ ಕೊಂಡೊಯ್ದು ದಾನ ಮಾಡುತ್ತಿದ್ದಾರೆ. ಈ ಮೂಲಕ ಲಾಕ್ಡೌನ್ ದಿನಗಳಲ್ಲಿ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಜನರಿಗೂ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.
ಕೊಡಾಲು ಗ್ರಾಮದಲ್ಲಿ 8 ಎಕರೆ ಪ್ರದೇಶದಲ್ಲಿ ಕಬೂìಜ ಹಣ್ಣನ್ನು ಬೆಳೆಯಲಾಗಿದೆ. ಇದಕ್ಕಾಗಿ 10 ಲಕ್ಷ ರೂ. ಸಾಲ ಮಾಡಿದ್ದೇನೆ. ಉತ್ತಮ ಇಳುವರಿ ಬಂದಿದ್ದು, ಫಸಲು ಕೈಗೆ ಬಂದಿದೆ. ಆದರೆ
ಲಾಕ್ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆಯೇ ಇಲ್ಲವಾಗಿದೆ. ಮೇಲಾಗಿ ವರ್ತಕರು ಸಹ ಹಣ್ಣುಗಳನ್ನು ಖರೀದಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ ಕೈಗೆ ಬಂದಿರುವ ಫಸಲನ್ನು ಮಾರುಕಟ್ಟೆಗೆ ಕೊಂಡೊಯ್ಯಲಾಗದೆ, ಕೊಡಾಲು ಸೇರಿ ಸಮೀಪದ ಚಿಕ್ಕಂತಾಪುರ, ಸುಲ್ತಾನಪುರ, ತೋರಣಗಲ್ಲು ಗ್ರಾಮಗಳಲ್ಲಿ ಮನೆಮನೆಗೆ ತೆರಳಿ ಹಣ್ಣುಗಳನ್ನು ದಾನ ಮಾಡಲಾಗಿದೆ ಎಂದು ತಿಮ್ಮೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?