ಗ್ರಾಹಕರಿಗೆ ಇನ್ನೂ ತಟ್ಟಿಲ್ಲ ಕರಭಾರ


Team Udayavani, Jul 4, 2017, 11:12 AM IST

ANkana-1.jpg

ಬಳ್ಳಾರಿ: ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾಗಿ ಮೂರು ದಿನ
ಕಳೆದಿದ್ದು, ಜನಜೀವನದ ಅವಿಭಾಜ್ಯ ಅಂಗಗಳಾದ ಹೋಟೆಲ್‌, ಪೆಟ್ರೋಲ್‌ -ಡೀಸೆಲ್‌ ಹಾಗೂ ಮೊಬೈಲ್‌ ಶಾಪ್‌
ಗಳಲ್ಲಿ ಬೆಲೆ ಹೆಚ್ಚಳವಾಗದೇ ಗ್ರಾಹಕರು ನಿರಾಳವಾಗಿದ್ದಾರೆ.

ನಗರದ ಹೋಟೆಲ್‌ಗ‌ಳಲ್ಲಿ ಎಂದಿನಂತೆ ವ್ಯಾಪಾರ ನಡೆದಿದ್ದು, ಯಾವುದೇ ಎಸಿ ರಹಿತ ಹೋಟೆಲ್‌ಗ‌ಳಲ್ಲಿ ದಿನ ನಿತ್ಯದ
ಉಪಾಹಾರ, ಕಾಫಿ, ಟೀ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದ ಕೇಂದ್ರ ಭಾಗದಲ್ಲಿರುವ ಹೋಟೆಲ್‌ ಮಯೂರಾದಲ್ಲಿ
ಯಾವುದೇ ತಿಂಡಿ-ತಿನಿಸುಗಳ ಬೆಲೆಯಲ್ಲಿ ಹೆಚ್ಚಳವಾಗದೇ ಇರುವುದು ಗ್ರಾಹಕರಲ್ಲಿ ಒಂದಿಷ್ಟು ಅಚ್ಚರಿ ತಂದಿದ್ದಂತೂ ನಿಜವಾಗಿತ್ತು. ಜಿಎಸ್‌ಟಿ ಕುರಿತು ಮಾತನಾಡಿದ ಹೋಟೆಲ್‌ ಮಾಲೀಕ ಮಧುಸೂದನ್‌, ಹೋಟೆಲ್‌ ಉದ್ಯಮದ ಮೇಲೆ ಜಿಎಸ್‌ಟಿ ಪರಿಣಾಮ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ವಾರ್ಷಿಕ 75 ಲಕ್ಷ ರೂ. ಗಳಿಗಿಂತಲೂ ಹೆಚ್ಚು ವಹಿವಾಟು
ಮಾಡುವ ಹೋಟೆಲ್‌ಗ‌ಳಿಗೆ ಶೇ.12ರಷ್ಟು ಜಿಎಸ್‌ಟಿ ವಿ ಧಿಸಲಾಗುತ್ತಿದೆ. ಎಸಿ ಇರುವ ಹೋಟೆಲ್‌ಗ‌ಳಿಗೆ ತೆರಿಗೆ ಶೇ.18ರಷ್ಟಾಗಲಿದೆ ಎಂದು ತಿಳಿಸಿದರು.

ಉತ್ತಮ ಹೋಟೆಲ್‌ಗ‌ಳು ಖರೀದಿಸುವ ಅಕ್ಕಿ, ಬೇಳೆ ಮುಂತಾದ ದಿನಸಿಗಳಿಗೆ ಜಿಎಸ್‌ಟಿಯಲ್ಲಿ ವಿನಾಯ್ತಿ ನೀಡಲಾಗಿದೆ. ಆದರೆ, ಹೋಟೆಲ್ಲಿನ ವಾರ್ಷಿಕ ವಹಿವಾಟು ಹೆಚ್ಚಿದ್ದಲ್ಲಿ ಜಿಎಸ್‌ಟಿ ಹೊರೆಯೂ ಹೆಚ್ಚಾಗಲಿದೆ. ಉತ್ತಮ ಹೋಟೆಲ್‌ಗ‌ಳಲ್ಲಿ ಒಮ್ಮೊಮ್ಮೆ ತಯಾರಿಸಿದ ಆಹಾರ ಮಾರಾಟವಾಗದೇ ಪೋಲಾಗಬಹುದು ಇದು ಹೋಟೆಲ್‌ ಮಾಲೀಕರಿಗೆ ಹೊರೆಯಾಗಲಿದೆ. ಆದರೆ, ರಸ್ತೆ ಬದಿಯ ಹೋಟೆಲ್‌ ಗಳಿಗೆ ಈ ಸಮಸ್ಯೆ ಇರುವುದಿಲ್ಲ. ಒಂದು ವೇಳೆ 75 ಲಕ್ಷ ರೂಗಳಿಗೂ ಅಧಿ ಕ ವಹಿವಾಟು ನಡೆಸುವ ಹೋಟೆಲ್‌ಗ‌ಳಿಗೆ ಜಿಎಸ್‌ಟಿ ದರದಲ್ಲಿ ಸಡಿಲಿಕೆ ಆಗದಿದ್ದಲ್ಲಿ
ಅನಿವಾರ್ಯವಾಗಿ ತಿಂಡಿ-ತಿನಿಸುಗಳ ಬೆಲೆಯೂ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಹೋಟೆಲ್‌ ಉದ್ಯಮಕ್ಕೆ ಜಿಎಸ್‌ಟಿ
ವಿ ಧಿಸುವ ಕುರಿತಂತೆ ಮೂರು ತಿಂಗಳ ಕಾಲಾವಕಾಶ ನೀಡಿದೆ. ಅಷ್ಟರಲ್ಲಿ ಈ ಹಿಂದೆ ಇದ್ದ ಶೇ.4ರ ವ್ಯಾಟ್‌ಗೆ ಶೇ.1
ಜಿಎಸ್‌ಟಿ ಸೇರಿಸಿ ಹೋಟೆಲ್‌ ಉದ್ಯಮಕ್ಕೆ ಶೇ.5ರಷ್ಟು ಜಿಎಸ್‌ಟಿ ವಿ ಧಿಸಿದರೆ ಶೇ.1ರ ತೆರಿಗೆ ಹೆಚ್ಚಳ ಸರಿದೂಗಿಸಬಹುದು. ಉಳಿದಂತೆ ವಸತಿ ಗೃಹದ ಬಾಡಿಗೆ 1000 ರೂ. ಗಿಂತಲೂ ಕಡಿಮೆ ಇದ್ದರೆ ಯಾವುದೇ
ತೆರಿಗೆ ಇಲ್ಲ. ಆದರೆ, ಬಾಡಿಗೆ 1000 ರೂ. ಮೀರಿದರೆ ಶೇ. 12ರಷ್ಟು ಜಿಎಸ್‌ಟಿಯನ್ನು ಗ್ರಾಹಕರು ಪಾವತಿಸಬೇಕು ಎಂದು ಅವರು ತಿಳಿಸಿದರು.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ: ಜಿಎಸ್‌ಟಿ ಜಾರಿಯಾದ ನಂತರ ಪೆಟ್ರೋಲ್‌ ಹಾಗೂ ಡೀಸೆ‌ಲ್‌ಗ‌ಳ ಬೆಲೆಯಲ್ಲಿ ಇಳಿಕೆಯಾಗಿದೆ. ನಗರದ ಭಾರತ್‌ ಪೆಟ್ರೋಲಿಯಂ ಉತ್ಪನ್ನಗಳ ವಿತರಕರಾದ ಕೇಶವರೆಡ್ಡಿ ಪೆಟ್ರೋಲ್‌ ಬಂಕ್‌ನಲ್ಲಿ ಜೂನ್‌ 30ರಂದು ಸಾಮಾನ್ಯ ಪೆಟ್ರೋಲ್‌ಗೆ 69.02 ರೂ ಬೆಲೆ ಇತ್ತು. ಜು. 3ರಂದು ಈ ಬೆಲೆ 65.63ಕ್ಕೆ ಇಳಿದಿತ್ತು. ಹೈಸ್ಪೀಡ್‌ ಪೆಟ್ರೋಲ್‌ ಬೆಲೆ ಜೂ. 30ರಂದು 71.84 ರೂ ಇತ್ತು, ಜು. 3ರಂದು ಈ ಬೆಲೆ 68.33 ರೂ.ಗಳಿಗೆ ಇಳಿದಿತ್ತು. ಜೂ.30ರಂದು ಡೀಸೆಲ್‌ ಬೆಲೆ 58.30 ರೂಗಳಷ್ಟಿತ್ತು. ಜು.3ರಂದು ಡೀಸೆಲ್‌ ಬೆಲೆ 55.61 ರೂ.ಗಳಿಗೆ ಇಳಿದಿತ್ತು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆ ಆಗಿದ್ದರಿಂದ ಗ್ರಾಹಕರು ಕೊಂಚ ಖುಷಿಯಲ್ಲಿದ್ದರು.

ಮೊಬೈಲ್‌ ಬೆಲೆಗಳಲ್ಲಿ ವ್ಯತ್ಯಾಸವಿಲ್ಲ;
ಜಿಎಸ್‌ಟಿ ಜಾರಿಯಾದಾಗಿನಿಂದ ಆಧುನಿಕ ಜೀವನದ ಅವಿಭಾಜ್ಯ ಅಂಗವಾಗಿರುವ ಮೊಬೈಲ್‌ ಬೆಲೆಯಲ್ಲಿ ಬದಲಾವಣೆಗಳಾಗಿಲ್ಲ. ನಗರದ ಎಸ್‌ಜಿಕೆ ಮೊಬೈಲ್‌ ಶಾಫಿಯಲ್ಲಿ ವಿವೋ, ಒಪೊ ಬ್ರಾಂಡ್‌ಗಳ ಸ್ಮಾರ್ಟ್ ಫೋನ್ಗಳನ್ನು 500 ರೂ. ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಅಂಗಡಿ
ಮಾಲೀಕ ಎಚ್‌.ಕೆ.ಬಸವರೆಡ್ಡಿ, ಆ್ಯಪಲ್‌ ಕಂಪನಿಯ ಮೊಬೈಲ್‌ ಫೋನ್‌ಗಳಿಗೆ ಶೇ. 3.5ರಿಂದ ಶೇ. 4ರವರೆಗೆ ರಿಯಾಯ್ತಿ ಘೋಷಿಸಲಾಗಿದೆ. ಆದರೆ, ಬೇರೆ ಕಂಪನಿಗಳ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಬದಲಾವಣೆಗಳಾಗಿಲ್ಲ. ಆದರೆ, ಜಿಎಸ್‌ಟಿ ಜಾರಿಯಾಗುವ ಮುನ್ನ ನಮ್ಮ ಗ್ರಾಹಕರಿಗೆ ನಮ್ಮ ಲಾಭಾಂಶದಲ್ಲಿ ಕಡಿಮೆ ಮಾಡಿ 500 ರೂಗಳ ವರೆಗೆ ರಿಯಾಯ್ತಿ ನೀಡುತ್ತಿದ್ದೇವೆ. ಆದರೆ, ಮೊಬೈಲ್‌ ಕರೆನ್ಸಿ ರಿಚಾರ್ಜ್‌ ದರಗಳಲ್ಲಿ ಬದಲಾವಣೆಗಳಾಗದಿದ್ದರೂ
ಕರೆಗಳ ದರದಲ್ಲಿ ಕೊಂಚ ಹೆಚ್ಚಳವಾಗಿದೆ ಎಂದರು. 

ಜಿಎಸ್‌ಟಿ ತೆರಿಗೆ ಪದ್ಧತಿ ಉತ್ತಮವಾಗಿದೆ. ಮುಂಚಿನಂತೆ ತೆರಿಗೆ ವರದಿ ಸಲ್ಲಿಕೆಯಲ್ಲಿದ್ದಂತ ಗೋಜಲುಗಳು ಇಲ್ಲವಾಗಿವೆ.
ಇದೊಂದು ಸರಳೀಕೃತ ತೆರಿಗೆ ಪದ್ಧತಿಯಾಗಿದ್ದು ಹೋಟೆಲ್‌ ಉಪಾಹಾರಗಳು ಗ್ರಾಹಕರಿಗೆ ಹೊರೆಯಾಗದಿರಲು ಈಗ ವಿಧಿಸಿರುವ ಶೇ. 12ರ ಜಿಎಸ್‌ಟಿ ಶೇ.5ಕ್ಕೆ ಇಳಿಕೆಯಾಗಬೇಕು.  ಎಚ್‌.ಎಸ್‌.ಮಧುಸೂದನ್‌, ಮಾಲೀಕರು, ಮಯೂರಾ
ಹೋಟೆಲ್‌

ಎಂ.ಮುರಳಿಕೃಷ್ಣ
 

ಟಾಪ್ ನ್ಯೂಸ್

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary; ಮೌಲ್ಯಮಾಪನ ಕೇಂದ್ರದಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಸಾವು

Bellary; ಮೌಲ್ಯಮಾಪನ ಕೇಂದ್ರದಲ್ಲಿ ಹೃದಯಾಘಾತದಿಂದ ಉಪನ್ಯಾಸಕ ಸಾವು

ಸಂಡೂರು: ಸದೃಢ ದೇಶ ನಿರ್ಮಾಣಕ್ಕಾಗಿ ಮೋದಿ ಬೆಂಬಲಿಸಿ-ಶ್ರೀರಾಮುಲು

ಸಂಡೂರು: ಸದೃಢ ದೇಶ ನಿರ್ಮಾಣಕ್ಕಾಗಿ ಮೋದಿ ಬೆಂಬಲಿಸಿ-ಶ್ರೀರಾಮುಲು

Bellary; ಮಾಜಿ ಮೇಯರ್ ಮಗನಿಂದ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

Bellary; ಮಾಜಿ ಮೇಯರ್ ಮಗನಿಂದ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

bellary

Bellary: ತಡರಾತ್ರಿ ಸರಣಿ ಕಳ್ಳತನ; ಎಂಟು ಮನೆಗಳಿಗೆ ನುಗ್ಗಿದ ಕಳ್ಳರು

ಲೋಕಸಭೆ ಟಿಕೆಟ್ ಮೂಲಕ ಅಜ್ಞಾತವಾಸದಿಂದ ಹೊರ ಬಂದಂತಾಗಿದೆ: ಶ್ರೀರಾಮುಲು

Bellary; ಲೋಕಸಭೆ ಟಿಕೆಟ್ ಮೂಲಕ ಅಜ್ಞಾತವಾಸದಿಂದ ಹೊರ ಬಂದಂತಾಗಿದೆ: ಶ್ರೀರಾಮುಲು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.