ಹರಪನಹಳ್ಳಿ: ಆರ್‌ಡಿ ರೂಪದಲ್ಲಿ ಹಣ ಕಟ್ಟಿಸಿಕೊಂಡು ಕೂಲಿ ಕಾರ್ಮಿಕರಿಗೆ ಲಕ್ಷಾಂತರ ವಂಚನೆ


Team Udayavani, Feb 15, 2022, 5:28 PM IST

ಹರಪನಹಳ್ಳಿ: ಆರ್‌ಡಿ ರೂಪದಲ್ಲಿ ಹಣ ಕಟ್ಟಿಸಿಕೊಂಡು ಕೂಲಿ ಕಾರ್ಮಿಕರಿಗೆ ಲಕ್ಷಾಂತರ ವಂಚನೆ

ಹರಪನಹಳ್ಳಿ: ಹೆಚ್‌ಬಿಎನ್ ಡೈರಿಸ್ ಮತ್ತು ಅಲೈಡ್ ಲಿಮಿಟೆಡ್ ಕಂಪನಿಯ ಹೆಸರಿನಲ್ಲಿ ಅನೇಕ ಕೂಲಿ ಕಾರ್ಮಿಕರಿಂದ ಆರ್‌ಡಿ ರೂಪದಲ್ಲಿ ಹಣ ಕಟ್ಟಿಸಿಕೊಂಡು ಲಕ್ಷಾಂತರ ರೂ.ಗಳನ್ನು ವಂಚಿಸಿದ ಪ್ರಕರಣ ಪಟ್ಟಣದಲ್ಲಿ ನಡೆದಿದೆ.

ಈ ಕುರಿತು ಮಂಗಳವಾರ ಪಟ್ಟಣದ ಸೊಂಡೂರುಗೇರಿ ಬೀರೇಶ್ವರ ದೇವಾಲಯದ ಆವರಣದಲ್ಲಿ ಹಣವನ್ನು ಕಳೆದುಕೊಂಡ ಪ್ರತಿನಿಧಿ ನೇತ್ರಾವತಿ ಮತ್ತು ಇತರರು ಸುದ್ದಿಗಾರರೊಂದಿಗೆ  ಲಿಖಿತ ಆರೋಪ ಮಾಡಿದರು.

ಪಟ್ಟಣದ ಸೊಂಡರಗೇರಿಯ ಅಂದಾಜು 50 ಕ್ಕೂ ಹೆಚ್ಚು ಬಡ ಕೂಲಿಕಾರ್ಮಿಕರು 2021ರಿಂದ ಆರ್‌ಡಿ ರೂಪದಲ್ಲಿ ಉತ್ತಮ ಬಡ್ಡಿ ನೀಡುತ್ತೇವೆ ಎಂದು ಹೇಳಿ ಪ್ರತಿ ತಿಂಗಳು 500, 300, 200 ರಂತೆ ಲಕ್ಷಾಂತರ ರೂ.ಗಳನ್ನು ಪಾವತಿಸಿಕೊಂಡು 5 ವರ್ಷದ ನಂತರ ಬಡ್ಡಿ ಸಮೇತ ಹಣ ಕೊಡದೆ ಕಚೇರಿಯನ್ನು ಸ್ಥಗಿತಗೊಳಿಸಿ ಹೇಳದೆ, ಕೇಳದೆ ಸಿಬ್ಬಂದಿಗಳು ಪರಾರಿಯಾಗಿದ್ದಾರೆ.

ವಂಚಿಸಿದ ಕಂಪನಿ ನಮಗೆ ಹೊಸದಾಗಿದ್ದು, ಸ್ಥಳೀಯ ಕೆಲವರು ಒಳ್ಳೆಯ ಆದಾಯ ಬರುತ್ತದೆ ಎಂದು ನಮ್ಮನ್ನು ನಂಬಿಸಿ, ಮನೆಗಳಿಗೆ ಬಂದು ನಮ್ಮಿಂದ ಹಣವನ್ನು ಕಟ್ಟಿಸಿ ಆ ನಂತರ ಕೇಳಲು ಹೋದರೆ ಹಾರಿಕೆ ಉತ್ತರ ನೀಡುತ್ತಾರೆ. ಸ್ಕೀಂನ ನಿಗದಿತ 6 ವರ್ಷ ಮುಗಿದ ನಂತರ ಹಣ ಹಾಕಿಸಿದ ಸ್ಥಳೀಯರು ಕಳೆದ 4-5 ವರ್ಷಗಳಿಂದ ಹಣ ಕೊಡಿಸುವುದಾಗಿ ಭರವಸೆ ನೀಡುತ್ತಾ ಇಲ್ಲಿಯವರೆಗೂ ಕಾಲಹರಣ ಮಾಡಿದ್ದಾರೆ.

ನಮ್ಮ ತಂಡಕ್ಕೆ ಅಂದಾಜು 7-8 ಲಕ್ಷ ರೂ.ಗಳು ವಂಚನೆಯಾಗಿದ್ದು, ಇದೇ ತಾಲೂಕಿನಾದ್ಯಂತ ಸಾಕಷ್ಟು ಜನರ ಕೋಟ್ಯಾಂತರ ರೂ.ವಂಚನೆಯಾಗಿದೆ.  ಅಲ್ಲದೇ ಈಗಾಗಲೇ ನಾನು ಕಟ್ಟಿಸಿದ ಕೆಲವರಿಗೆ ಹಣವನ್ನು ನನ್ನ ಕಡೆಯಿಂದ ಸ್ವಲ್ಪಮಟ್ಟಿಗೆ ಹಣವನ್ನು ನೀಡಿದ್ದು, ಉಳಿದವರು ಸಹ ನನಗೆ ಹಣ ನೀಡುವಂತೆ ಒತ್ತಡ ತರುತ್ತಿದ್ದಾರೆ ನಾನು ಕೂಲಿಕೆಲಸ ಮಾಡುತ್ತಿದ್ದು ಎಲ್ಲಿಂದ ಹಣ ತಂದು ಕಟ್ಟಬೇಕು ಎಂದು ತಮ್ಮ ಅಳಲು ತೋಡಿಕೊಂಡ ಅವರು ಈ ಕುರಿತು ಪೋಲಿಸ್‌ಠಾಣೆಯಲ್ಲಿ ದೂರು ಕೊಡಲು ತೀರ್ಮಾನಿಸದ್ದೇವೆ ಎಂದು ವಂಚನೆಗೊಳಗಾದ ಪಾರ್ವತಮ್ಮ, ವನಜಾಕ್ಷಿ, ಗೀತಾ, ರತ್ನಮ್ಮ, ರಾಧಮ್ಮ, ಎಂ.ರವಿಕುಮಾರ, ರೇವತಿ, ಪವಿತ್ರ, ರೇಣುಕಾ ಸೇರಿದಂತೆ ಅನೇಕರು ಲಿಖಿತ ಆರೋಪಕ್ಕೆ ಸಹಿ ಹಾಕಿದ್ದ ಪತ್ರ ಹಿಡಿದು ಆಗ್ರಹಿಸಿದರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.