ಕೋಳಿಫಾರಂ ಮುಚ್ಚಿಸಲು ಮಹಿಳೆಯರ ಒತ್ತಾಯ
Team Udayavani, May 21, 2020, 12:40 PM IST
ಹಗರಿಬೊಮ್ಮನಹಳ್ಳಿ: ಕ್ಯಾತಯನಮರಡಿ ಒಬಳಾಪುರ ಗ್ರಾಮದ ಮಹಿಳೆಯರು ಕೋಳಿಫಾರಂ ಮುಚ್ಚಿಸುವಂತೆ ತಹಶೀಲ್ದಾರ್ರನ್ನು ಒತ್ತಾಯಿಸಿದರು.
ಹಗರಿಬೊಮ್ಮನಹಳ್ಳಿ: ತಾಲೂಕಿನ ಕ್ಯಾತಯನಮರಡಿ, ಒಬಳಾಪುರ ಗ್ರಾಮದ ಮಧ್ಯಭಾಗದಲ್ಲಿರುವ ಕೋಳಿ ಫಾರಂನಿಂದಾಗಿ ನೊಣಗಳ ಹಾವಳಿ ಹೆಚ್ಚಾಗಿದ್ದು ಕೂಡಲೇ ಕೋಳಿಫಾರಂ ಬಂದ್ ಮಾಡಿ ಎಂದು ಎರಡು ಗ್ರಾಮಗಳ ಮಹಿಳೆಯರು, ಯುವಕರು ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟಿಸಿದರು.
ನೊಣಗಳ ಕಾಟದಿಂದ ಬದುಕಲು ಸಾಧ್ಯವಿಲ್ಲ ಸಾರ್, ನನಗೆ, ನನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಸ್ವಲ್ಪ ವಿಷ ಕೊಟ್ಟಿಬಿಡಿ ಸಾರ್ ಇಲ್ಲೇ ಸತ್ತು ಹೋಗ್ತಿವಿ ಎಂದು ಕ್ಯಾತಯನಮರಡಿ ಗ್ರಾಮದ ಅಜ್ಜಿ ನೀಲಮ್ಮ ತಹಶೀಲ್ದಾರ್ ಆಶಪ್ಪ ಪೂಜಾರ್ ಬಳಿ ಸಂಕಷ್ಟವನ್ನು ತೋಡಿಕೊಂಡಳು. ನೊಣಗಳ ಕಾಟವನ್ನು ಇತ್ತೀಚೆಗೆ ಗ್ರಾಮಸ್ಥರು ಶಾಸಕರ ಬಳಿ ಹೇಳಿಕೊಂಡಾಗ ಶಾಸಕರು ಎರಡು ಗ್ರಾಮಗಳಿಗೆ ಭೇಟಿನೀಡಿ ಜನರ ಸಂಕಷ್ಟವನ್ನು ಆಲಿಸಿ ಕೂಡಲೇ ಕೋಳಿಫಾರಂ ಬಂದ್ ಮಾಡುವಂತೆ ಆದೇಶಿಸಿದ್ದರು. ಶಾಸಕರ ಆದೇಶಕ್ಕೂ ಕಿಮ್ಮತ್ತು ಕೊಡದೆ ಕೋಳಿಫಾರಂನವರು ಮುಂಭಾಗದ ಗೇಟ್ನ್ನು ಬಂದ್ ಮಾಡಿ ಹಿಂಬದಿಯಲ್ಲಿ ಓಪನ್ ಮಾಡಿಕೊಂಡು ಫಾರಂ ನಡೆಸುತ್ತಿದ್ದಾರೆ. ಕೋಳಿಫಾರಂ ಮಾಲೀಕರ ಪರವಾಗಿ ಕಾಣದ ಕೈಗಳು ಹೆಚ್ಚು ಕೆಲಸ ಮಾಡುತ್ತಿವೆ ಎಂದು ಗ್ರಾಮದ ಮಾರುತಿ, ಪ್ರಕಾಶ್ ಬೇಸರದಿಂದ ತಹಶೀಲ್ದಾರ್ಗೆ ತಿಳಿಸಿದರು.
ತಹಶೀಲ್ದಾರ್ ಆಶಪ್ಪ ಪೂಜಾರ್ ಪ್ರತಿಕ್ರಿಯಿಸಿ, ಶಾಸಕರು ಭೇಟಿ ನೀಡಿದ ದಿನದಂದೆ ಸಹಾಯಕ ಆಯುಕ್ತರ ಆದೇಶದಂತೆ ಕೋಳಿಫಾರಂ ಬಂದ್ ಮಾಡಲಾಗಿತ್ತು. ನಮಗೆ ತಿಳಿಯದಂತೆ ಪುನಃ ಪ್ರಾರಂಭಿಸಿರುವುದು ಆದೇಶವನ್ನು ಧಿಕ್ಕರಿಸಿದಂತಾಗಿದೆ. ಕೂಡಲೇ ಕೋಳಿಫಾರಂ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. 50ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ