ರಾಷ್ಟ್ರಧ್ವಜದ ಮೇಲೆ ಜೀಸಸ್ ಸ್ಟಿಕ್ಕರ್ ಅಂಟಿಸಿ ಅಪಮಾನ: ಯುವಕನ ಬಂಧನ
Team Udayavani, Aug 14, 2022, 12:50 PM IST
ಬಳ್ಳಾರಿ: ರಾಷ್ಟ್ರಧ್ವಜದ ಮೇಲೆ ಜೀಸಸ್ ಸ್ಟಿಕ್ಕರ್ ಅಂಟಿಸಿ ಧ್ವಜಕ್ಕೆ ಅಪಮಾನವೆಸಗಿರುವ ಘಟನೆ ನಗರದ ಗಣೇಶ್ ಕಾಲೋನಿಯಲ್ಲಿ ಭಾನುವಾರ ನಡೆದಿದ್ದು, ಯುವಕನ್ನು ಪೊಲೀಸರು ಬಂಧಿಸಿದ್ದಾರೆ.
ರಘು ಬಂಧಿತ ಯುವಕ. ಹರ್ ಘರ್ ತಿರಂಗಾ ಅಭಿಯಾನದ ಹಿನ್ನೆಲೆಯಲ್ಲಿ ಗಣೇಶ್ ಕಾಲೋನಿಯ ಯುವಕ ರಘು ಎನ್ನುವವರು ರಾಷ್ಟ್ರಧ್ವಜದ ಮೇಲಿನ ಅಶೋಕ ಚಕ್ರದ ಮೇಲೆ ಜೀಸಸ್ ಎನ್ನುವ ಸ್ಟಿಕ್ಕರ್ ಅಂಟಿಸಿ, ಆ ಬಾವುಟವನ್ನು ತಮ್ಮ ಮನೆಯ ಮೇಲೆ ಆರೋಹಣ ಮಾಡಿ ರಾಷ್ಟ್ರಬಾವುಟಕ್ಕೆ ಅಪಮಾನವೆಸಗಿದ್ದಾರೆ.
ಇದನ್ನೂ ಓದಿ:ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ಸ್ಪರ್ಶ: ಪತ್ನಿಯನ್ನು ಉಳಿಸಿಲು ಹೋದ ಪತಿಯೂ ಸಾವು!
ಈ ಬಗ್ಗೆ ಗಮನಿಸಿದ ಹಿಂದೂಪರ ಕಾರ್ಯಕರ್ತರು ಮನೆಯ ಬಳಿ ತೆರಳಿ ಎಚ್ಚರಿಕೆ ನೀಡಿದ್ದಾರೆ. ಆದರೂ, ಯುವಕ ರಘು ಧ್ವಜ ಬದಲಿಸಿಲ್ಲ. ಸ್ಥಳಕ್ಕಾಗಮಿಸಿದ ಗಾಂಧಿನಗರ ಪೊಲೀಸರು, ಬಾವುಟದ ಮೇಲಿನ ಜೀಸಸ್ ಸ್ಟಿಕ್ಕರ್ ತೆಗೆದರು. ಸಂಭವನೀಯ ಗಲಾಟೆಯ ಮೊದಲೇ ಯುವಕ ರಘುನನ್ನು ಬಂಧಿಸಿದ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು