ಕುರುಗೋಡ: ರುದ್ರಭೂಮಿ ಸ್ವಚ್ಛಗೊಳಿಸಲು ಮುಂದಾದ ಮೃತಪಟ್ಟ ವೃದ್ದೆ ಕುಟುಂಬಸ್ಥರು.!
Team Udayavani, Sep 9, 2022, 12:14 PM IST
ಕುರುಗೋಡ: ಕಳೆದ ಮೂರು ನಾಲ್ಕು ದಿನಗಳಿಂದ ರಾತ್ರಿಯಿಡಿ ಸುರಿದ ಮಳೆಯಿಂದ ತುಂಗಭದ್ರಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಪರಿಣಾಮ ಸಮೀಪದ ಮಣ್ಣೂರು ಗ್ರಾಮದ ಸಾರ್ವಜನಿಕ ರುದ್ರಭೂಮಿ ನದಿ ದಡದಲ್ಲಿ ಇರುವುದರಿಂದ ಅರ್ಧದಷ್ಟು ಜಾಲವೃತಗೊಂಡ ಹಿನ್ನಲೆ ತುಂಬಾ ತೆಪ್ಪಗಳು ಹಾಗೂ ಜಂಗಲ್ ಕಟಿಂಗ್ ಗಳಿಂದ ಬೆಳೆದು ನಿಂತಿದೆ.
ಗ್ರಾಮದಲ್ಲಿ ಯಾರಾದ್ರೂ ನಿಧನ ಹೊಂದಿದರೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಶುಕ್ರವಾರ ಮಣ್ಣೂರು ಗ್ರಾಮದಲ್ಲಿ ವೃದ್ದೆ ಒಬ್ಬರು ನಿಧನರಾದ ಹಿನ್ನಲೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಪಕ್ಕದಲ್ಲಿ ನೀರು ಹರಿಯುತ್ತಿದ್ದು, ಇನ್ನೂ ಉಳಿದ ಜಾಗದಲ್ಲಿ ಎಲ್ಲೆಂದರಲ್ಲಿ ತೆಪ್ಪಗಳು, ಜಂಗಲ್ ಕಟಿಂಗ್ಸ್ ಗಳು ಬೆಳೆದು ನಿಂತಿದ್ದು ಸ್ವಚ್ಛತೆ ಇಲ್ಲದಾಗಿದೆ.
ಇದರಿಂದ ಗ್ರಾಮದಲ್ಲಿ ಯಾರೇ ನಿಧಾನರಾದವರನ್ನು ಅಂತ್ಯ ಸಂಸ್ಕಾರ ಮಾಡಲು ಹೊರಟರೆ ಗ್ರಾಪಂ ಹಿಡಿ ಶಾಪ ಹಾಕುತ್ತಾ ಅಂತ್ಯ ಸಂಸ್ಕಾರ ಮಾಡಿ ಬರಬೇಕಾಗಿದೆ.
ಇದರ ಒಂದು ಪರಿಸ್ಥಿತಿ ನೋಡಿ ಶುಕ್ರವಾರ ವೃದ್ದೆ ಒಬ್ಬರ ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರೆ ಸ್ವತಃ ರುದ್ರಭೂಮಿಯನ್ನು ಟ್ರ್ಯಾಕ್ಟರ್ ಮೂಲಕ ಸ್ವಚ್ಛ ಮಾಡಿ ಅಂತ್ಯ ಸಂಸ್ಕಾರ ನೆರೆವೇರಿಸಲು ಮುಂದಾದ ಘಟನೆ ನಡೆದಿದೆ.
ಪಕ್ಕದಲ್ಲೇ ಗ್ರಾಪಂ ಇದ್ದು, ಬಹಳ ದಿನಗಳಿಂದ ಇದೆ ತರ ಇದೆ. ಅಂತ್ಯ ಸಂಸ್ಕಾರ ಮಾಡಲು ಹೋಗುವರಿಗೆ ಸರಿಯಾದ ರಕ್ಷಣೆ ಇಲ್ಲದಾಗಿದೆ ಈಗಲಾದರೂ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಇತ್ತ ಕಡೆ ಭೇಟಿ ನೀಡಿ ಸ್ವಚ್ಛ ಗೊಳಿಸಲು ಮುಂದಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ