ನೀಲಗುಂದ ಶ್ರೀಗಳಿಂದ ಐಕ್ಯಮಂಟಪಕ್ಕೆ ಶಿಲಾನ್ಯಾಸ

ತಮಿಳುನಾಡು ಶಿಲ್ಪಿಗಳಿಗೆ ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ಕೊಡಲಾಗಿದೆ.

Team Udayavani, Nov 26, 2022, 2:10 PM IST

ನೀಲಗುಂದ ಶ್ರೀಗಳಿಂದ ಐಕ್ಯಮಂಟಪಕ್ಕೆ ಶಿಲಾನ್ಯಾಸ

ಹರಪನಹಳ್ಳಿ: ನೀಲಗುಂದ ಗುಡ್ಡದ ವಿರಕ್ತಮಠದ ಮ.ನಿ.ಪ್ರ ಚನ್ನಬಸವಶಿವ ಯೋಗಿಗಳು ತಮ್ಮ ಮಠದ ಆವರಣದಲ್ಲಿ ತಾವು ಲಿಂಗೈಕ್ಯರಾದ ನಂತರ ತಮ್ಮ ಅಂತ್ಯಕ್ರಿಯೆಗಾಗಿ ಕತೃಗದ್ದುಗೆ ನಿರ್ಮಾಣಕ್ಕೆ ಗುರುವಾರ ಶಿಲನ್ಯಾಸ ಮಾಡಿದರು.

25 ಅಡಿ ಅಗಲ ಹಾಗೂ 47 ಅಡಿ ಉದ್ದದ ಐಕ್ಯಮಂಟಪ ಅದರ ಮೇಲ್ಭಾಗ ಮಠದ ಮೂಲಪುರುಷ ಲಿಂಗೈಕ್ಯ ಚನ್ನಬಸವ ಶಿವಯೋಗಿಯವರ ಮೂರ್ತಿ ಸ್ಥಾಪಿಸಲು 1ಕೋಟಿ ರೂ.ಗಳ ವೆಚ್ಚದಲ್ಲಿ ಕ್ರಿಯಾಯೋಜನೆ ರೂಪಿಸಿದ್ದು ತಮಿಳುನಾಡು ಶಿಲ್ಪಿಗಳಿಗೆ ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ಕೊಡಲಾಗಿದೆ.

ನೀಲಗುಂದ ಮಠ ಹಾಳು ಬಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಹುಬ್ಬಳ್ಳಿ ಮೂರು ಸಾವಿರ ಮಠದ ಮುಜಗಂರವರಿಗೆ ನಮ್ಮ ಮಠಕ್ಕೆ ಸ್ವಾಮಿಯೊಬ್ಬರನ್ನು ನೀಡಿರಿ ಎಂದು ಕೇಳಿಕೊಂಡಾಗ ಮುಜಗಂ ಶ್ರೀಗಳ ಆದೇಶದ ಮೇರೇಗೆ ನೀಲಗುಂದ ಮಠಕ್ಕೆ 37 ವರ್ಷಗಳ ಹಿಂದೆ ಈಗಿನ ಚನ್ನಬಸವ ಶಿವಯೋಗಿಗಳು ಆಗಮಿಸಿದರು. ಅಲ್ಲಿಂದ ಈವರೆಗೆ ನೀಲಗುಂದ ಗುಡ್ಡದ ವಿರಕ್ತಮಠದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿ ದ್ದಾರೆ. ಐಟಿಐ ಕಾಲೇಜು, ಪ್ರಾಥಮಿಕ ಶಾಲೆ, ಉಚಿತ ವಸತಿ ಪ್ರಸಾದ ನಿಲಯ, ದಾಸೋಹ, ಧರ್ಮಪ್ರಚಾರ, ಪುರಾಣ ಪ್ರವಚನ ಮಾಡುತ್ತಾ ಈ ಸ್ವಾಮೀಜಿ ಸಾಗಿದ್ದಾರೆ.

ಈ ಕುರಿತು ಮಾತನಾಡಿದ ಚನ್ನ ಬಸವಶಿವಯೋಗಿಗಳು ಈ ಮಠದಲ್ಲಿ ನನಗೂ ಪೂರ್ವದಲ್ಲಿ ನಾಲ್ಕು ಜನ ಸ್ವಾಮೀಗಳು ಪೀಠಾಧಿ ಪತಿಗಳಾಗಿ ಸೇವೆ ಸಲ್ಲಿಸಿ ಲಿಂಗೈಕ್ಯರಾಗಿದ್ದಾರೆ. ಆದರೆ ಒಬ್ಬರದೂ ಕತೃಗದ್ದುಗೆ ಇಲ್ಲ. ಆದ್ದರಿಂದ ನೀವು ಬೇರೆಡೆ ಹೋಗಬೇಡಿ ಕೊನೆವರೆಗೂ ಇಲ್ಲಿಯೇ ಇರಿ ಎಂದು ಬೇರೆ ಬೇರೆ ಸ್ವಾಮಿಗಳು, ಭಕ್ತರ ಆಶಯದಂತೆ ನಾನು ಕೊನೆ ಉಸಿರುವವರೆಗೂ ಇಲ್ಲಿಯೇ ಇರಲು ನಿರ್ಣಯ ಕೈಗೊಂಡಿದ್ದು, ಅದಕ್ಕಾಗಿ ನನ್ನ ಐಕ್ಯಮಂಟಪವನ್ನು ಸ್ವತಃ ನಾನೇ ನಿರ್ಮಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ನನಗೀಗ 67 ವಯಸ್ಸು, ಲಿಂಗೈಕ್ಯವಾಗುವುದು ಯಾವಾಗ ಎಂದು ಹೇಳಲಿಕ್ಕೆ ಆಗುವುದಿಲ್ಲ, ಆದ್ದರಿಂದ ಕೆಳಗಡೆ ನನ್ನ ಇಷ್ಟದ ಪ್ರಕಾರ ಕತೃಗದ್ದುಗೆ, ಮೇಲ್ಭಾಗ ಮಠದ ಮೂಲ ಪುರುಷ ಲಿಂಗೈಕ್ಯ ಚೆನ್ನಬಸವ ಶಿವಯೋಗಿಗಳ ಮೂರ್ತಿ ಇರುವ ಗುಡಿ ನಿರ್ಮಿಸಲಾಗುವುದು.

ನನಗಾಗಿ ನಿರ್ಮಿಸುವ ಐಕ್ಯಮಂಟಪದಲ್ಲಿ ನಾನು ಇರುವವರೆಗೂ ನಿತ್ಯ ಅನುಷ್ಠಾನ ಮಾಡುತ್ತೇನೆ. ಲಿಂಗೈಕ್ಯನಾದ ನಂತರ ಭಕ್ತರು, ಇತರ ಸ್ವಾಮಿಗಳು ನನ್ನ ದೇಹವನ್ನು ಈ ಐಕ್ಯಮಂಠಪದಲ್ಲಿ ಇಟ್ಟು ಕತೃಗದ್ದುಗೆ ಮಾಡುತ್ತಾರೆ ಎಂದು ಹೇಳಿದರು. ತಮ್ಮ ಲಿಂಗೈಕ್ಯದ ನಂತರ ಹೇಗೆ ತಮ್ಮ ಸಮಾಧಿ ಇರಬೇಕು ಎಂದು ನಿರ್ಧರಿಸಿ ಈಗಲೇ ಐಕ್ಯಮಂಟಪ ನಿರ್ಮಿಸುತ್ತಿರುವುದು ಭಕ್ತರಿಗೆ ಅಚ್ಚರಿ ಮೂಡಿಸಿದೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

Neha Hiremath Case; Protest by BJP-JDS-ABVP across the state

Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.