“ಪೊಲೀಸ್‌ ಇತಿಹಾಸ’ದ ಮ್ಯೂಸಿಯಂ

ಹಳೆಯ ಕಾಲದ ತಕ್ಕಡಿ, ಬೈನಾಕುಲರ್‌, ರಿಜಿಸ್ಟರ್‌ ಪುಸ್ತಕ ಇನ್ನಿತರ ಸಂಗ್ರಹ

Team Udayavani, Oct 26, 2022, 8:10 AM IST

“ಪೊಲೀಸ್‌ ಇತಿಹಾಸ’ದ ಮ್ಯೂಸಿಯಂ

ಬಳ್ಳಾರಿ: ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಪೊಲೀಸ್‌ ಇಲಾಖೆ ಸುಮಾರು ಎರಡು ಶತಮಾನಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿದೆ. ಇಲಾಖೆ ನಡೆದು ಬಂದ ದಾರಿ, ಬಳಸಿದ ವಸ್ತುಗಳು, ಕಾಲಕಾಲಕ್ಕೆ ಬದಲಾವಣೆಯಾದ ಸಮವಸ್ತ್ರ, ವ್ಯವಸ್ಥೆಯ ಕುರಿತ ಮಾಹಿತಿಯನ್ನು ನಗರದ ಪೊಲೀಸ್‌ ಮ್ಯೂಸಿಯಂನಲ್ಲಿ ವಸ್ತುಗಳ ಸಮೇತ ಕಣ್ತುಂಬಿಕೊಳ್ಳಬಹುದು.

ಮ್ಯೂಸಿಯಂನಲ್ಲಿ ಏನೇನಿದೆ?
ಬಳ್ಳಾರಿ ಎಸ್‌ಪಿ ಕಚೇರಿ ಆವರಣದ ನವೀಕೃತ ಹಳೆಯ ಕಟ್ಟಡದಲ್ಲಿ ಈ ಪೊಲೀಸ್‌ ಮ್ಯೂಸಿಯಂ ವ್ಯವಸ್ಥೆ ಮಾಡಲಾಗಿದೆ. ಮುಟ್ಟುಗೋಲು ಹಾಕಿದ್ದ ಚಿನ್ನಾಭರಣಗಳನ್ನು ಅಳತೆ ಮಾಡಲು ಬಳಸುತ್ತಿದ್ದ ಹಳೆಯ ಕಾಲದ ತಕ್ಕಡಿ, ದೂರದ ವಸ್ತು-ವ್ಯಕ್ತಿಗಳನ್ನು ಹತ್ತಿರವಾಗಿ ಸ್ಪಷ್ಟವಾಗಿ ನೋಡುವ ಬೈನಾಕುಲರ್‌, ರಿಜಿಸ್ಟರ್‌ ಪುಸ್ತಕ, ವಾದ್ಯವೃಂದ ಸಲಕರಣೆ (ಬ್ಯಾಂಡ್‌ ಸೆಟ್‌), ಹಿಂದಿನ ಕಾಲದಿಂದ ಇದುವರೆಗಿನ ಪೊಲೀಸ್‌ ಸಮವಸ್ತ್ರ, ರಾಜ್ಯ ಪೊಲೀಸ್‌ ಇಲಾಖೆಯಲ್ಲಿ 1960ರಿಂದ 1980ರ ನಡುವೆ ಬಳಸಿದ್ದ ಎಫ್‌ಎಂ 713 ವಾಕಿಟಾಕಿ, ಆಪಾದಿತರ ಬಂಧನ ಹಾಗೂ ಕೈದಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಬಳಸುತ್ತಿದ್ದ ಕೈಕೋಳ, ಲೀಡಿಂಗ್‌ ಚೈನ್‌, ಭದ್ರತೆ ನೀಡುವಾಗ ದೇಹ, ಕೈ, ಕಾಲುಗಳ ರûಾಕವಚಗಳು, ಹೆಲ್ಮೆಟ್‌, ನಿಷಿದ್ಧ-ನಿಷೇಧಿ ತ ವಸ್ತುಗಳನ್ನು ಪತ್ತೆ ಹಚ್ಚುವ ಹ್ಯಾಂಡ್‌ ಹೆಲ್ಪ್ ಮೆಟಲ್‌ ಡಿಟೆಕ್ಟರ್‌, ವಿವಿಧ ರೀತಿಯ ಬಂದೂಕು, ಪಿಸ್ತೂಲ್‌, ಬ್ರಿಟಿಷರ ಅವಧಿ ಯಲ್ಲಿನ ಗಂಟೆ ಬಾರಿಸುವ ವಿವಿಧ ರೀತಿಯ ಗೋಡೆ ಗಡಿಯಾರಗಳು ಸೇರಿದಂತೆ ಇನ್ನಿತರ ನೂರಾರು ವರ್ಷಗಳ ಹಿನ್ನೆಲೆಯುಳ್ಳ ವಸ್ತುಗಳು ನೋಡುಗರಲ್ಲಿ ಕುತೂಹಲ ಮೂಡಿಸುತ್ತವೆ.

ಶತಮಾನದ ಇತಿಹಾಸ
ದೇಶದಲ್ಲಿ ಪೊಲೀಸ್‌ ವ್ಯವಸ್ಥೆ 184 ವರ್ಷಗಳ ಇತಿಹಾಸ ಹೊಂದಿದೆ. 1838ನೇ ಸಾಲಿನ ವರದಿ ಪ್ರಕಾರ ಆರಂಭದಲ್ಲಿ ಪೊಲೀಸರು ನಿರ್ವಹಿಸ ಬೇಕಿದ್ದ ಕೆಲಸವನ್ನು ತಳವಾರರು, ತೋಟಿಗಳು, ನೀರಗಂಟಿಗಳು, ಕಾವಲುಗಾರರು, ಅಮರಗಾರರು, ಅಂಕಮಾಲೆ, ಪಟೇಲ್‌, ಶಾನುಭಾಗ್‌ ಸೇರಿ ಹಲವರು ನಿರ್ವಹಿಸುತ್ತಿದ್ದರು. ಅನಂತರ ಸುಧಾರಣೆಯಾದ ಪೊಲೀಸ್‌ ವ್ಯವಸ್ಥೆಯಲ್ಲಿ 1847ರಲ್ಲಿ ಹೈದರಾಬಾದ್‌ ಪೊಲೀಸ್‌ ವ್ಯವಸ್ಥೆ, 1857ರಲ್ಲಿ ಮದ್ರಾಸ್‌ ಪೊಲೀಸ್‌, 1883ರಲ್ಲಿ ಮೈಸೂರು ಪೊಲೀಸ್‌, ಬಾಂಬೆ, ಕೊಡಗು ಪೊಲೀಸ್‌ ವ್ಯವಸ್ಥೆ ಜಾರಿಗೆ ಬಂದಿವೆ.

ರಿವಾಲ್ವರ್‌-ಪಿಸ್ತೂಲ್‌ ಪ್ರದರ್ಶನ
ಪೊಲೀಸ್‌ ಇಲಾಖೆಯ ಅತ್ಯಂತ
ಪ್ರಮುಖ ಆಯುಧ ಪಿಸ್ತೂಲ್‌ ಬಂದೂಕುಗಳಾಗಿದ್ದು ಮ್ಯೂಸಿ ಯಂನಲ್ಲಿ ಮಹಾಯುದ್ಧಗಳಲ್ಲಿ ಬಳಕೆ ಯಾಗಿದ್ದ ಮಾದರಿಯ ಬಂದೂಕು, ಪಿಸ್ತೂಲ್‌, ರಿವಾಲ್ವರ್‌ಗಳಾದ 303 ನಂ.1 ಮಾರ್ಕ್‌ ರೈಫಲ್‌, 303 ನಂ.4 ಮಾರ್ಕ್‌ ರೈಫಲ್‌, ನಂ.5 ಮಾರ್ಕ್‌ ರೈಫಲ್‌, 455 ರಿವಾಲ್ವರ್‌, 38 ರಗೇರ್‌ ರಿವಾಲ್ವರ್‌, 38 ರಿವಾಲ್ವರ್‌ ಮಿನಿ, 410 ಮಸ್ಕೆಟ್‌ ಬಂದೂಕು, 45 ಸಿಎಂಟಿ (ಕಾರ್ಬನ್‌ ಮಷಿನ್‌ ಥಾಂಪ್ಸನ್‌ ಗನ್‌) ಪ್ರದರ್ಶಿಸಲಾಗಿದೆ. ಬಾಡಿ ಪ್ರೊಟೆಕ್ಟರ್‌ (ದೇಹ ರಕ್ಷಾ ಕವಚ), ಲೆಗ್‌ ಪ್ರೊಟೆಕ್ಟರ್‌, ಹ್ಯಾಂಡ್‌ ಪ್ರೊಟೆಕ್ಟರ್‌, ಹೆಲ್ಮೆಟ್‌ಗಳನ್ನೂ ಇಲ್ಲಿ ನೋಡಬಹುದಾಗಿದೆ. ಹೀಗೆ ಬ್ರಿಟಿಷರ ಕಾಲದಲ್ಲಿ ಬಳಕೆ ಮಾಡುತ್ತಿದ್ದ ಇಲಾಖೆಯ ಕಡತಗಳು, ಗಡಿಯಾರಗಳು, ಬ್ಯಾಡ್ಜ್ಗಳು, ಪೊಲೀಸರಿಗೆ ಬಡ್ತಿಯಾದಾಗ ನೀಡುವ ಸ್ಟಾರ್‌ಗಳ ಮಾಹಿತಿ ಯನ್ನು ಮ್ಯೂಸಿಯಂನಲ್ಲಿ ತಿಳಿಯಬಹು ದಾಗಿದೆ. ಹೊಸದಾಗಿ ಇಲಾಖೆಗೆ ಸೇರುವ ಪೊಲೀಸ್‌ ಸಿಬಂದಿಗಳಿಗೆ ಒಳ್ಳೆಯ ಮಾಹಿತಿ ನೀಡಲಿದೆ.

– ವೆಂಕೋಬಿ ಸಂಗನಕಲ್ಲು

 

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.