ಭತ್ತ ಖರೀದಿಗೆ ರೈತರ ಒತ್ತಾಯ
ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
Team Udayavani, May 22, 2020, 5:29 PM IST
ಸಾಂದರ್ಭಿಕ ಚಿತ್ರ
ಸಿರುಗುಪ್ಪ: ನಗರದ ಎಪಿಎಂಸಿ ಆವರಣದಲ್ಲಿರುವ ಭತ್ತ ಖರೀದಿ ಕೇಂದ್ರದ ಮುಂದೆ ಭತ್ತ ಖರೀದಿಸಲು ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ವರ್ತನೆ ಖಂಡಿಸಿ ರೈತರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ರೈತ ಮುಖಂಡ ಆರ್.ಮಾಧವರೆಡ್ಡಿ ಮಾತನಾಡಿ, ಸಿರುಗುಪ್ಪ ತಾಲೂಕಿನ 38 ರೈತರು ಸ್ಥಳೀಯ ಭತ್ತ ಖರೀದಿ ಕೇಂದ್ರದಲ್ಲಿ ತಾವು ಬೆಳೆದ ಭತ್ತವನ್ನು ಮಾರಾಟ ಮಾಡಲು ನೋಂದಣಿ ಮಾಡಿಸಿ ಶ್ಯಾಂಪಲ್ಗಳನ್ನು ತಂದು ಅಧಿಕಾರಿಗಳಿಗೆ ಕೊಟ್ಟಿದ್ದಾರೆ. ಆದರೆ ಅಧಿಕಾರಿಗಳು ರೈತರು ತಂದಿರುವ ಭತ್ತದ ಶ್ಯಾಂಪಲ್ಗಳನ್ನು ಪರೀಕ್ಷಿಸಿ ಮಾರಾಟಕ್ಕೆ ಯೋಗ್ಯವಾಗಿವೆ ಎಂದು ಪ್ರಮಾಣ ಪತ್ರ ನೀಡಿದ್ದರು. ಸರ್ಕಾರ ನಿಗಧಿಪಡಿಸಿದ ರೈಸ್ ಮಿಲ್ಗಳ ಮಾಲೀಕರು ಭತ್ತದ ಶ್ಯಾಂಪಲ್ ಗಳನ್ನು ನೋಡಿ ನೀವು ಕಳಿಸಿದ ಶ್ಯಾಂಪಲ್ ಗಳಲ್ಲಿ ಕಂದು ಮತ್ತು ಸುಟ್ಟಗಾಳು ಹಾಗೂ ಕಟ್ಟಿಂಗ್ ಅಂದರೆ ನುಚ್ಚು ಜಾಸ್ತಿ ಬರುತ್ತದೆ, ಇದು 60ವೈ ಪರ್ಸೆಂಟೇಜ್ ಬರುವುದಿಲ್ಲ, ಆದ್ದರಿಂದ ಭತ್ತವನ್ನು ಖರೀದಿಸಲು ಸಾಧ್ಯವಿಲ್ಲವೆಂದು ರೈಸ್ ಮಿಲ್ ಮಾಲೀಕರು ತಿಳಿಸುತ್ತಿದ್ದಾರೆಂದು ಅಧಿಕಾರಿಗಳು ಹೇಳುತ್ತಾರೆ. ಆದ್ದರಿಂದ ನೋಂದಣಿ ಮಾಡಿಸಿ ಶ್ಯಾಂಪಲ್ಗಳನ್ನು ತಂದ ರೈತರ ಭತ್ತವನ್ನು ಖರೀದಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಮ್ಮ ಹೋರಾಟವನ್ನು ಮುದುವರಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್.ಜಿ. ಬಸವರಾಜಪ್ಪ, ಎಪಿಎಂಸಿ ಸದಸ್ಯ ಮಾಣಿಕ್ಯರೆಡ್ಡಿ ರೈತರೊಂದಿಗೆ ಚರ್ಚಿಸಿದರು. ಆಹಾರ ಇಲಾಖೆಯ ಶಿರಸ್ತೇದಾರ ಬಿ.ಮಹೇಶ್, ಎಫ್.ಸಿ. ಗೋದಾಮು ವ್ಯವಸ್ಥಾಪಕ ಗೋವಿಂದರೆಡ್ಡಿ, ರೈತರಾದ ಈರಣ್ಣ, ಮಲ್ಲಿಕಾರ್ಜುನ, ದೇವರೆಡ್ಡಿ, ಬಸವರಾಜ, ಗೋಪಾಲ, ಕೃಷ್ಣ, ರಮೇಶ, ಗುಮ್ಮಡಿ ರಾಜಶೇಖರ ಮತ್ತು ವಿವಿಧ ಗ್ರಾಮಗಳ ರೈತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Loksabha; ದಿಂಗಾಲೇಶ್ವರ ಶ್ರೀ ಸ್ಪರ್ಧೆಯ ಹಿಂದೆ ಕಾಣದ ಕೈಗಳ ಕೆಲಸವಿದೆ: ಅರವಿಂದ ಬೆಲ್ಲದ್
Phone Tapping; ತನಿಖೆಯಿಂದ ಸತ್ಯ ಬಯಲು: ಎಂ.ಬಿ.ಪಾಟೀಲ್
Bellary; ಕಾಂಗ್ರೆಸ್ ಏನೇ ಹಾರಾಟ ಮಾಡಿದರೂ ನಮಗೆ ಲಾಭ ಆಗುತ್ತದೆ: ವಿಜಯೇಂದ್ರ
Election ಬಳಿಕ ಕಾಂಗ್ರೆಸ್ ನವರು ಕೌರವರಾಗ್ತಾರೆ, ಬಿಜೆಪಿಯವರು ಪಾಂಡವರಾಗ್ತಾರೆ: ಶ್ರೀರಾಮುಲು
Ballari; ಗುರು-ಶಿಷ್ಯ ಪರಂಪರೆಗೆ ವೀರಣ್ಣ ಜ್ವಲಂತ ಸಾಕ್ಷಿ