

Team Udayavani, May 22, 2020, 5:29 PM IST
ಸಾಂದರ್ಭಿಕ ಚಿತ್ರ
ಸಿರುಗುಪ್ಪ: ನಗರದ ಎಪಿಎಂಸಿ ಆವರಣದಲ್ಲಿರುವ ಭತ್ತ ಖರೀದಿ ಕೇಂದ್ರದ ಮುಂದೆ ಭತ್ತ ಖರೀದಿಸಲು ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ವರ್ತನೆ ಖಂಡಿಸಿ ರೈತರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ರೈತ ಮುಖಂಡ ಆರ್.ಮಾಧವರೆಡ್ಡಿ ಮಾತನಾಡಿ, ಸಿರುಗುಪ್ಪ ತಾಲೂಕಿನ 38 ರೈತರು ಸ್ಥಳೀಯ ಭತ್ತ ಖರೀದಿ ಕೇಂದ್ರದಲ್ಲಿ ತಾವು ಬೆಳೆದ ಭತ್ತವನ್ನು ಮಾರಾಟ ಮಾಡಲು ನೋಂದಣಿ ಮಾಡಿಸಿ ಶ್ಯಾಂಪಲ್ಗಳನ್ನು ತಂದು ಅಧಿಕಾರಿಗಳಿಗೆ ಕೊಟ್ಟಿದ್ದಾರೆ. ಆದರೆ ಅಧಿಕಾರಿಗಳು ರೈತರು ತಂದಿರುವ ಭತ್ತದ ಶ್ಯಾಂಪಲ್ಗಳನ್ನು ಪರೀಕ್ಷಿಸಿ ಮಾರಾಟಕ್ಕೆ ಯೋಗ್ಯವಾಗಿವೆ ಎಂದು ಪ್ರಮಾಣ ಪತ್ರ ನೀಡಿದ್ದರು. ಸರ್ಕಾರ ನಿಗಧಿಪಡಿಸಿದ ರೈಸ್ ಮಿಲ್ಗಳ ಮಾಲೀಕರು ಭತ್ತದ ಶ್ಯಾಂಪಲ್ ಗಳನ್ನು ನೋಡಿ ನೀವು ಕಳಿಸಿದ ಶ್ಯಾಂಪಲ್ ಗಳಲ್ಲಿ ಕಂದು ಮತ್ತು ಸುಟ್ಟಗಾಳು ಹಾಗೂ ಕಟ್ಟಿಂಗ್ ಅಂದರೆ ನುಚ್ಚು ಜಾಸ್ತಿ ಬರುತ್ತದೆ, ಇದು 60ವೈ ಪರ್ಸೆಂಟೇಜ್ ಬರುವುದಿಲ್ಲ, ಆದ್ದರಿಂದ ಭತ್ತವನ್ನು ಖರೀದಿಸಲು ಸಾಧ್ಯವಿಲ್ಲವೆಂದು ರೈಸ್ ಮಿಲ್ ಮಾಲೀಕರು ತಿಳಿಸುತ್ತಿದ್ದಾರೆಂದು ಅಧಿಕಾರಿಗಳು ಹೇಳುತ್ತಾರೆ. ಆದ್ದರಿಂದ ನೋಂದಣಿ ಮಾಡಿಸಿ ಶ್ಯಾಂಪಲ್ಗಳನ್ನು ತಂದ ರೈತರ ಭತ್ತವನ್ನು ಖರೀದಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಮ್ಮ ಹೋರಾಟವನ್ನು ಮುದುವರಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್.ಜಿ. ಬಸವರಾಜಪ್ಪ, ಎಪಿಎಂಸಿ ಸದಸ್ಯ ಮಾಣಿಕ್ಯರೆಡ್ಡಿ ರೈತರೊಂದಿಗೆ ಚರ್ಚಿಸಿದರು. ಆಹಾರ ಇಲಾಖೆಯ ಶಿರಸ್ತೇದಾರ ಬಿ.ಮಹೇಶ್, ಎಫ್.ಸಿ. ಗೋದಾಮು ವ್ಯವಸ್ಥಾಪಕ ಗೋವಿಂದರೆಡ್ಡಿ, ರೈತರಾದ ಈರಣ್ಣ, ಮಲ್ಲಿಕಾರ್ಜುನ, ದೇವರೆಡ್ಡಿ, ಬಸವರಾಜ, ಗೋಪಾಲ, ಕೃಷ್ಣ, ರಮೇಶ, ಗುಮ್ಮಡಿ ರಾಜಶೇಖರ ಮತ್ತು ವಿವಿಧ ಗ್ರಾಮಗಳ ರೈತರು ಇದ್ದರು.
Ad
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ*ತ್ತು ಹೋಗಿದೆ: ಸಚಿವ ಸೋಮಣ್ಣ ವಾಗ್ದಾಳಿ
ಹುಡುಗಿ ಮನೆಯವರರಿಂದ ಕೊ*ಲೆ ಬೆದರಿಕೆ… ನೇಣು ಬಿಗಿದು ಆತ್ಮಹ*ತ್ಯೆಗೆ ಶರಣಾದ ಪ್ರಿಯಕರ
Ballari: ವಿಧಾನ ಪರಿಷತ್ ಮಾಜಿ ಸಭಾಪತಿ ಎನ್. ತಿಪ್ಪಣ್ಣ ನಿಧನ
ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಆರಂಭವಾಗಿದ್ದು, ಬದಲಾವಣೆ ಸನಿಹವಿದೆ: ಬಿ.ಶ್ರೀರಾಮುಲು
Siruguppa: ಸರ್ಕಾರಿ ಶಾಲೆ ಕೊಠಡಿಗಳು ಶಿಥಿಲ!
Mumbai: ಹಣವಿದ್ದ ಬ್ಯಾಗ್ ಜತೆ ಮಹಾರಾಷ್ಟ್ರ ಸಚಿವ: ವಿಪಕ್ಷಗಳಿಂದ ಟೀಕೆ
Chhattisgarh: ಒಟ್ಟು 37.5 ಲಕ್ಷ ರೂ. ಇನಾಮು ಹೊತ್ತಿದ್ದ 22 ನಕ್ಸಲರ ಶರಣಾಗತಿ
Lord’s Test: ಭಾರತದ ಎಚ್ಚರಿಕೆಯ ಬ್ಯಾಟಿಂಗ್: ರೂಟ್ 37ನೇ ಶತಕ, ಬುಮ್ರಾಗೆ 5 ವಿಕೆಟ್
ಕಡಿಮೆ ಬೆಲೆಗೆ ಎಲ್ಪಿಜಿ ಪೂರೈಕೆ: ತೈಲ ಸಂಸ್ಥೆಗಳಿಗೆ ಕೇಂದ್ರ ಸಬ್ಸಿಡಿ?
1 ವರ್ಷದಲ್ಲಿ ವಿಳಿಂಜಂ ಬಂದರಿಗೆ 400 ಹಡಗುಗಳು: ಕೇರಳ ಸಚಿವ
You seem to have an Ad Blocker on.
To continue reading, please turn it off or whitelist Udayavani.