ನರೇಗಾದಡಿ ರೈತರಿಗೆ ವಿವಿಧ ಯೋಜನೆಗಳು ಜಾರಿ
Team Udayavani, May 25, 2020, 4:40 PM IST
ಸಾಂದರ್ಭಿಕ ಚಿತ್ರ
ಸಿರುಗುಪ್ಪ: ಕೋವೀಡ್-19ನ ಕಠಿಣ ಪರಿಸ್ಥಿತಿಯಲ್ಲಿ ನರೇಗಾ ಯೋಜನೆ ರೈತರಿಗೆ ತುಂಬ ಉಪಯುಕ್ತವಾಗಿದ್ದು, ಉತ್ತಮ ಪ್ರೋತ್ಸಾಹ ಧನವು ದೊರೆಯುತ್ತಿರುವುದರಿಂದ ಹೆಚ್ಚಿನ ಆರ್ಥಿಕ ಲಾಭಗಳಿಸುವುದಲ್ಲದೆ ಕಡಿಮೆ ಜಮೀನಿನಲ್ಲಿ ಕಡಿಮೆ ಖರ್ಚಿನಿಂದ ಮಿತ ನೀರಾವರಿಯಿಂದ ಉತ್ತಮ ಫಸಲನ್ನು ಪಡೆಯುವತ್ತ ರೈತರು ಮುಖ ಮಾಡಿದ್ದಾರೆ. ತೋಟಗಾರಿಕೆ ಬೆಳೆಗಳ ಜೊತೆಗೆ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚು ಒತ್ತು ಕೊಡುವ ಉದ್ದೇಶದಿಂದ ಪ್ರದೇಶ ವಿಸ್ತರಣೆ ಜೊತೆಗೆ ಕೃಷಿಹೊಂಡ, ಕೊಳವೆ ಬಾವಿ ಮರುಪೂರ್ಣ ಹಾಗೂ ಬದು ನಿರ್ಮಾಣ ಕಾಮಗಾರಿಗಳನ್ನು ರೈತರ ಬೇಡಿಕೆಗೆ ಅನುಗುಣವಾಗಿ ಕೈಗೊಳ್ಳಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಾಲೂಕಿನಲ್ಲಿ ತೋಟಗಾರಿಕೆ ನರೇಗಾ ಯೋಜನೆಯಡಿ ಒಟ್ಟು 23 ಗ್ರಾಮಗಳಲ್ಲಿ 42 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸರಾಸರಿ 500 ಜನರಿಗೆ ಉದ್ಯೋಗ ನೀಡಲಾಗುತ್ತಿದೆ, 20 ದಿನಗಳ ಅವಧಿಯಲ್ಲಿ 2400 ಮಾನವ ದಿನಗಳ ಸೃಜಿಸಲಾಗಿದೆ. ಕೃಷಿಹೊಂಡಗಳಿಗೆ ವಿವಿಧ ಅಳತೆಗಳಿಗೆ ಅನುಗುಣವಾಗಿ ಕನಿಷ್ಠ ರೂ. 67000 ಗಳಿಂದ ರೂ.1.53ಲಕ್ಷಗಳವರೆಗೆ ಅನುದಾನ ಲಭ್ಯವಿರುತ್ತದೆ. ಕಂದಕ ಬದು ನಿರ್ಮಾಣಗಳಿಗೆ ಬದು ಗಾತ್ರಗಳಿಗೆ ಅನುಗುಣವಾಗಿ 1 ಹೆಕ್ಟೇರ್ಗೆ ಒಟ್ಟು 45 ಕಂದಕಗಳಿಗೆ ಕನಿಷ್ಟ ರೂ. 36,500ರೂಗಳಿಂದ ರೂ. 1.05 ಲಕ್ಷಗಳವರೆಗೆ ಯೋಜನೆಯ ಲಾಭ ಪಡೆಯಬಹುದಾಗಿದೆ. ಕೊಳವೆ ಬಾವಿ ಮರುಪೂರಣಕ್ಕಾಗಿ ರೂ. 20,000ಗಳವರೆಗೆ ಅನುದಾನವನ್ನು ಬಳಸಿಕೊಳ್ಳಬಹುದು. ಕೂಲಿಕಾರ್ಡ್, ಆಧಾರ್ ಕಾರ್ಡ್, ಪಹಣಿ, ಜಾತಿ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್, ಸಣ್ಣ ಹಿಡುವಳಿದಾರರ ಪತ್ರ, ಬ್ಯಾಂಕ್ ಪಾಸ್ ಪುಸ್ತಕ ನಕಲು ಪ್ರತಿ ರೈತರು ಕಡ್ಡಾಯವಾಗಿ ನೀಡಬೇಕೆಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.