ಅಹ್ವಾನ ಪತ್ರಿಕೆಯಲ್ಲಿ ಪ್ರೋಟೋಕಾಲ್ ಉಲ್ಲಂಘನೆ; ಸಾಮಾಜಿಕ ಜಾಲತಾಣದಲ್ಲಿ ಚರ್ಚೆ!
ಕುರುಗೋಡು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜೋರಾದ ಜಟಾಪಟಿ
Team Udayavani, Jan 26, 2023, 10:03 PM IST
ಕುರುಗೋಡು: ಜ.27 ರಂದು ಕುರುಗೋಡು ತಾಲೂಕಿನಲ್ಲಿ ಸುಮಾರು ಕೋಟಿ ವೆಚ್ಚದಲ್ಲಿ ಬೃಹತ್ ಮಟ್ಟದಲ್ಲಿ 100 ಹಾಸಿಗೆಗಳುಳ್ಳ ಆಸ್ಪತ್ರೆ ನಿರ್ಮಾಣ ಗೊಳ್ಳಲಿರುವ ಕಟ್ಟಡ ಕಾಮಗಾರಿಗೆ ಶಾಸಕ ಗಣೇಶ್ ಭೂಮಿ ಪೂಜೆ ನೆರೆವೇರಿಸಲಿದ್ದು,ಈಗಾಗಲೇ ಪಟ್ಟದ ಜನರಿಗೆ ಹಾಗೂ ಮುಖಂಡರಿಗೆ, ಜನಪ್ರತಿನಿಧಿಗಳಿಗೆ ಅಹ್ವಾನ ಮಾಡಲು ಕರ ಪತ್ರ ಮುಂದ್ರಣ ಮಾಡಲಾಗಿದ್ದು, ಪಟ್ಟಣದ ಬಹುತೇಕ ಜನತೆಗೆ ತಲುಪಿದ್ದು ಅದರಲ್ಲಿ ಜಿಲ್ಲೆ ಉಸ್ತುವಾರಿ ಮಂತ್ರಿಗಳು, ತಾಲೂಕು ಮಟ್ಟದ ಅಧಿಕಾರಿಗಳ ಹೆಸರುಗಳು ಸೇರಿದಂತೆ ಇತರರ ಹೆಸರುಗಳು ಮುದ್ರೆ ಆಗದೆ ಕೇವಲ ಶಾಸಕ ಗಣೇಶ್ ಅವರ ಬಗ್ಗೆ ಮುಂದ್ರಣ ವಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧಗಳು ಜೋರಾಗಿ ಚರ್ಚೆಗಳು ನಡಿಯುತ್ತಿವೆ.
ಈಗಾಗಲೇ ಕುರುಗೋಡು 100 ಹಾಸಿಗೆಗಳುಳ್ಳ ಆಸ್ಪತ್ರೆ ಸೇರಿದಂತೆ ಕಂಪ್ಲಿ ತಾಲೂಕಿನ ಕೆಲ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭೂಮಿ ಪೂಜೆ ನೆರೆವೆರಿಸಿದ್ದಾರೆ ಮತ್ತೆ ಶಾಸಕ ಗಣೇಶ್ ಅವರು ಭೂಮಿ ಪೂಜೆ ಮಾಡುವ ಅವಶ್ಯಕತೆ ಇದೆಯೇ? ಕರ ಪತ್ರದಲ್ಲಿ ಪ್ರೋಟೋಕಾಲ್ ನಿಯಮಗಳು ಒಳಗೊಂಡಿವಿಯೇ? ಎಂಬ ವಿಷಯಗಳು ಕಾರ್ಯಕರ್ತರಲ್ಲಿ ತೀವ್ರವಾಗಿ ವ್ಯಕ್ತವಾಗುತ್ತಿವೆ.
ಸುರೇಶ್ ಬಾಬು ಶಾಸಕರಿದ್ದಾಗ ಸಿದ್ದರಾಮಯ್ಯ ಅವರನ್ನು ಕೆರೆ ಭೂಮಿ ಪೂಜೆ ಮಾಡಲು ಕರಿಸಿದ್ದೇವೆ, ಆದರೆ ಶಾಸಕ ಗಣೇಶ್ ಅವರು ಈ ತರ ಮಾಡೋದು ಅವರ ಸ್ಥಾನಕ್ಕೆ ಶೋಭೆಯಲ್ಲ ಎಂದು ನಾಳೆ ನಡೆಯುವ ಕಾರ್ಯಕ್ರಮದ ಬಗ್ಗೆ ಚರ್ಚೆಗಳು ಜೋರಾಗಿ ನಡಿಯುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ