ಆಲ್ದಾಳ-ಮೈಲಾರಪ್ಪ ಸಗರ ನಾಡಿನ ಚೇತನರು
Team Udayavani, Apr 26, 2021, 8:25 PM IST
ಸುರಪುರ : ನಾಟಕಕಾರ ರಂಗಕರ್ಮಿ ಎಲ್ಬಿಕೆ ಆಲ್ದಾಳರು ಭಾವೈಕ್ಯತೆ ಕೊಂಡಿಯಾಗಿದ್ದರು. ಬಾಲ್ಯದಿಂದಲೇ ಮಠದಲ್ಲಿಯೇ ಬೆಳೆದು ಆಧ್ಯಾತ್ಮಿಕತೆ ಮೈಗೂಡಿಸಿಕೊಂಡು ಶರಣರಾಗಿದ್ದರು. ಸಗರ ಮೈಲಾರಪ್ಪ ರೈತ ಚಳವಳಿಯಿಂದ ಪ್ರಸಿದ್ಧರಾಗಿದ್ದರು. ಇಬ್ಬರೂ ಸಗರ ನಾಡಿನ ಚೇತನಗಳು ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಹೇಳಿದರು.
ನಗರದ ಗರುಡಾದ್ರಿ ಕಲಾಮಂದಿರದಲ್ಲಿ ತಾಲೂಕು ಕಸಾಪ ವತಿಯಿಂದ ಎಲ್ಬಿಕೆ ಆಲ್ದಾಳ, ಮೈಲಾರಪ್ಪ ಸಗರ ಅವರಿಗೆ ಏರ್ಪಡಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಾಟಕ ರಂಗವೇ ಅವರ ಬದುಕಾಗಿತ್ತು. ಅಂತೆಯೇ ಅವರಿಗೆ ಗುಬ್ಬಿ ವೀರಣ್ಣ, ರಾಜ್ಯೋತ್ಸವ, ಆಳ್ವಾಸ್ ನುಡಿಸಿರಿ ಹೀಗೆ ಅನೇಕ ಪ್ರಶಸ್ತಿ ಬಂದವು. ನೂರಾರು ನಾಟಕ, ಪುರಾಣ, ವಚನ ರಚಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದರು ಎಂದು ಸ್ಮರಿಸಿದರು. ಹೈಕೋರ್ಟ್ ವಕೀಲ ಜೆ. ಅಗಸ್ಟಿನ್, ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿದರು.
ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ನ್ಯಾಯವಾದಿ ನಿಂಗಣ್ಣಚಿಂಚೋಡಿ, ಕವಿಗಳಾದ ನಬೀಲಾಲ ಮಕಾನದಾರ, ಬೀರಣ್ಣ ಆಲ್ದಾಳ, ಎಚ್. ರಾಠೊಡ, ಕನಕಪ್ಪ ವಾಗನ ಗೇರಿ, ಪಂಡಿತ ನಿಂಬೂರೆ, ಶ್ರೀಹರಿರಾವ್ ಆದೋನಿ, ಸೋಮರೆಡ್ಡಿ ಮಂಗಿಹಾಳ, ಕುತುಬುದ್ಧೀನ್ ಅಮ್ಮಾಪುರ, ಯಲ್ಲಪ್ಪ ಹುಲಕಲ್ಲ, ಗೋಪಣ್ಣ ಯಾದವ, ಅನ್ವರ್ ಜಮಾದಾರ, ಶಾಂತರಾಜ ಬಾರಿ, ಎ. ಕಮಲಾಕರ, ಜಾವೇದ ಹವಲ್ದಾರ, ವೆಂಕಟೇಶ ಪಾಟೀಲ ರಾಘವೇಂದ್ರ ಭಕ್ರಿ ಇದ್ದರು. ದೇವು ಹೆಬ್ಟಾಳ ನಿರೂಪಿಸಿದರು. ರಾಜಶೇಖರ ದೇಸಾಯಿ ಸ್ವಾಗತಿಸಿದರು. ಶ್ರೀಶೈಲ ಯಂಕಂಚಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ