ಜಾನುವಾರು ಶೆಡ್ ಬಿಲ್ಗೆ ಇನ್ನಿಲ್ಲದ ಪರದಾಟ
Team Udayavani, Aug 29, 2022, 6:40 PM IST
ಮುದಗಲ್ಲ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿಕೊಂಡ ಜಾನುವಾರು ಶೆಡ್ ಬಿಲ್ ಪಡೆಯಲು ಸಮೀಪದ ತಲೇಖಾನ ಗ್ರಾಪಂ ವ್ಯಾಪ್ತಿಯಲ್ಲಿನ ಫಲಾನುಭವಿಗಳು ತಾಪಂ-ಗ್ರಾಪಂ ಕಾರ್ಯಾಲಯಗಳಿಗೆ ಅಲೆಯುವಂತಾಗಿದೆ.
2020-21ನೇ ಸಾಲಿನ ಖಾತ್ರಿ ಯೋಜನೆಯಡಿ ತಲೇಖಾನ ಗ್ರಾಪಂದಲ್ಲಿ 200ಕ್ಕೂ ಹೆಚ್ಚು ಜಾನುವಾರು ಶೆಡ್ ಮತ್ತು ಕುರಿ ಶೆಡ್ಗಳನ್ನು ನಿರ್ಮಿಸಿಕೊಂಡು ಕೂಲಿ ಹಣ ಹೊರತುಪಡಿಸಿ ಬಿಒಸಿ ಅನುದಾನ ಪಾವತಿಸದೆ ಫಲಾನುಭವಿಗಳಿಗೆ ಸತಾಯಿಸಲಾಗುತ್ತಿದೆ. ರೈತರು ಸಾಲ ಮಾಡಿ ತಗಡು, ಇಟ್ಟಿಗೆ, ಸಿಮೆಂಟ್, ಕಂಕರ, ಉಸುಕು ತಂದು ಜಾನುವಾರುಗಳ ರಕ್ಷಣೆಗೆ ಶೆಡ್ ನಿರ್ಮಿಸಿಕೊಂಡಿದ್ದಾರೆ. ಆದರೆ 4-5 ತಿಂಗಳಲ್ಲಿ ಸಾಮಗ್ರಿ ವೆಚ್ಚ ಪಾವತಿಯಾಗಬೇಕು. ಆದರೆ ಎರಡು ವರ್ಷ ಗತಿಸಿದರೂ ಸಾಮಗ್ರಿ ವೆಚ್ಚ ಪಾವತಿಯಾಗಿಲ್ಲ. ಇದರಿಂದ ಫಲಾನುಭವಿ ರೈತರು ಆತಂಕ ಪಡುವಂತಾಗಿದೆ. ಮೊದಲ ಹಂತದಲ್ಲಿ ಬಿಡುಗಡೆಯಾದ ಸಾಮಗ್ರಿ ವೆಚ್ಚದಲ್ಲಿ ಸುಮಾರು 150 ಶೆಡ್ ಗಳಿಗೆ ಬಿಒಸಿ ಹಣ ಪಾವತಿಯಾಗಿದೆ.
ಎರಡು ಮತ್ತು ಮೂರನೇ ಹಂತದಲ್ಲಿ 40ಕ್ಕೂ ಹೆಚ್ಚು ಕಾಮಗಾರಿಗಳಿಗೆ ಸಾಮಗ್ರಿ ವೆಚ್ಚ ಪಾವತಿಸಿದ್ದು, ಇನ್ನು ಸುಮಾರು 50 ಕಾಮಗಾರಿಗಳಿಗೆ ಸಾಮಗ್ರಿ ವೆಚ್ಚ ಪಾವತಿಯಾಗಬೇಕಿದೆ ಎಂದು ಪಿಡಿಒ ಮಹ್ಮದ ಉಮ್ಮರ್ ತಿಳಿಸಿದರು.
ಸುಮಾರು ಸಾವಿರ ಕಾಮಗಾರಿಗಳು ಹೈಡ್ ಆಗಿವೆ. ನರೇಗಾ ತಂತ್ರಾಂಶದಲ್ಲಿ ಕಾಣ ಸಿಗುತ್ತಿಲ್ಲ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. –ಶಿವಾನಂದ ರಡ್ಡಿ, ನರೇಗಾ ಸಹಾಯಕ ನಿರ್ದೇಶಕರು ತಾಪಂ ಮಸ್ಕಿ.
ಜಾನುವಾರು ಶೆಡ್ ನಿರ್ಮಿಸಿಕೊಂಡ ಫಲಾನುಭವಿಗಳು ದಿನಂಪ್ರತಿ ಗ್ರಾಪಂಗೆ ಅಲೆಯುತ್ತಿದ್ದಾರೆ. ನಾನು ಸಹ ಸಾಮಗ್ರಿ ವೆಚ್ಚ ಪಾವತಿಸುವ ಬಗ್ಗೆ ತಾಪಂ, ಜಿಪಂ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. -ಮೌನೇಶ ರಾಠೊಡ, ಅಧ್ಯಕ್ಷರು, ಗ್ರಾಪಂ ತಲೇಖಾನ
-ದೇವಪ್ಪ ರಾಠೊಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್