ಎಂಎಸ್ಪಿಸಿ ಕೇಂದ್ರಕ್ಕೆ ಡಿಸಿ- ಸಿಇಒ ಭೇಟಿ, ಪರಿಶೀಲನೆ
Team Udayavani, Nov 23, 2021, 5:52 PM IST
ಬೀದರ: ಇಲ್ಲಿನ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಮತ್ತು ತರಬೇತಿ ಕೇಂದ್ರ (ಎಂಎಸ್ಪಿಸಿ)ಕ್ಕೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಜಹೀರಾ ನಸೀಮ್ ಅವರು ಸೋಮವಾರ ದಿಢೀರ್ ಭೇಟಿ ನೀಡಿ, ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಿದರು.
ಆಹಾರ ಪದಾರ್ಥಗಳಾದ ಬೆಲ್ಲ, ಹೆಸರು ಕಾಳು, ಹೆಸರು ಬೇಳೆ, ತೊಗರಿ ಬೇಳೆ, ಸಕ್ಕರೆ, ಅಕ್ಕಿ ಮೊದಲಾದ ಎಲ್ಲಾ ಆಹಾರ ಪದಾರ್ಥಗಳ ಗುಣಮಟ್ಟ ಪರಿಶೀಲಿಸಿದರು.
ಎಂಎಸ್ಪಿಸಿ ಕೇಂದ್ರದ ಹೊರ ಆವರಣ ಹಾಗೂ ಒಳಾವರಣವನ್ನು ಸ್ವತ್ಛವಾಗಿಟ್ಟುಕೊಂಡು ಆಹಾರ ಪದಾರ್ಥಗಳನ್ನು ಸ್ವತ್ಛ ಪಡಿಸಿಕೊಂಡು ಅಂಗನವಾಡಿ ಕೇಂದ್ರಗಳಿಗೆ ನಿಗದಿತ ಸಮಯದಲ್ಲಿ ಸರಬರಾಜು ಮಾಡಬೇಕೆಂದು ಸಂಬಂ ಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಆಹಾರ ಪದಾರ್ಥಗಳನ್ನು ಉತ್ಪಾದಿಸುವ ಯಂತ್ರಗಳನ್ನು ಸಹ ಇದೇ ವೇಳೆ ಪರಿಶೀಲಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರವೀಂದ್ರ ರತ್ನಾಕರ ಹಾಗೂ ಇತರರು ಇದ್ದರು.