ಉಪಚುನಾವಣೆ ಬಹಿಷ್ಕರಿಸಲು ನಿರ್ಧಾರ
Team Udayavani, Dec 4, 2020, 2:11 PM IST
ಬಸವಕಲ್ಯಾಣ: ಸಂವಿಧಾನದ ಪ್ರಕಾರಸರ್ಕಾರ ಜಂಗಮ ಸಮಾಜಕ್ಕೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಬೇಕು. ಇಲ್ಲದಿದ್ದರೆ ಮುಂಬರುವ ಬಸವಕಲ್ಯಾಣ ಉಪಚುನಾವಣೆ ಬಹಿಷ್ಕರಿಸಲು ಸಮಾಜದ ಮುಖಂಡರಿಂದ ಒಮ್ಮತದನಿರ್ಣಯ ಕೈಗೊಳ್ಳಲಾಗಿದೆ ಎಂದು ಸಮಾಜದ ಮುಖಂಡ ರವೀಂದ್ರ ಸ್ವಾಮಿ ಹೇಳಿದರು.
ನಗರದ ಆರ್ಯ ಸಮಾಜಭವನದಲ್ಲಿ ಬೀದರ್ ಜಿಲ್ಲಾ ಬೇಡ ಜಂಗಮ ಸಮಾಜದವತಿಯಿಂದ ಆಯೋಜನೆ ಮಾಡಿದಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಹೋರಾಟದ ಮುಖಾಂತರ ಈಗಾಗಲೇ ಜಾತಿಪ್ರಮಾಣಪತ್ರ ಪಡೆದಿದ್ದೇನೆ. ಅದೇರೀತಿ ಸಮಾಜದಲ್ಲಿ ತುಳಿತಕ್ಕೊಳಗಾದಬೇಡ ಜಂಗಮ ಸಮಾಜಬಾಂಧವರಿಗೆ ಪರಿಶಿಷ್ಟ ಜಾರಿ ಪ್ರಮಾಣಪತ್ರ ನೀಡುವವರೆಗೂ ಹೋರಾಟ ಮುಂದುವರೆಸಲಾಗುವುದು ಎಂದರು.
ಬೇಡ ಜಂಗಮ ಸಮಾಜದ ಸಂಸ್ಥೆಯ ಜಿಲ್ಲಾಧ್ಯಕ್ಷ ಡಾ| ಬಸವರಾಜ ಸ್ವಾಮಿ ಮಾತನಾಡಿ, ಬೇಡ ಜಂಗಮ ಪ್ರಮಾಣ ಪತ್ರ ನೀಡಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ.ಒಂದು ವೇಳೆ ಜಾತಿ ಪ್ರಮಾಣ ಪತ್ರ ನೀಡದೆ ಹೋದರೆ ಬೇಡಜಂಗಮ ಸಮಾಜದ ರಾಜ್ಯಮಟ್ಟದಸಮಾವೇಶವನ್ನು ಬಸವಕಲ್ಯಾಣದಲ್ಲಿಹಮ್ಮಿಕೊಳ್ಳುವ ಮೂಲಕ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನ್ಯಾಯವಾದಿ ನಾಗೇಂದ್ರ ಸ್ವಾಮಿ ಮಾತನಾಡಿದರು. ಡಾ| ಎಸ್.ಸಿ. ಕಳ್ಳಿಮಠ, ಮಲ್ಲಯ್ಯ ಸ್ವಾಮಿ, ಪಂಚಾಕ್ಷರಿ ಜಿ ಹಿರೇಮಠ,ನ್ಯಾಯವಾದಿಗಳಾದ ರೇಣುಕಾ ಮಠಪತಿ, ಬಸಯ್ಯ ಟೆಂಗಿಮಠ, ವೈಜಿನಾಥ ವಡ್ಡೆ, ಶಾಂತವೀರ ಪೂಜಾರಿ,ವರದಯ್ಯ ಸ್ವಾಮಿ ಶ್ರೀಕಾಂತ ಸ್ವಾಮಿ, ಶಿವಲಿಂಗಯ್ಯ ಸ್ವಾಮಿ, ಬೂದಯ್ಯ ಮಠಪತಿ, ಸದಾನಂದ ಕಣಜೆ, ರಾಕೇಶ ಪುರವಂತ, ರೇವಣಸಿದ್ದಯ್ಯ ಮಠಪತಿ,ಬಸವರಾಜ ಸ್ವಾಮಿ ಬಟಗೇರಾ,ರವಿ ಸ್ವಾಮಿ ಮಹಾಂತಯ್ಯ ಸ್ವಾಮಿ, ಪ್ರಭುಲಿಂಗಯ್ಯ ಟಂಕಸಾಲಿಮಠ ಇದ್ದರು.
ನಂತರ ಬೇಡ ಜಂಗಮ ಸಮಾಜಕ್ಕೆ ಬೇಡ ಜಂಗಮ ಪ್ರಮಾಣ ಪತ್ರ ನೀಡಬೇಕೆಂದು ಉಪ ತಹಶೀಲ್ದಾರ್ ಶಿವಾನಂದ ಮೇತ್ರೆ ಮುಖಾಂತರ ಸಿಎಂ ಬಿಎಸ್ವೈ ಅವರಿಗೆ ಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ