ಎಸ್ಸಿಪಿ-ಟಿಎಸ್ಪಿ ಅನುಷ್ಠಾನಕ್ಕೆ ಒತ್ತು ನೀಡಿ


Team Udayavani, Dec 19, 2020, 5:24 PM IST

bidar-tdy-2

ಬೀದರ: ಪರಿಶಿಷ್ಟ ಜಾತಿ ಹಾಗೂ ಪಂಗಡದ ಉಪ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ಆರ್‌ ಅವರು ಸಂಬಂ ಸಿದ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿಯಲ್ಲಿ ನಡೆದ ಎಸ್‌ ಸಿ-ಎಸ್‌ಟಿ ಉಪ ಯೋಜನೆಗಳಡಿಯಲ್ಲಿ ವಿವಿಧಅಭಿವೃದ್ಧಿ ಇಲಾಖಾವಾರು ಕಾರ್ಯಕ್ರಮಗಳ ಪ್ರಗತಿಪರಿಶೀಲನೆ ನಡೆಸಿ ಮಾತನಾಡಿದ ಅವರು, ವಿಶೇಷಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಧಿಕಾರಿಗಳು ವೈಯಕ್ತಿಕವಾಗಿ ಗಮನ ಹರಿಸಿ, ಇದು ಅತೀ ಜರೂರುಎಂದು ಪರಿಗಣಿಸಿ ಭೌತಿಕ ಮತ್ತು ಆರ್ಥಿಕ ಸಾಧನೆಗೆ ಒತ್ತು ಕೊಡಬೇಕು ಎಂದು ತಿಳಿಸಿದರು.

ಅನುದಾನ ಬಂದಿಲ್ಲ ಎನ್ನುವ ಕಾರಣ ಹೇಳಿ ಎಸ್‌ಸಿ-ಎಸ್‌ಟಿ ಉಪ ಯೋಜನೆಗಳ ಪ್ರಗತಿಗೆ ಒತ್ತು ಕೊಡದಿದ್ದಲ್ಲಿ ಅಧಿ ಕಾರಿಗಳು ಶಿಕ್ಷಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಡಿಸಿ, ಯೋಜನೆಗಳಿಗೆ ಅನುದಾನ ಬಿಡುಗಡೆ ಆಗುವವರಗೆ ಕಾಯದೇ ಫಲಾನುಭವಿಗಳ ಆಯ್ಕೆಗೆ ಮೊದಲಾದ್ಯತೆ ನೀಡಬೇಕು. ಬಳಿಕ ಭೌತಿಕ ಸಾಧನೆಯನುಸಾರ ಅನುದಾನ ಕೇಳಿ ಆರ್ಥಿಕ ಪ್ರಗತಿಗೆ ಗಮನ ಹರಿಸಬೇಕು ಎಂದು ಸೂಚಿಸಿದರು.

ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ: ಎಸ್ಸಿಪಿ ಮತ್ತುಟಿಎಸ್ಪಿ ಯೋಜನೆಯ ಪ್ರಗತಿಯ ಸಭೆಗೆ ವಿಳಂಬವಾಗಿ ಆಗಮಿಸಿದ್ದಕ್ಕೆ ಮತ್ತು ಸಭೆಗೆ ಅಸಮರ್ಪಕ ಮಾಹಿತಿ ನೀಡಿದ ಕೆಲವು ಅಧಿಕಾರಿಗಳ ಕಾರ್ಯವೈಖರಿಗೆ ಜಿಲ್ಲಾಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಮಾಹಿತಿಯನ್ನು ಅಸಮರ್ಪಕವಾಗಿ ನೀಡಿದ ಹಾಗೂ ಸಭಾ ಸೂಚನೆ ಪತ್ರ ತಲುಪಿಸಿದ್ದರೂ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲು ಆದೇಶಿಸಿದರು.

ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಉಪ ಕಾರ್ಯದರ್ಶಿ ಸೂರ್ಯಕಾಂತ ಎಸ್‌.,ಯೋಜನಾ ನಿರ್ದೇಶಕ ವಿಜಯಕುಮಾರ ಮಡ್ಡೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯಲಕ್ಷ್ಮಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಸರೋಜಾ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು ಇದ್ದರು. ಪರಿಣಾಮಕಾರಿ ಚಟುವಟಿಕೆ ನಡೆಸಿ: ಭಾರತೀಯರೆಡ್‌ ಕ್ರಾಸ್‌ ಸಂಸ್ಥೆಯ ವಿಶೇಷ ಸಭೆಯು ಡಿಸಿ ರಾಮಚಂದ್ರನ್‌ ಅವರ ಅಧ್ಯಕ್ಷತೆಯಲ್ಲಿ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಡಿಸಿ, ಜಿಲ್ಲೆಯಲ್ಲಿ ರೆಡ್‌ಕ್ರಾಸ್‌ ಸಂಸ್ಥೆಯ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಡೆಯಬೇಕು. ಸಂಸ್ಥೆಯ ಎಲ್ಲ ಸದಸ್ಯರು ಉಪ ಸಮಿತಿ ರಚಿಸಿಕೊಂಡು, ಪ್ರತಿ ವಾರ ಸಭೆ ನಡೆಸಿ ಎಲ್ಲ ಕಾರ್ಯ ಚಟುವಟಿಕೆಗಳು ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಜನರಿಗೆ ಉತ್ತಮ ಆರೋಗ್ಯ ಸಲಹೆಗಳು ಅತೀ ಅವಶ್ಯವಿದೆ. ಸಂಸ್ಥೆಯಿಂದ ಜಿಲ್ಲೆಯಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರದಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ಮಾಡಿದರು.

ಡಿಎಚ್‌ಒ ಡಾ.ವಿ.ಜಿ.ರೆಡ್ಡಿ ಮಾತನಾಡಿದರು. ಸಂಸ್ಥೆಯ ರಾಜ್ಯ ಆಡಳಿತ ಮಂಡಳಿಯ ಸದಸ್ಯ ವೈಜಿನಾಥ ಕಮಠಾಣೆ, ಸಭಾಪತಿ ಡಾ.ಕೆ.ರಾಜಕುಮಾರ, ಕಾರ್ಯದರ್ಶಿ ವಿದ್ಯಾ ಪಾಟೀಲ, ಖಜಾಂಚಿ ಡಾ.ಸಿ.ಆನಂದರಾವ್‌, ಆಡಳಿತ ಮಂಡಳಿಯ ಸದಸ್ಯರಾದ ಸುಮನಬಾಯಿ ಶಿಂಧೆ ಹಾಗೂ ಇತರರು ಇದ್ದರು.

Ad

ಟಾಪ್ ನ್ಯೂಸ್

1-aa-aa-huli

ಹುಲಿಕಲ್‌ ಘಾಟಿ ರಸ್ತೆ ಅಭಿವೃದ್ಧಿ ; 39.50 ಕೋ.ರೂ. ಪ್ರಸ್ತಾವನೆ

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

Mumbai; ಹಲ್ಲೆಕೋರ ಮಹಾರಾಷ್ಟ್ರ “ಶಿಂಧೆ’ ಶಾಸಕನ ವಿರುದ್ಧ 2 ದಿನ ಬಳಿಕ ಎಫ್ಐಆರ್‌

Mumbai; ಹ*ಲ್ಲೆಕೋರ ಮಹಾರಾಷ್ಟ್ರ “ಶಿಂಧೆ’ ಶಾಸಕನ ವಿರುದ್ಧ 2 ದಿನ ಬಳಿಕ ಎಫ್ಐಆರ್‌

ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌

ಇರಾನ್‌ನಿಂದ ಮತ್ತೊಮ್ಮೆ ಅಣು ಯೋಜನೆ ಆರಂಭ ಸಾಧ್ಯತೆ: ಇಸ್ರೇಲ್‌

ಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆ

ಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆ

Kolukkumala; ಹೂ ಬದಲು ಹುಲಿಯ ದರ್ಶನ: ಸ್ವಲ್ಪದರಲ್ಲೇ ಕೇರಳ ಚಾರಣಿಗ ಪಾರು

Kolukkumala; ಹೂ ಬದಲು ಹುಲಿಯ ದರ್ಶನ: ಸ್ವಲ್ಪದರಲ್ಲೇ ಕೇರಳ ಚಾರಣಿಗ ಪಾರು

Mumbai: ಹಣವಿದ್ದ ಬ್ಯಾಗ್‌ ಜತೆ ಮಹಾರಾಷ್ಟ್ರ ಸಚಿವ: ವಿಪಕ್ಷಗಳಿಂದ ಟೀಕೆ

Mumbai: ಹಣವಿದ್ದ ಬ್ಯಾಗ್‌ ಜತೆ ಮಹಾರಾಷ್ಟ್ರ ಸಚಿವ: ವಿಪಕ್ಷಗಳಿಂದ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar: Eshwara Khandre condoles the death of Dr. Tippanna

Bidar: ಡಾ. ತಿಪ್ಪಣ್ಣ ನಿಧನಕ್ಕೆ ಈಶ್ವರ ಖಂಡ್ರೆ ಸಂತಾಪ

Tragedy: ಹೃದಯಾಘಾತದಿಂದ ಹುಲಸೂರ ಸರಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಮೃ*ತ್ಯು

Tragedy: ಹೃದಯಾಘಾತದಿಂದ ಹುಲಸೂರ ಸರಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಮೃ*ತ್ಯು

18

Bidar: ಶಾಲೆಗಳಲ್ಲಿಲ್ಲ ಪಿಟಿ ಮೇಷ್ಟ್ರು; ಸೊರಗಿದ ಮಕ್ಕಳು

Bidar: Head Constable wins medal in Masters Athletics Championship

Bidar: ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಪದಕ ಗೆದ್ದ ಹೆಡ್ ಕಾನ್‌ಸ್ಟೇಬಲ್

18

Bidar: ‘ಅಕ್ಕ ಪಡೆ’ ರಾಜ್ಯಾದ್ಯಂತ ವಿಸ್ತರಣೆಗೆ ಸಿದ್ಧತೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

1-aa-aa-huli

ಹುಲಿಕಲ್‌ ಘಾಟಿ ರಸ್ತೆ ಅಭಿವೃದ್ಧಿ ; 39.50 ಕೋ.ರೂ. ಪ್ರಸ್ತಾವನೆ

police

ಬಾಕಿ ಬಿಲ್‌ ಕೇಳಿದ ಮಾಲಕ: ಅಂಗಡಿ ಬ್ಯಾನರ್‌ಗೆ ಬೆಂಕಿ ಹಚ್ಚಿದ ಗ್ರಾಹಕ

arrest-lady

ವಿಚಾರಣಾಧೀನ ಕೈದಿಗೆ ನೀಡಲು ತಂದಿದ್ದ ಅನುಮಾನಾಸ್ಪದ ಪುಡಿ; ಮಹಿಳೆ ವಶಕ್ಕೆ

Malpe ಸೈಂಟ್‌ ಮೇರಿಸ್‌ ಬಳಿ ನಾಡದೋಣಿ ದುರ್ಘ‌ಟನೆ: ದೋಣಿ ಮಗುಚಿ ಓರ್ವ ಸಾವು, ಇಬ್ಬರಿಗೆ ಗಾಯ

Malpe ಸೈಂಟ್‌ ಮೇರಿಸ್‌ ಬಳಿ ನಾಡದೋಣಿ ದುರ್ಘ‌ಟನೆ: ದೋಣಿ ಮಗುಚಿ ಓರ್ವ ಸಾವು, ಇಬ್ಬರಿಗೆ ಗಾಯ

bosaraju

ಕೊಡಗಿನಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ: ಮುನ್ನೆಚ್ಚರ ವಹಿಸಲು ಸಚಿವರ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.