ಬೆಲ್ದಾಳ ಅಂಗನವಾಡಿ ಕೇಂದ್ರದಲ್ಲಿ ಸೌಲಭ್ಯ ಮರೀಚಿಕೆ
Team Udayavani, Mar 27, 2022, 3:27 PM IST
ಔರಾದ: ತಾಲೂಕಿನ ಬೆಲ್ದಾಳ ಗ್ರಾಮದ ಅಂಗನವಾಡಿ ಕೇಂದ್ರ ಸಾಕಷ್ಟು ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಕ್ಯಾರೆ ಎನ್ನದಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಂಗನವಾಡಿ ಕೇಂದ್ರ ಹಳೆ ಕಟ್ಟಡವಾಗಿದ್ದು, ಈಗಾಗಲೇ ಕಟ್ಟಡದ ಮೇಲ್ಛಾವಣಿ ಸಿಮೆಂಟ್ ಪದರು ಉದರಿ ಬಿಳುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ. ಮಕ್ಕಳ ಪಾಲಕರಲ್ಲಿ ಆತಂಕ ಮನೆ ಮಾಡಿದೆ.
ವಿದ್ಯುತ್ ಸಂಪರ್ಕವು ಇಲ್ಲ
ಅಂಗನವಾಡಿ ಕೇಂದ್ರದಲ್ಲಿ ಕಳೆದ ನಾಲ್ಕು ವರ್ಷದಿಂದ ವಿದ್ಯುತ್ ಸಂಪರ್ಕವೇ ಇಲ್ಲದಂತಾಗಿದ್ದು, ಬೇಸಿಗೆ ಕಾಲದಲ್ಲಿ ಮಕ್ಕಳಿಗೆ ಫ್ಯಾನ ಗಾಳಿ ಇಲ್ಲವಾಗಿ ಜಳದಲ್ಲಿ ಕುಳಿಸುಕೊಳ್ಳಬೇಕಿದೆ. ಕಟ್ಟಡಕ್ಕೆ ಮೀಟರ್ ಸೇರಿದಂತೆ ಎಲ್ಲ ವೈಯರ್ ಅಳವಡಿಸಲಾಗಿದ್ದರೂ ಉಪಯೋಗಕ್ಕೆ ಮಾತ್ರ ಬರುತ್ತಿಲ್ಲ. ತೋರಿಕೆಗೆ ಎಂಬಂತೆ ಕೇಂದ್ರದಲ್ಲಿ ಫ್ಯಾನ್ ಅಳವಡಿಸಲಾಗಿದೆ.
ಶಾಪವಾಗಿವೇ ಶುದ್ಧ ನೀರು
ಅಂಗನವಾಡಿ ಕೇಂದ್ರದ ಮೇಲೆ ನೀರಿನ ಟ್ಯಾಂಕ್ ಇದ್ದರೂ ಅದಕ್ಕೆ ನೀರು ಸರಬರಾಜು ಆಗುತ್ತಿಲ್ಲ. ಹೀಗಾಗಿ ಅಂಗನವಾಡಿ ಸಹಾಯಕಿ ಪ್ರತಿನಿತ್ಯ ಅರ್ಧ ಕಿ.ಮೀ ದೂರದ ನಲ್ಲಿಗಳಿಂದ ನೀರು ತಂದು ಅಡುಗೆ ಮಾಡಿ ಮಕ್ಕಳಿಗೆ ನೀರು ಕುಡಿಯಲು ಕೊಡುವಂತಹ ಸ್ಥಿತಿ ಬಂದಿದೆ. ಮಕ್ಕಳು ಶುದ್ಧ ನೀರು ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಅಂಗನವಾಡಿ ಶಿಕ್ಷಕಿಯೂ ನಾಪತ್ತೆ
ಅಂಗನವಾಡಿ ಶಿಕ್ಷಕಿ ಮಹೇಶ್ವರಿ ಚೆನ್ನಬಸಯ್ಯ ಸ್ವಾಮಿ ಅವರು ನೇಮಕವಾದ ಬಳಿಕ ಒಂದು ದಿನವೂ ಅಂಗನವಾಡಿ ಕೇಂದ್ರಕ್ಕೆ ಬಂದಿಲ್ಲ. ಅವರ ಬದಲಾಗಿ ಅವರ ಅಜ್ಜಿ ಶಂಕರೆಮ್ಮ ಎರಡು ತಿಂಗಳು ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಗ್ರಾಮಸ್ಥರು ನೇಮಕವಾದ ಶಿಕ್ಷಕಿಯೇ ಅಂಗನವಾಡಿ ಕೇಂದ್ರಕ್ಕೆ ಬರಬೇಕೆಂದು ತಾಲೂಕು ಶಿಸು ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ಚಿಂತಾಕಿ ಗ್ರಾಮದ ಅಂಗನವಾಡಿ ಕೇಂದ್ರದ ಶಿಕ್ಷಕಿ ಶಿವಮಂಗಲಾ ಅವರು ಬೆಲ್ದಾಳ ಅಂಗನವಾಡಿ ಕೇಂದ್ರಕ್ಕೆ ವಾರದಲ್ಲಿ ಎರಡು ದಿನ ಮಾತ್ರ ಪ್ರಭಾರಿ ಜವಾಬ್ದಾರಿ ನೀಡಲಾಗಿದೆ. ಆದರೆ ನೇಮಕವಾದ ಅಂಗನವಾಡಿ ಶಿಕ್ಷಕಿಗೆ ಕರೆ ತರುವಂತಹ ಕೆಲಸ ಮಾತ್ರ ಇಲಾಖೆ ಮಟ್ಟದಲ್ಲಿ ನಡೆದಿಲ್ಲ.
ಬೆಲ್ದಾಳ ಗ್ರಾಮಕ್ಕೆ ವರ್ಷದ ಹಿಂದೆ ಆಯ್ಕೆಯಾದ ಅಂಗನವಾಡಿ ಶಿಕ್ಷಕಿ ಮಹೇಶ್ವರಿ ಸ್ವಾಮಿಗೆ ಇಲಾಖೆಯಿಂದ ಎರಡು ಬಾರಿ ನೋಟಿಸ್ ನೀಡಲಾಗಿದೆ. ಅದಕ್ಕೂ ಅವರು ಉತ್ತರ ನೀಡಿಲ್ಲ. ಹೀಗಾಗಿ ಚಿಂತಾಕಿ ಗ್ರಾಮದ ಶಿಕ್ಷಕಿಗೆ ಎರಡು ದಿನ ಬೆಲ್ದಾಳ ಗ್ರಾಮದ ಪ್ರಭಾರ ನೀಡಲಾಗಿದೆ. -ಶಂಭುಲಿಂಗ ಹಿರೇಮಠ, ಸಿಡಿಪಿಒ
ನಮ್ಮೂರಿನ ಅಂಗನವಾಡಿ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಮೆಡಿಕಲ್ ಲೀವ್ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಬೆಲ್ದಾಳ ಗ್ರಾಮದ ಅಂಗನವಾಡಿ ಶಿಕ್ಷಕಿ ವಿದ್ಯಾಭ್ಯಾಸ ಮಾಡಲು ಬೇರೆ ಜಿಲ್ಲೆಯಲ್ಲಿ ಇದ್ದಾರೆ. ಕಾಲೇಜಿನ ಹಾಜರಾತಿ ಪ್ರತಿಗಳು ನಮ್ಮಲ್ಲಿವೆ. -ಹೆಸರು ಹೇಳಲು ಬಯಸದ ಗ್ರಾಮಸ್ಥ
ಡಿ.30ರಂದು ನಮ್ಮಗೆ ಇಲಾಖೆಯಿಂದ ಆದೇಶ ಬಂದಿದೆ. ಬೆಲ್ದಾಳ ಗ್ರಾಮದ ಅಂಗನವಾಡಿ ಕೇಂದ್ರದ ಪ್ರಭಾರವನ್ನು ವಹಿಸಿ ವಾರದಲ್ಲಿ ಎರಡು ದಿನ ಮಾತ್ರ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಅದರಂತೆ ಕೆಲಸ ಮಾಡುತ್ತಿದ್ದೇನೆ. -ಶಿವಮಂಗಲಾ, ಅಂಗನವಾಡಿ ಪ್ರಭಾರಿ ಶಿಕ್ಷಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್
MUST WATCH
ಹೊಸ ಸೇರ್ಪಡೆ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್