ಕಪ್ಪರಗಾಂವ ಗ್ರಾಮದಲ್ಲೇ ಕೇಂದ್ರ ಸ್ಥಾಪಿಸಿ
Team Udayavani, Dec 14, 2020, 6:40 PM IST
ಹುಮನಾಬಾದ: ಕಪ್ಪರಗಾಂವ ಗ್ರಾಮಸ್ಥರು ಗ್ರಾಪಂ ಚುನಾವಣೆ ಬಹಿಷ್ಕರಿಸಿದ ಕುರಿತು ಹಾಗೂ ಗ್ರಾಮದಲ್ಲಿ ಪಂಚಾಯಿತಿ ಕೇಂದ್ರವಾಗಿ ಮಾಡುವಂತೆ ಒತ್ತಾಯಿಸಿ ರವಿವಾರ ಶಾಸಕ ರಾಜಶೇಖರಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಶಾಸಕರ ಭವನದಲ್ಲಿ ಭೇಟಿಯಾದ ಗ್ರಾಮಸ್ಥರು, ಪಂಚಾಯಿತಿ ಕೆಲಸಗಳಿಗಾಗಿ ಗ್ರಾಮಸ್ಥರು ಸುಮಾರು 10 ಕಿ.ಮೀ ದೂರ ಅಲೆಯುವ ಸ್ಥಿತಿ ಇದೆ. ನಂದಗಾವ ಗ್ರಾಮಕ್ಕೆ ನೇರವಾಗಿ ತೆರಳುವವಾಹನಗಳ ಸೇವೆ ಇಲ್ಲ. ಖಾಸಗಿ ವಾಹನಗಳಮೂಲಕ ಹುಡಗಿ ಗ್ರಾಮಕ್ಕೆ ತೆರಳಿ, ನಂತರಅಲ್ಲಿಂದ ಆಟೋ ಮೂಲಕ ನಂದಗಾಂವ ಗ್ರಾಮಕ್ಕೆ ಹೋಗಬೇಕಾದ ಸ್ಥಿತಿ ಇದ್ದು, ಕಪ್ಪರಗಾಂವ ಗ್ರಾಮದಲ್ಲಿಯೇ ಪಂಚಾಯಿತಿಕೇಂದ್ರವಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥರ ಬೇಡಿಕೆ ಆಲಿಸಿದ ಶಾಸಕ ರಾಜಶೇಖರ ಪಾಟೀಲ,ಈ ಕುರಿತು ಮುಖ್ಯಮಂತ್ರಿಹಾಗೂ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಮನವಿ ಮಾಡುವೆ. ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ ಕುರಿತು ಗಮನ ಸೆಳೆಯುವ ಮೂಲಕ ನ್ಯಾಯ ಒದಗಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು. ಕ್ಷೇತ್ರದಲ್ಲಿ ಎಲ್ಲ ಗ್ರಾಮಗಳಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು,ಕಪ್ಪರಗಾಂವ ಗ್ರಾಮದಲ್ಲಿಯೂ ವಿವಿಧ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್