ನಿರ್ವಹಣೆ ಕೊರತೆ; ಹಾಳು ಕೊಂಪೆಯಾದ ಬರೀದ ಶಾಹಿ

ಕೆಂಪು ಧೂಳು ಪ್ರತಿಕೃತಿಗಳ ಸೌಂದರ್ಯ ಹಾಳಾಗಿಸಿದೆ

Team Udayavani, Nov 24, 2022, 6:04 PM IST

ನಿರ್ವಹಣೆ ಕೊರತೆ; ಹಾಳು ಕೊಂಪೆಯಾದ ಬರೀದ ಶಾಹಿ

ಬೀದರ: ಸ್ವಾತಂತ್ರ್ಯೋತ್ಸವದ ಸ್ವರ್ಣ ಮಹೋತ್ಸವದ ಸವಿನೆನಪಿಗಾಗಿ ನಗರದ ಹೃದಯ ಭಾಗದಲ್ಲಿ ನಿರ್ಮಾಣಗೊಂಡಿರುವ “ಬರೀದ್‌ ಶಾಹಿ’ ಉದ್ಯಾನ ಸೂಕ್ತ ನಿರ್ವಹಣೆ ಕೊರತೆಯಿಂದ ಅದ್ವಾನವಾಗಿ ಮಾರ್ಪಟ್ಟಿದೆಯಲ್ಲದೇ ಈಗ ಅಕ್ಷರಶಃ ಹಾಳು ಕೊಂಪೆಯಾಗಿದೆ.

ವಿವಿಧ ಬಗೆಯ ಕಲಾಕೃತಿಗಳು, ಐತಿಹಾಸಿಕ ಗುಂಬಜ್‌ ಮತ್ತು ಆಟಿಕೆಗಳಿಂದಾಗಿ ಸೌಂದರ್ಯ ಮೇಳೈಸಿಕೊಂಡಿರುವ ಈ ಉದ್ಯಾನ ಜನರಿಂದ ದೂರ ಸರಿಯಲಾರಂಭಿಸಿದೆ. ಈ ಉದ್ಯಾನದಲ್ಲಿ ಬರೀದ ಶಾಹಿಯ ಸಮಾಧಿ ಜತೆಗೆ ಆತನ ಬಹು ಪತ್ನಿಯರ ಸಮಾಧಿಗಳಿವೆ.

ಬೃಹದಾಕಾರದ ಸುಂದರ ಕಲಾಕೃತಿಯ ಗುಂಬಜ್‌ ಗಳನ್ನು ಅವರ ಮಗ ಅಮೀರ ಅಲಿ ಬಾದಶಾಹ ಕ್ರಿ.ಶ. 1530-35ರಲ್ಲಿ ಕಟ್ಟಿಸಿದ್ದಾನೆ. ಐತಿಹಾಸಿಕ ಗುಂಬಜ್‌ ಗಳನ್ನು ಉಳಿಸಿಕೊಂಡು ಅದರ ಸೊಬಗು ಹೆಚ್ಚಿಸಲು ಆ ಪ್ರದೇಶವನ್ನೇ ಜಿಲ್ಲಾಡಳಿತ ಸ್ವರ್ಣ ಮಹೋತ್ಸವ “ಬರೀದ ಶಾಹಿ’ ಉದ್ಯಾನವನವನ್ನಾಗಿ ನವೀಕರಣಗೊಳಿಸಿದೆ. ಆದರೆ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಬರೀದ್‌ ಶಾಹಿ ಉದ್ಯಾನದಲ್ಲಿನ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಉದ್ಯಾನದಲ್ಲಿನ ಹಸರೀಕರಣ ಮಾಯವಾಗಿದ್ದು, ಕೆಂಪು ಧೂಳು ಪ್ರತಿಕೃತಿಗಳ ಸೌಂದರ್ಯ ಹಾಳಾಗಿಸಿದೆ. ಮನೋರಂಜನೆ ನೀಡಬೇಕಾದ ಆಟಿಕೆ ಸಾಮಾನುಗಳು ಮುರಿದು ಜೋತಾಡುತ್ತಿದ್ದು, ಸುತ್ತಲಿರುವ ವಿದ್ಯುತ್‌ ದೀಪಗಳು ನಿರ್ವಹಣೆ ಇಲ್ಲದೆ ಕೆಲವು ಬಂದ್‌ ಆಗಿವೆ.

ಉದ್ಯಾನವನದಲ್ಲಿ ಈ ಹಿಂದೆ ವಿವಿಧ ನಮೂನೆಯ ಸಸ್ಯ ರಾಶಿಗಳು ಮನಸ್ಸಿಗೆ ಮುದ ನೀಡುತ್ತಿದ್ದರೆ, ಕಟ್ಟೆ ಮೇಲೆ ಕುಳಿತು ಜನರ ಹರಟೆ, ಕೃಷಿ ಕಾಯಕ ಸೇರಿದಂತೆ ಗ್ರಾಮೀಣ ಜನರ ಬದುಕು ಅನಾವರಣಗೊಳಿಸುವಂಥ ಮನುಷ್ಯರು, ಜಾನುವಾರು ಮತ್ತು ಪ್ರಾಣಿಗಳ ಪ್ರತಿಕೃತಿಗಳು ಮತ್ತು ವಿದ್ಯುತ್‌ ಬೆಳಕಿನಲ್ಲಿ ಹೊರಚಿಮ್ಮುತ್ತಿದ್ದ ವಿವಿಧ ಬಗೆಯ ಕಾರಂಜಿಗಳು ನೋಡುಗರನ್ನು ಆಕರ್ಷಿಸುತ್ತಿದ್ದವು.

ಮತ್ತೊಂದೆಡೆ ರೈತ ಕುಟುಂಬ ಜೋಡಿ ಎತ್ತುಗಳೊಂದಿಗೆ ಹೊಲದಲ್ಲಿ ಬಿತ್ತನೆ ಮಾಡುವುದು, ಭೂಮಿ ಹದ ಮಾಡುವುದು ಅದರ ಪಕ್ಕದಲ್ಲೇ ಬಿತ್ತಿದ ಬೆಳೆಯ ರಾಶಿ ಮಾಡುವ ದೃಶ್ಯ ಗಮನ ಸೆಳೆಯುಂತಿವೆ. ಸ್ವಲ್ಪ ದೂರದಲ್ಲಿ ಬಣ್ಣ ಬಣ್ಣದ ಜಿಂಕೆ ಮರಿಗಳ ಓಟಾಟ, ಅಲ್ಲಿಯೇ ಕುರಿಗಾಹಿ ಮಹಿಳೆಯೊಬ್ಬಳು ಬಾಲಕನೊಂದಿಗೆ ಕುರಿಗಳನ್ನು ಮೇಯಿಸುತ್ತಿರುವ ದೃಶ್ಯ ಮನ ತಣಿಸುವಂತಿವೆ. ಆದರೆ ಸೂಕ್ತ ನಿರ್ವಹಣೆಯತ್ತ ಗಮನ ಹರಿಸದ ಕಾರಣ ಎಲ್ಲೆಡೆ ಹುಲ್ಲು ಬೆಳೆದು ಅಂದವನ್ನೇ ಹಾಳಾಗಿಸಿದೆ.

ಉದ್ಯಾನ ನವೀಕರಣಕ್ಕಾಗಿ ನಾಲ್ಕೈದು ವರ್ಷಗಳ ಹಿಂದೆ ಲಕ್ಷಾಂತರ ರೂ. ವೆಚ್ಚ ಮಾಡಿ ಉದ್ಯಾನದ ಕಳೆ ಹೆಚ್ಚಿಸಲಾಗಿತ್ತು. ಆದರೆ ಈಗ ಈ ಗಾರ್ಡನ್‌ ಸೊಬಗು ಕಳೆದುಕೊಂಡಿದೆ. ವಿಕೆಂಡ್‌ ದಿನಗಳಲ್ಲಿ ನೂರಾರು ಜನರು ತಮ್ಮ ಕುಟುಂಬಸ್ಥರು, ಗೆಳೆಯರೊಂದಿಗೆ ಇಲ್ಲಿಗೆ ಭೇಟಿ ನೀಡಿ ದಣಿವು ತಣಿಸಿಕೊಳ್ಳುತ್ತಾರೆ. ಹಾಗಾಗಿ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಉದ್ಯಾನದ ವೈಭವವನ್ನು ಮರುಕಳಿಸುವ ಕಾರ್ಯ ಮಾಡಬೇಕಿದೆ.

ಸಸ್ಯ ರಾಶಿ, ಗ್ರಾಮೀಣ ಬದುಕು ಚಿತ್ರಿಸುವ ಕಲಾಕೃತಿಗಳಿಂದ ಕೂಡಿದ್ದ ಸುಂದರ ಉದ್ಯಾನ ಕಳೆದೆರಡು ವರ್ಷಗಳಿಂದ ಹಾಳು ಕೊಂಪೆಯಾಗಿದೆ. ಈ ಹಿಂದೆ ದುರಸ್ತಿ ಕಾರ್ಯಗಳಿಂದ ಉದ್ಯಾನಕ್ಕೆ ಹೊಸ ಕಾಯಕಲ್ಪ ಸಿಕ್ಕಿತ್ತು. ವಿದ್ಯುತ್‌ ದೀಪಾಲಂಕಾರ, ಕಾರಂಜಿಗಳು ಜನರನ್ನು ಸೆಳೆಯುತ್ತಿತ್ತು. ನಗರದ ಏಕೈಕ ಉದ್ಯಾನದ ಅಂದ ಹೆಚ್ಚಿಸಿ ಸೂಕ್ತ ನಿರ್ವಹಣೆ ಮಾಡಬೇಕಿದೆ.
ರವಿ ತಂಬಾಕೆ, ಸ್ಥಳೀಯರು.
ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

Minchu

Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

Bidar; ಪ್ರೇಯಸಿ ಮದುವೆ ದಿನವೇ ಪ್ರಿಯಕರನ ಶವ ಪತ್ತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.