ಹೂ ಬೆಳೆದು ಮಾದರಿಯಾದ ಮಲ್ಲಪ್ಪ
ಮನರೇಗಾ ಯೋಜನೆ ಸದ್ಬಳಕೆ ,ಒಂದು ಲಕ್ಷ ರೂ. ಅನುದಾನ
Team Udayavani, Dec 28, 2020, 4:20 PM IST
ಬಸವಕಲ್ಯಾಣ: ತಾಲೂಕಿನ ಹುಲಗುತ್ತಿ ಗ್ರಾಮದ ರೈತ ಮಲ್ಲಪ್ಪ ಕಾಶಪ್ಪ ಮೈಲಾರಿ ಮಹಾತ್ಮ ಗಾಂಧಿರಾಷ್ಟ್ರೀಯ ಉದ್ಯೋಗ ಗ್ರಾಮೀಣ ಖಾತ್ರಿ ಯೋಜನೆಯಡಿ ಗುಲಾಬಿ ಹೂ ಬೆಳೆ ಬೆಳೆದಿದ್ದು, ಇಡೀ ಗ್ರಾಮಕ್ಕೆ ಮಾದರಿಯಾಗಿದ್ದಾರೆ.
ನಾರಾಯಣಪುರ ಗ್ರಾಪಂ ಒಳಪಡುವ ಹುಲಹುತ್ತಿ ರೈತರಿಗೆ ಸರ್ಕಾರ ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದಹೂ ಬೆಳೆ ಬೆಳೆಯುವುದಕ್ಕೆ 1 ಲಕ್ಷ ರೂ.ಅನುದಾನ ನೀಡುತ್ತಿದೆ. ಇದನ್ನೆ ಬಳಸಿಕೊಂಡುರೈತ ಮಲ್ಲಪ್ಪ ಒಂದು ಎಕರೆ ಭೂಮಿಯಲ್ಲಿಬೆಂಗಳೂರಿನ ಪನ್ನಿರ್ ಹಾಗೂ ಬುಲೆಟ್ ಗುಲಾಬಿಹೂ ಸಸಿಗಳನ್ನು ನಾಟಿ ಮಾಡಿದ್ದಾರೆ. 15 ರೂ.ಗೆ ಒಂದರಂತೆ 3,800 ಸಸಿಗಳನ್ನು ಖರೀದಿಸಿದ್ದು,3 ಅಡಿ ಅಂತರದಲ್ಲಿ ಹನಿ ನೀರಾವರಿ ಪದ್ಧತಿಅಳವಡಿಸಿಕೊಂಡಿದ್ದಾರೆ. ಮೂರು ತಿಂಗಳಲ್ಲಿ ಆದಾಯ ಪ್ರಾರಂಭವಾಗಿದ್ದು, 100 ರೂ.ಕೆ.ಜಿ.ಯಂತೆ ನಿತ್ತ 10 ಕೆ.ಜಿ. ಮಾರಾಟಮಾಡಲಾಗುತ್ತಿದ್ದು, ತಿಂಗಳಿಗೆ 40ರಿಂದ 50 ಸಾವಿರ ರೂ. ಸಂಪಾದಿಸುತ್ತಿದ್ದಾರೆ.
ಸೋಯಾಬಿನ್ ಮತ್ತು ಕಬ್ಬು ಬೆಳೆಯುವುದಕ್ಕಿಂತಸರ್ಕಾರದ ಮಹತ್ವಕಾಂಕ್ಷಿಯೋಜನೆಯಾದ ಮನರೇಗಾಯೋಜನೆಯಡಿ 1 ಲಕ್ಷ ರೂ.ಅನುದಾನ ಬಳಸಿಕೊಂಡುಉತ್ತಮ ಆದಾಯಮಾಡಿಕೊಂಡಿದ್ದೇನೆ. ಇದೇ ರೀತಿ ಪ್ರತಿಯೊಬ್ಬರು ಈ ಯೋಜನೆಯಡಿಕೃಷಿ ಚಟುವಟಿಕೆ ಕೈಗೊಳ್ಳುವ ಮೂಲಕಆರ್ಥಿಕ ಸದೃಢತೆ ಸಾಧಿಸಬೇಕೆಂದು ರೈತಮಲ್ಲಪ್ಪ ಉದಯವಾಣಿಗೆ ತಮ್ಮ ಅನುಭವ ಹಂಚಿಕೊಂಡರು.
ಮನರೇಗಾ ಯೋಜನೆಯಲ್ಲಿ ರೈತರು ಕೃಷಿ ಹೊಂಡ ನಿರ್ಮಿಸಿಕೊಂಡುಮಿಶ್ರ ಬೆಳೆ ಬೆಳೆದು ಕೃಷಿಯಲ್ಲಿ ಸಾಧನೆಮಾಡಿರುವ ಸಾಕಷ್ಟು ಉದಾಹರಣೆಗಳಿವೆ.ಹೀಗಾಗಿ ರೈತರು ಸರ್ಕಾರ ಬಡವರಿಗಾಗಿಜಾರಿಗೆ ತಂದ ಈ ಯೋಜನೆ ಲಾಭಪಡೆದುಕೊಳ್ಳಬೇಕು. ಬೀರೇಂದ್ರಸಿಂಗ್ ಠಾಕೂರ್, ಬಸವಕಲ್ಯಾಣ
ಮನರೇಗಾ ಯೋಜನೆಯಲ್ಲಿ ರೈತರ ಸ್ವಾಲಂಬಿ ಜೀವನಕ್ಕೆ ಬೇಕಾಗುವ ಸಾಕಷ್ಟು ದಾರಿಗಳಿವೆ. ಹೀಗಾಗಿ ಸೋಯಾಬಿನ್ ಮತ್ತು ಕಬ್ಬು ಬೆಳೆಯುವುದಕ್ಕಿಂತ ಮನರೇಗಾ ಯೋಜನೆಯ ಸದುಪಯೋಗ ಪಡೆದುಕೊಂಡು ಹೂ, ಪಪ್ಪಾಯಿ ಬೆಳೆದರೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಾಗುತ್ತದೆ. – ಗ್ಯಾನೇಂದ್ರಕುಮಾರ ಗಂಗ್ವಾರ್, ಜಿಪಂ ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ