![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಗ್ರಾಪಂ ಮತ ಎಣಿಕೆಗೆ ಸಕಲ ಸಿದ್ಧತೆ
Team Udayavani, Dec 29, 2020, 4:54 PM IST
![ಗ್ರಾಪಂ ಮತ ಎಣಿಕೆಗೆ ಸಕಲ ಸಿದ್ಧತೆ](https://www.udayavani.com/wp-content/uploads/2020/12/BIDAR-TDY-1-13-620x372.jpg)
ಬೀದರ: ಜಿಲ್ಲೆಯ ಐದು ತಾಲೂಕುಗಳಿಗೆ ಡಿ.22ರಂದುಮತ್ತು ಮೂರು ತಾಲೂಕುಗಳಿಗೆ ಡಿ.27ರಂದು ಮತದಾನಮುಕ್ತಾಯವಾಗಿದೆ. ಡಿ.30ರಂದು ಮತ ಎಣಿಕೆ ನಡೆಯಲಿದ್ದು,ಇದಕ್ಕಾಗಿ ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಡಿಸಿ ರಾಮಚಂದ್ರನ್ ಆರ್ ತಿಳಿಸಿದ್ದಾರೆ.
ಬೀದರ ತಾಲೂಕಿನ ಮತ ಎಣಿಕೆಯು ಬೀದರನ ಬಿ.ವ್ಹಿ.ಬಿಕಾಲೇಜಿನಲ್ಲಿ, ಔರಾದ್ ಮತ್ತು ಕಮಲನಗರ ತಾಲೂಕುಗಳ ಮತೆ ಎಣಿಕೆ ಔರಾದನಅಮರೇಶ್ವರ ಪದವಿ ಕಾಲೇಜಿನಲ್ಲಿ, ಭಾಲ್ಕಿತಾಲೂಕಿನ ಮತ ಎಣಿಕೆಯು ಸರ್ಕಾರಿಪ್ರೌಢಶಾಲೆಯಲ್ಲಿ, ಬಸವಕಲ್ಯಾಣ ಮತ್ತು ಹುಲಸೂರ ತಾಲೂಕುಗಳ ಮತ ಎಣಿಕೆಯು ಬಸವ ಕಲ್ಯಾಣದ ಬಸವೇಶ್ವರ ಪ್ರೌಢಶಾಲೆಯಲ್ಲಿ, ಹುಮನಾಬಾದ ಮತ್ತು ಚಿಟಗುಪ್ಪಾ ತಾಲೂಕುಗಳ ಮತ ಎಣಿಕೆಯು ಹುಮನಾಬಾದನ ರಾಮ ಮತ್ತು ರಾಜ್ ಪಿಯು ಕಾಲೇಜಿನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ಬೆಳಗ್ಗೆ 8ರಿಂದ ಎಣಿಕೆ ಆರಂಭ: ಜಿಲ್ಲೆಯ ವಿವಿಧೆಡೆ ಇರುವ ಆಯಾ ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆಯು ಏಕ ಕಾಲಕ್ಕೆ ಬೆಳಗ್ಗೆ ಸರಿಯಾಗಿ 8ರಿಂದ ಆರಂಭವಾಗಿ ಮತಗಳ ಎಣಿಕೆಮುಕ್ತಾಯವಾಗುವವರೆಗೆ ನಡೆಯಲಿದೆ. ಬೀದರ, ಬಸವಕಲ್ಯಾಣ ಮತ್ತು ಭಾಲ್ಕಿ ತಾಲೂಕುಗಳ ಕೇಂದ್ರದಲ್ಲಿ ಮತ ಎಣಿಕೆಗಾಗಿ ತಲಾ 15ರಂತೆ ಟೇಬಲ್ ಅಳವಡಿಸಲಾಗಿದೆ. ಚಿಟಗುಪ್ಪಾಮತ್ತು ಕಮಲನಗರ ತಾಲೂಕುಗಳಲ್ಲಿ ತಲಾ 6ರಂತೆ ಟೇಬಲ್ಅಳವಡಿಸಲಾಗಿದೆ. ಹುಮನಾಬಾದ, ಔರಾದ ಮತ್ತು ಹುಲಸೂರತಾಲೂಕುಗಳ ಮತ ಎಣಿಕೆಗೆ ಅನುಕ್ರಮವಾಗಿ 9, 7 ಮತ್ತು 2ಟೇಬಲ್ ಅಳವಡಿಸಲಾಗಿದೆ. ಮತ ಎಣಿಕೆಯು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಮತ ಎಣಿಕೆ ಕೇಂದ್ರಕ್ಕೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆಗಾಗಿ ತಲಾಒಂದು ಟೇಬಲ್ಗೆ ಒಬ್ಬ ಮೇಲ್ವಿಚಾರಕರು ಮತ್ತು ಸಿಬ್ಬಂದಿಯನ್ನುನಿಯೋಜಿಸಿದ್ದು, ಎಂಟೂ ತಾಲೂಕುಗಳಿಗೆ ಸಂಬಂ ಧಿಸಿದ ಮತ ಎಣಿಕೆಗಾಗಿ 75 ಮೇಲ್ವಿಚಾರಕರು ಮತ್ತು 75 ಸಹಾಯಕ ಸಿಬ್ಬಂದಿ ಸೇರಿ ಒಟ್ಟು 150 ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ 8 ತಾಲೂಕುಗಳಲ್ಲಿ ಒಟ್ಟು 178 ಗ್ರಾಪಂಗಳಿಗೆ ಚುನಾವಣೆ ನಡೆದಿದ್ದು, ಒಟ್ಟು 8675 ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಬೀದರನಲ್ಲಿ 579, ಔರಾದ 330, ಕಮಲನಗರ263, ಬಸವಕಲ್ಯಾಣ 544, ಹುಲಸೂರ 72, ಹುಮನಾಬಾದ 325 ಹಾಗೂ ಚಿಟಗುಪ್ಪಾ 244 ಮತ್ತು ಭಾಲ್ಕಿ 555 ಸೇರಿ ಒಟ್ಟು 2912ಅಭ್ಯರ್ಥಿಗಳ ಆಯ್ಕೆಗಾಗಿ ಡಿ.30ರಂದು ಮತ ಎಣಿಕೆ ನಡೆಯಲಿದೆ. ಅವಿರೋಧ ಆಯ್ಕೆ: ಈಗಾಗಲೇ ಬೀದರನಲ್ಲಿ 36, ಔರಾದನಲ್ಲಿ 55, ಕಮಲನಗರದಲ್ಲಿ 18, ಬಸವಕಲ್ಯಾಣದಲ್ಲಿ 33, ಹುಲಸೂರದಲ್ಲಿ 05,ಹುಮನಾಬಾದ್ನಲ್ಲಿ 18, ಚಿಟಗುಪ್ಪಾದಲ್ಲಿ 05 ಮತ್ತು ಭಾಲ್ಕಿನಲ್ಲಿ 56ಸೇರಿ ಒಟ್ಟು 226 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-adsadsadsad](https://www.udayavani.com/wp-content/uploads/2024/07/1-adsadsadsad-150x79.jpg)
Sikkim; ಆರೋಗ್ಯದಲ್ಲಿ ಏರುಪೇರಾಗಿ ಬೀದರ್ ನ ಯೋಧ ನಿಧನ
![1-bidar](https://www.udayavani.com/wp-content/uploads/2024/07/1-bidar-150x78.jpg)
Education; ‘ಶಿಕ್ಷಣ ಕಾಶಿ’ಯಾಗಿ ಬದಲಾಗುತ್ತಿದೆ ”ಧರಿನಾಡು”
![Bidar: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ… ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, ೫೦ ಸಾವಿರ ದಂಡ](https://www.udayavani.com/wp-content/uploads/2024/07/bidar-1-150x84.jpg)
Bidar: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ… ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, 50 ಸಾವಿರ ದಂಡ
![Selling liquor online? Minister RB Thimmapura clarified](https://www.udayavani.com/wp-content/uploads/2024/07/thim-150x83.jpg)
Liquor; ಆನ್ಲೈನ್ನಲ್ಲಿ ಮದ್ಯ ಮಾರಾಟ? ಸ್ಪಷ್ಟನೆ ನೀಡಿದ ಸಚಿವ ಆರ್.ಬಿ ತಿಮ್ಮಾಪುರ
![BUS driver](https://www.udayavani.com/wp-content/uploads/2024/07/BUS-driver-150x94.jpg)
Bidar; ಪ್ರೇಮ ವೈಫಲ್ಯದಿಂದ ಖಿನ್ನತೆ: ಯುವಕನಿಂದ ಮಹಾರಾಷ್ಟ್ರದ ಬಸ್ ಗೆ ಕಲ್ಲುತೂರಾಟ!
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.