Humnabad ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಪುರಸಭೆ ವಿಫಲ!

ನೂತನ ಶಾಸಕರ ಪಟ್ಟಣ ಸಂಚಾರ ನಂತರ ಕೂಡ ಬದಲಾಗದ ಬದಲಾವಣೆ

Team Udayavani, Jun 17, 2023, 2:34 PM IST

3-bidar

ಹುಮನಾಬಾದ: ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಪಟ್ಟಣದ ಪುರಸಭೆ ಆಡಳಿತ ಸಂಪೂರ್ಣ ವಿಫಲಗೊಂಡಿದ್ದು, ಪುರಸಭೆ ಆಡಳಿತದ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣದಲ್ಲಿ ಒಟ್ಟಾರೆ 27 ವಾರ್ಡ್ ಗಳಿದ್ದು, ಸರಾಸರಿ 60 ಸಾವಿರಕ್ಕೂ ಅಧಿಕ ಜನ ಸಂಖ್ಯೆ ಹೊಂದಿದೆ. ಪಟ್ಟಣದ ಜನರಿಗೆ ಕುಡಿಯುವ ನೀರು, ಸ್ವಚ್ಛತೆ, ಬೀದಿ ದೀಪ ಸೇರಿದಂತೆ ಮೂಲ ಸೌಲಭ್ಯಗಳು ಒದಗಿಸುವುದು ಪುರಸಭೆಯ ಆಧ್ಯ ಕರ್ತವ್ಯವಾಗಿದೆ.

ಆದರೆ, ಅನೇಕ ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷರು ಬದಲಾದರು ಕೂಡ ಪಟ್ಟಣದ ಜನತೆಗೆ ಇಂದಿಗೂ ಕೂಡ ಸೂಕ್ತ ಸಮಯಕ್ಕೆ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಪುರಸಭೆ ಆಡಳಿತ ಕೆಲಸ ನಿರ್ವಹಿಸಿಲ್ಲ.

ಹಾಗಂತ ನೀರಿನ ಸಂಗ್ರಹ ಮಟ್ಟದ ಎಲ್ಲಿಯೂ ಕಡಿಮೆ ಇಲ್ಲ. ಕಾರಂಜಾ ಜಲಾಶಯದಿಂದ ಹುಮನಾಬಾದ, ಚಿಟಗುಪ್ಪ, ಹಳ್ಳಿಖೇಡ(ಬಿ) ಪಟ್ಟಣ ಸೇರಿದಂತೆ ಹತ್ತಾರು ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಿದೆ. ಸದ್ಯಕ್ಕೆ ಕಾರಂಜಾ ಜಲಾಶಯದಲ್ಲಿ ಸೂಕ್ತ ಪ್ರಮಾಣದ ನೀರಿದೆ. ಆದರೆ, ಸೂಕ್ತ ಆಡಳಿತ ನಡೆಸದ ಕಾರಣಕ್ಕೆ ನೀರು ಪೂರೈಕೆ ಮಾಡುವಲ್ಲಿ ಪುರಸಭೆ ಆಡಳಿತ ವಿಫಲಗೊಂಡಿದೆ.

ಕಾಂಗ್ರೆಸ್ ಪಕ್ಷದವರೇ ಆಡಳಿತ ನಡೆಸುತ್ತಿದ್ದು, ವಿಧಾನ ಸಭೆ ಚುನಾವಣೆ ಪೂರ್ವದಿಂದ ಅಂದಿನ ಶಾಸಕ ರಾಜಶೇಖರ ಪಾಟೀಲ ಕೂಡ ಅನೇಕ ಸಭೆಗಳಲ್ಲಿ, ಪುರಸಭೆ ಆಡಳಿತಕ್ಕೆ ಎಚ್ಚರಿಸುವ ಕೆಲಸ ಮಾಡಿದರು. ಪಟ್ಟಣದ ಜನರಿಗೆ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದರು.

ಆದರೂ ಕೂಡ ಪುರಸಭೆಯಲ್ಲಿ ಯಾವುದೇ ಬದಲಾವಣೆಗಳು ಕಾಣದ ಅವರು ಪುರಸಭೆ ವಿರುದ್ಧವೇ ಕೆಂಡ ಕಾರಿದ ಘಟನೆಗಳು ಕೂಡ ನಡೆದಿದ್ದವು. ಅಲ್ಲದೆ, ಕಳೆದ ಒಂದು ವಾರದ ಹಿಂದೆ ನೂತನ ಶಾಸಕ ಡಾ| ಸಿದ್ದು ಪಾಟೀಲ ಪಟ್ಟಣದ ಧನಗಾರಗಡ್ಡಾ, ಎಂಪಿ ಗಲ್ಲಿ ಸೇರಿದಂತೆ ವಿವಿಧಡೆ ಸಂಚಾರ ನಡೆಸಿ ಜನರ ಸಮಸ್ಯೆಗಳು ಆಲಿಸಿದ ಸಂದರ್ಭದಲ್ಲಿ ಬಹುತೇಕ ಜನರು ಕುಡಿವ ನೀರಿನ ಪರಿಹಾರಕ್ಕೆ ಒತ್ತಾಯಿಸಿರುವುದು ಇಲ್ಲಿ ಸ್ಮರಿಸಬಹುದಾಗಿದೆ.

ಮೂರು ದಿನಕ್ಕೆ ಒಂದು ಬಾರಿ ಸರಾಸರಿ ನೀರು ಪೂರೈಕೆ ಮಾಡುವುದಾಗಿ ಹೇಳಿದ ಪುರಸಭೆ. ಒಂದು ವಾರ, 15 ದಿನಗಳು ಕಳೆದರು ಕೂಡ ನೀರು ಪೂರೈಕೆ ಮಾಡುತ್ತಿಲ್ಲ. ದಿನ ಬೆಳಗಾದರೆ ನೀರಿಗಾಗಿ ಪರದಾಟ ನಡೆಯುತ್ತಿದೆ ಎಂದು ವಿವಿಧ ಬಡಾವಣೆಗಳ ಜನರು ಶಾಸ ಪಾಟೀಲ ಎದುರಿಗೆ ಅಳಲು ತೊಡಿಕೊಂಡಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿದ ಪುರಸಭೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ ಶಾಸಕರು ಪಟ್ಟಣದಲ್ಲಿ ಕುಡಿವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಆದರೂ ಕೂಡ ಇಂದಿಗೂ ಪುರಸಭೆ ಆಡಳಿತ ಸದಸ್ಯರು ಅಥವಾ ಅಧಿಕಾರಿಗಳು ಸಮಸ್ಯೆಗೆ ಮುಕ್ತಿ ನೀಡುವ ಕಡೆಗೆ ಗಮನ ಮಾತ್ರ ಹರಿಸದಿರುವುದು ವಿಪರಿಯಾಸದ ಸಂಗತಿ.

ಈ ಹಿಂದೆ ಪಟ್ಟಣಕ್ಕೆ ಹಳ್ಳಿಖೇಡ(ಕೆ) ಕೆರೆಯಿಂದ ನೀರು ಸರಬರಾಜು ಆಗುತ್ತಿತ್ತು. ಪೈಪ್ ಲೈನ್ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಪಟ್ಟಣದಲ್ಲಿನ ವಿವಿಧಡೆಯ ತೆರೆದ ಭಾವಿಗಳ ನೀರು ಟ್ಯಾಂಕ್ ಮೂಲಕ ಪಟ್ಟಣದ ಜನರಿಗೆ ಪೂರೈಕೆ ಮಾಡುವ ಕೆಲಸ ನಡೆಯುತ್ತಿತ್ತು. ಆದರೆ, ಕಾರಂಜಾದಿಂದ ನೀರು ಪೂರೈಕೆ ಆರಂಭವಾದ ನಂತರ ತೆರೆದ ಭಾವಿಗಳಲ್ಲಿನ ಮೋಟಾರ್ ಇತರೆ ಸಮಾನುಗಳು ಕೂಡ ಮಾಯವಾಗಿವೆ ಎಂಬುವುದು ತಿಳಿದು ಬಂದಿದೆ.

ಕಾರಂಜಾ ನೀರು ಸರಬರಾಜು ಸಮಸ್ಯೆ ಉಂಟಾದಲ್ಲಿ ತೆರೆದ ಭಾವಿಗಳ ನೀರು ಪೂರೈಕೆಗೆ ಪುರಸಭೆ ಅಧಿಕಾರಿಗಳು ಯಾಕೆ ಮುಂದಾಗುತ್ತಿಲ್ಲ. ನೀರಿನ ಪೂರೈಕೆ ಆಗದಿದ್ದರೆ ಪಟ್ಟಣದ ಜನರು ಬದುಕುವುದು ಹೇಗೆ ಎಂದು ಪ್ರಶ್ನಿಸುತ್ತಿರುವ ಜನರು, ಆಡಳಿತ ಮಂಡಳಿಯವರು ಕೂಡಲೇ ಕುಡಿವ ನೀರಿಗೆ ಪರ್ಯಾಯ ವ್ಯವಸ್ಥೆಗಳು ಮಾಡಬೇಕು ಎಂದು ಪಟ್ಟಣದ ಜನರು ಒತ್ತಾಯಿಸುತ್ತಿದ್ದಾರೆ.

ಕುಡಿವ ನೀರು ಪೂರೈಕೆ ನಿರ್ವಹಣೆ ಮಾಡುವ ಅಧಿಕಾರಿಗಳು ಸಿಬ್ಬಂದಿಗಳು ಸೂಕ್ತ ಕೆಲಸ ಮಾಡುತ್ತಿಲ್ಲ. ಪಟ್ಟಣದ ಹಳೆ ಬಡಾವಣೆಗಳ ಜನರಿಗೆ ಕಾರಂಜಾ ನೀರಿನ ಮೇಲೆ ನಿರ್ಭಾರವಾಗಿದ್ದಾರೆ. ಆದರೆ, ಪದೆ ಪದೆ ಸಮಸ್ಯೆ ಎಂದು ನೀರು ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿದ್ದು, ಬಡಾವಣೆಗಳ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಪುರಸಭೆ ಆಡಳಿತ ಸುಧಾರಣೆಗೆ ಅಕ್ರ ವಹಿಸಬೇಕು. – ಎಸ್‌ಎ ಬಾಸಿದ್ ಪುರಸಭೆ ಸದಸ್ಯರು

ನಮ್ಮ ಬಡಾವಣೆಯಲ್ಲಿ 7 ದಿನಕ್ಕೆ ಒಂದು ಬಾರಿ ನೀರು ಪೂರೈಕೆ ಮಾಡಲಾಗುತ್ತಿದೆ. ಬಡಾವಣೆಗಳಲ್ಲಿ ಕೊಳವೆ ಭಾವಿಗಳು ಇವೆ. ಆದರೆ, ಉಪ್ಪು ನೀರು ಇರುವ ಕಾರಣಕ್ಕೆ ಕುಡಿಯಲು ಬಳಸುವುದಿಲ್ಲ. ಪುರಸಭೆ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಯಾವ ಕಾರಣಕ್ಕೆ ಸಮಸ್ಯೆ ಎಂದು ವಿಚಾರಿಸಿದರೆ, ಈ ಹಿಂದೆ ಕೆಲಸ ಮಾಡಿದವರು ನಕಲಿ ಸಮಾನುಗಳು ಹಾಕಿದ ಕಾರಣ ಎಂದು ಹೇಳುತ್ತಿದ್ದು, ಕುಡಿವ ನೀರಿನ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು. – ವಿರೇಶ ಸೀಗಿ ಪುರಸಭೆ ಸದಸ್ಯರು

ದುರ್ಯೋಧನ ಹೂಗಾರ

ಟಾಪ್ ನ್ಯೂಸ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.