ಕುರಿ ಕಳ್ಳರು ಪರಾರಿ: ಬೊಲೆರೊ ವಾಹನ ಜಪ್ತಿ
Team Udayavani, Jan 25, 2022, 3:23 PM IST
ಮುದಗಲ್ಲ: ಪಟ್ಟಣದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕುರಿ ಕಳ್ಳತನ ವಾಗುತ್ತಿರುವ ಸುದ್ದಿ ಹರಡುತ್ತಿರುವಾಗಲೇ ಬಗಡಿ ತಾಂಡಾದಲ್ಲಿ ಕುರಿ ಕಳ್ಳರು ತಮ್ಮ ಕೈಚಳಕ ತೊರಿಸುವಾಗ ಸಾರ್ವಜನಿಕರ ಕೈಯಲ್ಲಿ ಸಿಕ್ಕಿಬಿದ್ದು ಕುರಿ ಮತ್ತು ವಾಹನ ಬಿಟ್ಟು ಪರಾರಿಯಾದ ಘಟನೆ ನಡೆದಿದೆ. ಕುರಿಗಳನ್ನು ಸಾಗಿಸುತ್ತಿರುವ ಬೊಲೆರೊ ವಾಹನವನ್ನು ಸಾರ್ವಜನಿಕರ ಮಾಹಿತಿ ಮೇರೆಗೆ ಮುದಗಲ್ಲ ಪೊಲೀಸರು ಜಪ್ತಿ ಮಾಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಬಲೆ ಬಿಸಿದ್ದಾರೆ. ದನ-ಕುರಿಗಳ ಸಂತೆಗೆ ಕುರಿಗಳನ್ನು ಕದ್ದು ಸಾಗಿಸುತ್ತಿರುವಾಗ ಸಮೀಪದ ಬಗಡಿ ತಾಂಡಾದ ಗುಡ್ಡಗಾಡು ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಆದರೆ, ಮೂವರು ಆರೋಪಿತರು ಪರಾರಿಯಾಗಿದ್ದಾರೆ. ವಾಹನವು ಆರಂಭವಾಗದ ಕಾರಣ ಪೊಲೀಸರು ವಾಹನ ಜಪ್ತಿ ಮಾಡಿಕೊಂಡಿದ್ದಾರೆ.
ವಾಹನಕ್ಕೆ ಯಾವುದೇ ರೀತಿಯ ನಂಬರ್ ಪ್ಲೇಟ್ ಇರದೇ ಇರುವುದು ಒಂದೆಡೆಯಾದರೆ, ವಾಹನದಲ್ಲಿ ಮಾರಕಾಸ್ತ್ರಗಳನ್ನು ಇಟ್ಟಿರುವುದು ಕೆಲವು ಅನುಮಾನ ವ್ಯಕ್ತಪಡಿಸಲಾಗಿದೆ. ಆದರೆ, ವಾಹನದ ದಾಖಲೆ ಪ್ರಕಾರ ಮಂಡ್ಯ ಜಿಲ್ಲೆಯದ್ದಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ