ಯುಪಿ ರೈತರ ಚಿತಾಭಸ್ಮ ಕೃಷ್ಣಾ ನದಿಯಲ್ಲಿ ವಿಸರ್ಜನೆ
Team Udayavani, Nov 1, 2021, 11:35 AM IST
ಶಹಾಪುರ: ಉತ್ತರ ಪ್ರದೇಶದ ಲಂಖೀಪುರ-ಖೇರಿಯಲ್ಲಿ ರೈತರ ಪ್ರತಿಭಟನೆ ವೇಳೆ ಕಾರು ಹತ್ತಿಸಿ ಕೊಲೆ ಮಾಡಲಾದ ನಾಲ್ವರು ರೈತರ ಚಿತಾಭಸ್ಮವನ್ನು ಭಾನುವಾರ ತಾಲೂಕಿನ ಕೊಳ್ಳೂರ(ಎಂ) ಗ್ರಾಮದ ಬಳಿಯ ಕೃಷ್ಣಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಮಾಜಿ ಶಾಸಕ ಬಿ.ಆರ್. ಪಾಟೀಲ್ ನೇತೃತ್ವದಲ್ಲಿ ರೈತ ಸಂಘದ ಮುಖಂಡರು ಹಾಗೂ ಹೋರಾಟಗಾರರು ಜೊತೆಗೂಡಿ ದೆಹಲಿಯಿಂದ ರೈತರು ಕಳುಹಿಸಿದ ಭಸ್ಮವನ್ನು ನದಿ ದಂಡೆಯ ಬಳಿ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ನಂತದ ಭಸ್ಮವನ್ನು ನದಿಯಲ್ಲಿ ಹರಿಬಿಟ್ಟರು.
ನಂತರ ಮಾತನಾಡಿದ ಬಿ.ಆರ್. ಪಾಟೀಲ್, ಕಾವೇರಿ ಮತ್ತು ಇಲ್ಲಿನ ಕೃಷ್ಣಾ ನದಿಯಲ್ಲಿ ಚಿತಾಭಸ್ಮವನ್ನು ಹರಿಬಿಡುವ ಮೂಲಕ ರೈತರ ತ್ಯಾಗ ಹಾಗೂ ಬಲಿದಾನವನ್ನು ದೇಶವು ಯಾವತ್ತು ಮರೆಯುವುದಿಲ್ಲ ಎಂಬ ಆಶಾ ಭಾವನೆ ನಮ್ಮದು. ಹುತಾತ್ಮರಾದ ರೈತರು ನಮ್ಮ ನೀರು, ಗಾಳಿ, ಬೆಳಕಿನ ಜೊತೆ ಇದ್ದಾರೆ ಎಂದರು. ರೈತ ಮುಖಂಡ ಭಾಸ್ಕರರಾವ ಮುಡಬೂಳ ಹಾಗೂ ಶರಣಪ್ಪ ಸಲಾದಪುರ ಮಾತನಾಡಿದರು.
ರೈತ ಮುಖಂಡರಾದ ಹಣಮಂತ ವಾಲ್ಮೀಕಿ, ಹಣಮಂತ ಭಂಗಿ, ಹಣಮಂತ ಬೆಣಕಲ್, ಭೀಮಸೇನರಾವ ಕುಲಕರ್ಣಿ, ಶಿವರಡ್ಡಿ ಕೊಳ್ಳೂರ, ಮಲ್ಲಣ್ಣ ಪರಿವಾಣ, ಶೌಕತ್ ಅಲಿ, ಉಮಾಪತಿ ಪಾಟೀಲ್, ಜಂಬಯ್ಯ ದೊರೆ, ಭೀಮಣ್ಣಗೌಡ ಹುಲಕಲ್, ಉಮೇಶ ಮುಡಬೂಳ, ಅರವಿಂದ ಕುಲಕರ್ಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
MUST WATCH
ಹೊಸ ಸೇರ್ಪಡೆ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ