ಸೀಲ್ಡೌನ್ ಬಡಾವಣೆಗೆ ಹೋಗಿದ್ದಿರಾ?
ಬಜೆಟ್ ಅಧಿವೇಶನದಲ್ಲಿ ಮಾತಾಡಿದ್ದು ಗೊತ್ತಾ? ಗುಳೆ ಹೋದವರಿಗೆ ಏನು ಮಾಡಿದ್ದಿರಿ?
Team Udayavani, May 1, 2020, 3:55 PM IST
ವಾಡಿ: ಲಾಕ್ಡೌನ್ ಸಂಕಟದಲ್ಲಿ ತೊಂದರೆ ಅನುಭವಿಸುತ್ತಿರುವ ಪಟ್ಟಣದ ಬಡ ಕುಟುಂಬಗಳಿಗೆ ಶಾಸಕ ಪ್ರಿಯಾಂಕ್ ಖರ್ಗೆ ಆಹಾರದ ಕಿಟ್ ವಿತರಿಸಿದರು. ತಹಶೀಲ್ದಾರ್ ಉಮಾಕಾಂತ ಹಳ್ಳೆ, ಮೈನಾಬಾಯಿ ರಾಠೊಡ, ಮಹೆಮೂದ್ ಸಾಹೇಬ ಇದ್ದರು.
ವಾಡಿ: ನಾನು ಕ್ಷೇತ್ರಕ್ಕೆ ಬಂದಿಲ್ಲ ಎಂದು ಆರೋಪ ಮಾಡುವವರು ಬಜೆಟ್ ಅಧಿವೇಶನ ಯಾವಾಗಿತ್ತು? ಸಂವಿಧಾನದ ಕುರಿತು ಚರ್ಚೆ ಯಾವಾಗ ಆಗಿತ್ತು? ಎಷ್ಟು ದಿನಗಳ ವರೆಗೆ ಸದನ ನಡೆಯಿತು? ಎದುರಾಗಲಿರುವ ಕೋವಿಡ್ ಸಂಕಟದ ಕುರಿತು ಅಲ್ಲಿ ನಾನೇನು ಮಾತಾಡಿದ್ದಿನಿ ಎನ್ನುವ ಅರಿವು ಇರಬೇಕು ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸಾಹೇಬ ಫಂಕ್ಷನ್ಹಾಲ್ನಲ್ಲಿ ಗುರುವಾರ ವಿವಿಧ ಬಡಾವಣೆಯ 1500 ಪಡಿತರ ಚೀಟಿ ವಂಚಿತ ಬಡ ಕುಟುಂಬಗಳಿಗೆ ವೈಯಕ್ತಿಕವಾಗಿ ರೇಷನ್ ಕಿಟ್ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಚುನಾವಣೆ ವೇಳೆ ಮುಂಬೈ ಮತ್ತು ಪುಣೆ ನಗರದಲ್ಲಿದ್ದ ಬಂಜಾರಾ ಮತದಾರರನ್ನು ಕರೆತರಲು ಬಸ್ ಕಳಿಸುತ್ತಿದ್ದರು. ಈಗೇಕೆ ಕೋವಿಡ್ ಸಂಕಟದಲ್ಲಿ ಸಿಕ್ಕ ತಮ್ಮ ಸಮುದಾಯದವರನ್ನೆ ಸಂಸದರು ಕರೆಸುತ್ತಿಲ್ಲ? ಯಡಿಯೂರಪ್ಪ ಅವರಿಗೆ ಒಂದು ಪತ್ರನಾದರೂ ಬರೆದಿದ್ದಾರಾ? ಎಂದು ಪ್ರಶ್ನಿಸಿದರು.
ಲಾಕ್ಡೌನ್ ಘೋಷಣೆಯಿಂದ ಬೆಂಗಳೂರಿನಲ್ಲಿ ತೊಂದರೆಗೊಳಗಾದ ಕಲಬುರಗಿಯ 2400 ಕುಟುಂಬಗಳಿಗೆ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ, ಮುಂಬೈನಲ್ಲಿರುವ 400 ಕುಟುಂಬಗಳಿಗೆ
ರೇಷನ್ ಕಿಟ್ ಕೊಟ್ಟಿರೋದು ನಾನು. ಚಿತ್ತಾಪುರ ತಾಲೂಕಿನಲ್ಲಿ 3000 ಕಿಟ್ ಕೊಡುತ್ತಿರೋದು ನಾನು. 24 ತಾಸು ವಾಡಿ ನಗರದಲ್ಲೇ ಇರುವ ಮಾಜಿ ಶಾಸಕ ವಾಲ್ಮೀಕಿ ನಾಯಕ ಪಕ್ಕದಲ್ಲೇ
ಸೀಲ್ಡೌನ್ ಬಡಾವಣೆಗಳಿವೆ ಹೋಗಿ ನೋಡಿದ್ದಾರಾ? ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
MUST WATCH
ಹೊಸ ಸೇರ್ಪಡೆ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ