
42.74 ಲಕ್ಷ ರೂ. ತೆರಿಗೆ ಸಂಗ್ರಹ
ಅಭ್ಯರ್ಥಿಗೆ ತೆರಿಗೆ ಪಾವತಿ ಕಡ್ಡಾಯ,27ರಂದು ನಡೆಯುವ ಎರಡನೇ ಹಂತದ ಚುನಾವಣೆ ಘೋಷಣೆ
Team Udayavani, Dec 25, 2020, 5:37 PM IST

ಸಿಂದಗಿ: ಸಿಂದಗಿ ಮತ್ತು ದೇವರಹಿಪ್ಪರಗಿ ತಾಲೂಕಿನಗ್ರಾಮ ಪಂಚಾಯಿತ್ಗಳಿಗೆ ಡಿ. 27ರಂದುನಡೆಯುವ ಎರಡನೇ ಹಂತದ ಚುನಾವಣೆ ಘೋಷಣೆ ಆಗುತ್ತಿದ್ದಂತೆ ಕೇವಲ 11 ದಿನಗಳಲ್ಲಿಸಿಂದಗಿ ತಾಲೂಕಿಗೆ 26.62 ಲಕ್ಷ ರೂ, ದೇವರಹಿಪ್ಪರಗಿತಾಲೂಕಿಗೆ 16.12 ಲಕ್ಷ ರೂ. ಕಂದಾಯ ಬಾಕಿ ಹರಿದು ಬಂದಿದೆ.
ಸಿಂದಗಿ ತಾಲೂಕಿನ 23 ಗ್ರಾಪಂ ಮತ್ತು ದೇವರ ಹಿಪ್ಪರಗಿ ತಾಲೂಕಿನ 14 ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಹೊಂದಿದ್ದ ಅಭ್ಯರ್ಥಿಗಳು ತಮ್ಮ ಎಲ್ಲಾ ಕಂದಾಯ ಬಾಕಿ ಪಾವತಿಸಿ ದೃಢೀಕರಣಪತ್ರ ಮತ್ತು ಶೌಚಾಲಯ ನಿರ್ಮಾಣ ದೃಢೀಕರಣ ಪತ್ರ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಪಂಚಾಯತ್ ಖಜಾನೆ ಭರ್ತಿಯಾಗಿದೆ.ಪಂಚಾಯತ್ ಸಿಬ್ಬಂದಿ ವರ್ಗದ ಎಲ್ಲ ದಿನಗಳುಮನೆ ಬಾಗಿಲಿಗೆ ತೆರಳಿ ಕಂದಾಯ ಪಾವತಿಸಲುಮನವೊಲಿಸಿದರೂ ಬಾಕಿ ಪಾವತಿಸಲು ಇನ್ನಿಲ್ಲದ ನೆಪಹೇಳುತ್ತಿದ್ದರು. ಚುನಾವಣೆ ಘೋಷಣೆ ಹಿನ್ನಲೆಯಲ್ಲಿ ಅಭ್ಯರ್ಥಿ ಆಕಾಂಕ್ಷಿಗಳು ಕಂದಾಯ ಪಾವತಿಸಿದ್ದಾರೆ.
ಸಿಂದಗಿ ತಾಲೂಕು: ತಾಲೂಕಿನ 23 ಗ್ರಾಪಂಗಳಲ್ಲಿ ಬಗಲೂರ ಗ್ರಾಪಂ 26840 ರೂ., ಬಮ್ಮನಹಳ್ಳಿ 53301 ರೂ., ಬ್ಯಾಕೋಡ 1.65 ಲಕ್ಷ ರೂ., ಚಟ್ಟರಕಿ 74532 ರೂ., ದೇವಣಗಾಂವ97755 ರೂ., ದೇವರನಾವದಗಿ 60560 ರೂ., ಗಬಸಾವಳಗಿ 1.04 ಲಕ್ಷ ರೂ.,ಗೋಲಗೇರಿ 88440 ರೂ.,ಗುಬ್ಬೇವಾಡ 1.95 ಲಕ್ಷರೂ., ಹಂದಿಗನೂರ 81394ರೂ., ಹಿಕ್ಕಣಗುತ್ತಿ 92060ರೂ., ಹೊನ್ನಳ್ಳಿ 1.26 ಲಕ್ಷರೂ., ಕಡಣಿ 45350 ರೂ.,ಕಕ್ಕಳಮೇಲಿ 86212 ರೂ., ಕೊಕಟನೂರ 3.35 ಲಕ್ಷ ರೂ., ಕೊರಹಳ್ಳಿ 1.32 ಲಕ್ಷ ರೂ., ಮಲಘಾಣ 1.67 ಲಕ್ಷ ರೂ., ಮೊರಟಗಿ 38537 ರೂ., ನಾಗಾವಿ ಬಿ.ಕೆ. 95386ರೂ., ರಾಮನಹಳ್ಳಿ 71823 ರೂ., ರಾಂಪುರ ಪಿ.ಎ. 2ಲಕ್ಷ ರೂ., ಸುಂಗಠಾಣ 62 ಸಾವಿರ ರೂ., ಯಂಕಂಚಿ 2.64 ಲಕ್ಷ ರೂ. ಹೀಗೆ ಒಟ್ಟು 26.62 ಲಕ್ಷ ರೂ. ತೆರಿಗೆ ಸಂಗ್ರಹಿಸಿವೆ.
ದೇವರಹಿಪ್ಪರಗಿ ತಾಲೂಕು: ತಾಲೂಕಿನ 14 ಗ್ರಾಪಂಗಳಲ್ಲಿ ಚಿಕ್ಕರೂಗಿ ಗ್ರಾಪಂ 29500 ರೂ., ಹರನಾಳ 1.13 ಲಕ್ಷ ರೂ., ಹಿಟ್ನಳ್ಳಿ 1.38 ಲಕ್ಷ ರೂ.,ಹುಣಶ್ಯಾಳ 1.78 ಲಕ್ಷ ರೂ., ಜಾಲವಾದ 95439ರೂ., ಕೆರೂಟಗಿ 2.41 ಲಕ್ಷ ರೂ., ಕೊಂಡಗೂಳಿ 2.41ಲಕ್ಷ ರೂ., ಕೋರವಾರ 67311 ರೂ., ಮಣೂರ2.30 ಲಕ್ಷ ರೂ., ಮಾರಕಬ್ಬಿನಹಳ್ಳಿ 10224 ರೂ.,ಮುಳಸಾವಳಗಿ 2.06 ಲಕ್ಷ ರೂ., ಸಾತಿಹಾಳ 19600ರೂ., ಯಾಳವಾರ 9148 ರೂ., ಯೆಲಗೋಡ35249 ರೂ. ಹೀಗೆ ಒಟ್ಟು 16.12 ಲಕ್ಷ ರೂ. ತೆರಿಗೆ ಸಂಗ್ರಹಿಸಿವೆ.
ಗ್ರಾಪಂಚುನಾವಣೆಹಿನ್ನೆಲೆಯಲ್ಲಿ ತೆರಿಗೆ ಬಾಕಿಪಾವತಿಸಿದ ರೀತಿಯಲ್ಲೇಉಳಿದ ಸಾರ್ವಜನಿಕರು ಅವರ ಬಾಕಿ ತೆರಿಗೆ ಹಣ ಪಾವತಿಸಿದಲ್ಲಿ ಗ್ರಾಮದಅಭಿವೃದ್ಧಿಗೆ ಸಹಕಾರಿ ಆಗಲಿದೆ. –ಸುನೀಲ ಮದ್ದಿನ, ತಾಪಂ ಇಒ ಸಿಂದಗಿ ಮತ್ತು ದೇವರಹಿಪ್ಪರಗಿ
ಸರಕಾರದ ಯಾವುದೇ ಸವಲತ್ತು ಪಡೆಯುವ ಫಲಾನುಭವಿಗಳು ತೆರಿಗೆ ಪಾವತಿಸುವುದು ಕಡ್ಡಾಯ ಎಂದುಮಾಡಿದಲ್ಲಿಪಂಚಾಯತ್ ಆರ್ಥಿಕ ಸದೃಢ ಹೊಂದಲಿದೆ. -ಅಮೋಘಿ ಹಿರೇಕುರಬರ ಚುನಾವಣಾಧಿಕಾರಿ, ಸುಂಗಠಾಣ ಗ್ರಾಪಂ
-ರಮೇಶ ಪೂಜಾರ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wheelchair Cricket: ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಕರ್ನಾಟಕ ತಂಡದ ನಾಯಕನಾಗಿ ಮಹೇಶ್ ಆಯ್ಕೆ

Family Issues: ಕೌಟುಂಬಿಕ ಕಲಹ ಪತ್ನಿ, ಪತ್ನಿಯ ತಾಯಿ ಹತ್ಯೆ: ಪೊಲೀಸ್ ಠಾಣೆಗೆ ಶರಣಾದ ಆರೋಪಿ

Vijayapura: ಕೊಲ್ಹಾರ ಪಟ್ಟಣದ ಮಹಿಳೆ ಮೂವರು ಮಕ್ಕಳೊಂದಿಗೆ ನಾಪತ್ತೆ

Congress ನಾಯಕರಿಗೆ ತಾಕತ್ತಿದ್ದರೆ ಹರಿಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳಲಿ: ಯತ್ನಾಳ್

ಸಿದ್ಧರಾಮಯ್ಯ ಜೀವಂತ ಬಂದರೂ ಬಿಜೆಪಿಗೆ ಸೇರಿಸಿಕೊಳ್ಳಲ್ಲ: ಯತ್ನಾಳ
MUST WATCH
ಹೊಸ ಸೇರ್ಪಡೆ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

NDA ಗೆ ಜೆಡಿಎಸ್ ಪಕ್ಷವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಶಾ, ನಡ್ಡಾ

Gokarna; ಸೆ. 26,27,28 ರಂದು ಪ್ರಧಾನಿ ಮೋದಿ ಹೆಸರಲ್ಲಿ ಮಹಾರುದ್ರಯಾಗ

Explainer:ಕ್ಷೇತ್ರ ಪುನರ್ ವಿಂಗಡಣೆಯಾದ್ರೆ ತಮಿಳುನಾಡು 8, ಕೇರಳಕ್ಕೆ 8ಲೋಕಸಭಾ ಸ್ಥಾನ ನಷ್ಟ

J&K; ಗೃಹಬಂಧನದಿಂದ ಬಿಡುಗಡೆ: ಕಣ್ಣೀರಿಟ್ಟ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್