ಧೋಳಖೇಡ ಚೆಕ್ಪೋಸ್ಟ್ ಎಸಿ ಭೇಟಿ
Team Udayavani, Jan 15, 2022, 5:58 PM IST
ಇಂಡಿ: ಕೋವಿಡ್-19 ಹಿನ್ನೆಲೆಯಲ್ಲಿ ಕಂದಾಯ ಉಪವಿಬಾಗಾಧಿಕಾರಿ ರಾಹುಲ್ ಶಿಂಧೆಯವರು ಮಹಾರಾಷ್ಟ್ರದ ಗಡಿಯ ಭಾಗದ ಧೂಳಖೇಡ ಚೆಕ್ ಪೋಸ್ಟ್ಗೆ ಗುರವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕೋವಿಡ್ ತಪಾಸಣೆ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕರ್ತವ್ಯದಲ್ಲಿದ್ದ ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯವರಿಂದ ತಪಾಸಣೆ ಬಗ್ಗೆ ಮಾಹಿತಿ ಮತ್ತು ದಾಖಲೆ ಪಡೆದುಕೊಂಡರು. ಕೋವಿಡ್ ನಿಯಮಾವಳಿ ಪ್ರಕಾರ ಪ್ರತಿ ವಾಹನಗಳನ್ನು ತಡೆಸಿ ಪರಿಶೀಲಿಸಿ ಅಗತ್ಯ ದಾಖಲೆ ಪಡೆಯಿರಿ. ಸೂಕ್ತ ದಾಖಲೆ ಇಲ್ಲದವರನ್ನು ವಾಪಸ್ ಕಳುಹಿಸಿ. ಇದರಲ್ಲಿ ಯಾವುದೇ ಮುಲಾಜು ಬೇಡ ಎಂದು ತಿಳಿಸಿದರು.
ಅಲ್ಲದೆ ಮಹಾರಾಷ್ಟ್ರದ ದೇವಸ್ಥಾನಗಳಿಗೆ ಹೋಗಿ ಬರುವ ಭಕ್ತರು ಕಡ್ಡಾಯ ಎರಡು ಲಸಿಕೆ ಪಡೆದಿರುವ ಬಗ್ಗೆ ದಾಖಲೆ ಪರಿಶೀಲಿಸಿ. ಆರ್ಟಿಪಿಸಿಆರ್ ತಪಾಸಣೆ ನಡೆಸುವಂತೆ ಶಿಂಧೆ ಸೂಚಿಸಿದರು.
ಚಡಚಣ ತಹಶೀಲ್ದಾರ್ ಸುರೇಶ ಚವಲರ, ಕಂದಾಯ ನಿರೀಕ್ಷಕ ಪಿ.ಜೆ. ಕೊಡಹೊನ್ನ, ಆಶಾ ಕಾರ್ಯಕರ್ತೆಯರು,ಪೊಲೀಸ್ ಸಿಬ್ಬಂದಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ