ಅರುಣ್ ಸಿಂಗ್-ಯತ್ನಾಳ್ ಭೇಟಿ…: ಕುತೂಹಲ ಮೂಡಿಸಿದ ಆಂತರಿಕ ಮಾತುಕತೆ


Team Udayavani, Nov 9, 2022, 9:00 AM IST

ಅರುಣ್ ಸಿಂಗ್-ಯತ್ನಾಳ ಭೇಟಿ…: ಕುತೂಹಲ ಮೂಡಿಸಿದ ಆಂತರಿಕ ಮಾತುಕತೆ

ವಿಜಯಪುರ: ಕೆಲವೇ ದಿನಗಳ ಹಿಂದಷ್ಟೇ ಯತ್ನಾಳ ಕೇವಲ ನಮ್ಮ ಪಕ್ಷದ ಓರ್ವ ಶಾಸಕ ಮಾತ್ರ. ಅವರ ಮಾತಿಗೆ ಹೆಚ್ಚಿನ ಬೆಲೆ ನೀಡುವ ಅಗತ್ಯವಿಲ್ಲ ಎಂದಿದ್ದ ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಮಂಗಳವಾರ ಸ್ವಯಂ ಸ್ವಪಕ್ಷೀಯ ಶಾಸಕ ಯತ್ನಾಳ ಅವರನ್ನು ಭೇಟಿಯಾಗಿ ಪರಸ್ಪರ ಗೌಪ್ಯ ಮಾತುಕತೆ ನಡೆಸಿದ್ದು ಕುತೂಹಲ ಮೂಡಿಸಿದೆ.

ತಮ್ಮ ಬಗ್ಗೆ ಹಗುರವಾಗಿ ಮಾತನಾಡಿದ ಬಳಿಕ ಮಂಗಳವಾರ ಜಿಲ್ಲೆಯ ಪಕ್ಷ ಸಂಘಟನೆಗಾಗಿ ಅರುಣ್ ಸಿಂಗ್ ಆಗಮಿಸಿದ್ದರೂ ಸದರಿ ಸಭೆಗಳಿಗೆ ಹಾಜರಾಗದೇ ಅವರಿಂದ ಯತ್ನಾಳ ಅಂತರ ಕಾಯ್ದುಕೊಂಡಿದ್ದರು.

ಜಿಲ್ಲೆಯ ಪಕ್ಷ ಸಂಘಟನೆ ಕಾರ್ಯಕ್ರಮಗಳು ಮುಗಿಯುತ್ತಲೇ ವಿಜಯಪುರ ನಗರಕ್ಕೆ ಧಾವಿಸಿ ಬಂದಿರುವ ಅರುಣಸಿಂಗ್, ಸಂಜೆ ವೇಳೆ ಶಾಸಕ ಯತ್ನಾಳ ಅವರೊಂದಿಗೆ ಗೌಪ್ಯ ಮಾತುಕತೆ ನಡೆಸಿದ್ದಾರೆ.

ಶಾಸಕ ಯತ್ನಾಳ ಸಾರಥ್ಯದಲ್ಲಿ ನಡೆಯುತ್ತಿರುವ ನಗರದ ಹೊರ ವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹೈಪರ್ ಮಾರ್ಟ್ ನಲ್ಲಿ ಯತ್ನಾಳ ಅವರನ್ನು ಅರುಣ್ ಸಿಂಗ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಅರುಣ್ ಸಿಂಗ್ ಅವರೊಂದಿಗೆ ಪಕ್ಷದ ಸಿಂದಗಿ ಶಾಸಕ ರಮೇಶ ಭೂಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ, ಪ್ರಧಾನ ಕಾರ್ಯದರ್ಶಿ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ ಸೇರಿದಂತೆ ಹಲವು ನಾಯಕರಿದ್ದರೂ, ಎಲ್ಲರೊಂದಿಗೆ ಒಂದು ಫೋಟೋಗೆ ಫೋಸ್ ಕೊಟ್ಟ ಬಳಿಕ ಇತರೆ ಎಲ್ಲ ನಾಯಕರನ್ನೂ ಹೊರಗಿಟ್ಟ ಅರುಣ್ ಸಿಂಗ್, ಕೇವಲ ಯತ್ನಾಳ ಅವರನ್ನು ಮಾತ್ರ ಕರೆದೊಯ್ದು ಪ್ರತ್ಯೇಕ ಹಾಗೂ ಗೌಪ್ಯ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ : ನೇಪಾಳದಲ್ಲಿ 6.6 ತೀವ್ರತೆಯ ಭೂಕಂಪ: 6 ಮಂದಿ ಸಾವು, ದೆಹಲಿಯಲ್ಲೂ ಕಂಪಿಸಿದ ಭೂಮಿ

ತಮ್ಮಿಬ್ಬರ ಮಧ್ಯೆ ನಡೆದ ಆಂತರಿಕ ಮಾತುಕತೆ ವಿವರಗಳು ಏನೆಂದು ಇಬ್ಬರೂ ನಾಯಕರು ಬಹಿರಂಗ ಪಡಿಸಿಲ್ಲ.

ಹೀಗಾಗಿ ಹಿಂದು ಪೈರ್ ಬ್ರ್ಯಾಂಡ್, ಬಿಜೆಪಿ ರೆಬೆಲ್ ಲೀಡರ್ ಎಂದೆ‌ ಗುರುತಿಸಿಕೊಂಡಿರುವ ಯತ್ನಾಳ ವಿರುದ್ದ ಸಾಮಾನ್ಯ ಶಾಸಕ‌ ಮಾತ್ರ ಎಂದಿದ್ದ ಯತ್ನಾಳ ಅವರೊಂದಿಗೇ ಅರುಣ್ ಸಿಂಗ್ ತಮ್ಮೊಂದಿಗಿದ್ದ ಎಲ್ಲ ನಾಯಕರನ್ನೂ ಹೊರಗಿಟ್ಟು ಗೌಪ್ಯ ಮಾತುಕತೆ ನಡೆಸಿರುವುದು ಅಚ್ಚರಿ ಮೂಡಿಸಿದೆ. ಬಿಜೆಪಿ ಪಕ್ಷದ ವಲಯದಲ್ಲೂ ಅರುಣ್ ಸಿಂಗ್, ಯತ್ನಾಳ ಭೇಟಿಯ ವಿಷಯವೇ ಇದೀಗ ದೊಡ್ಡ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಕಲ್ಪಿಸಿದೆ.

ಟಾಪ್ ನ್ಯೂಸ್

ಕಾರ್ಯಾರಂಭಕ್ಕೆ ಸಿದ್ಧ:ಐಫೆಲ್ ಟವರ್ ಮೀರಿಸುವ ವಿಶ್ವದ ಅತೀ ಎತ್ತರದ ಚೆನಾಬ್ ರೈಲ್ವೆ ಸೇತುವೆ …

ಕಾರ್ಯಾರಂಭಕ್ಕೆ ಸಿದ್ಧ:ಐಫೆಲ್ ಟವರ್ ಮೀರಿಸುವ ವಿಶ್ವದ ಅತೀ ಎತ್ತರದ ಚೆನಾಬ್ ರೈಲ್ವೆ ಸೇತುವೆ …

vinay kulkarni

ಸಿಎಂ ವಿರುದ್ದ ಸ್ಪರ್ಧೆಗೆ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ: ವಿನಯ್ ಕುಲಕರ್ಣಿ

1-sdfdfdsfsdf

ಮೂಡಿಗೆರೆ : ಪೊಲೀಸರೆದುರೇ ಕೈ-ಕೈ ಮಿಲಾಯಿಸಿದ ಬಿಜೆಪಿಯ ಎರಡು ಬಣ

ಮತ್ತೆ ಬಂಧನ ಭೀತಿ: ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಮತ್ತೆ ಬಂಧನ ಭೀತಿ: ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾ

List of IPL 2023 commentators

ಇಲ್ಲಿದೆ ಐಪಿಎಲ್ -2023 ಕಮೆಂಟೇಟರ್ ಗಳ ಪಟ್ಟಿ: ಬಿಗ್ ಬಾಸ್ ವಿನ್ನರ್ ಈಗ ವೀಕ್ಷಕ ವಿವರಣೆಗಾರ

1-dfdf-dadsa

ದಾಖಲೆಗಳನ್ನು ತೋರಿಸಲಿ; ರಾಹುಲ್ ಗಾಂಧಿಗೆ ಸಾವರ್ಕರ್ ಮೊಮ್ಮಗ ಸವಾಲು

tdy-20

ಆಕಾಂಕ್ಷಾ ದುಬೆ ಪ್ರಕರಣ: ಮಗಳ ಸಾವಿಗೆ ಇವರಿಬ್ಬರೇ ಕಾರಣವೆಂದ ತಾಯಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆ ಬಂಧನ ಭೀತಿ: ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಮತ್ತೆ ಬಂಧನ ಭೀತಿ: ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾ

1-ddsa-aSAs

ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗುಬ್ಬಿ ಶ್ರೀನಿವಾಸ್

4-shivamogga

ಒಳ ಮೀಸಲಾತಿ ಬೇಗುದಿ ; ಯಡಿಯೂರಪ್ಪ ಮನೆಗೆ ಕಲ್ಲು ತೂರಾಟ, ಪ್ರತಿಭಟನೆ

tdy-9

ಬೊಂಬೆನಗರಿಯಲ್ಲಿ ಕೈ ಅಭ್ಯರ್ಥಿ ಕಗ್ಗಂಟು

ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ?

ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನ?

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ಕಾರ್ಯಾರಂಭಕ್ಕೆ ಸಿದ್ಧ:ಐಫೆಲ್ ಟವರ್ ಮೀರಿಸುವ ವಿಶ್ವದ ಅತೀ ಎತ್ತರದ ಚೆನಾಬ್ ರೈಲ್ವೆ ಸೇತುವೆ …

ಕಾರ್ಯಾರಂಭಕ್ಕೆ ಸಿದ್ಧ:ಐಫೆಲ್ ಟವರ್ ಮೀರಿಸುವ ವಿಶ್ವದ ಅತೀ ಎತ್ತರದ ಚೆನಾಬ್ ರೈಲ್ವೆ ಸೇತುವೆ …

vinay kulkarni

ಸಿಎಂ ವಿರುದ್ದ ಸ್ಪರ್ಧೆಗೆ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ: ವಿನಯ್ ಕುಲಕರ್ಣಿ

1-sdfdfdsfsdf

ಮೂಡಿಗೆರೆ : ಪೊಲೀಸರೆದುರೇ ಕೈ-ಕೈ ಮಿಲಾಯಿಸಿದ ಬಿಜೆಪಿಯ ಎರಡು ಬಣ

ಮತ್ತೆ ಬಂಧನ ಭೀತಿ: ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಮತ್ತೆ ಬಂಧನ ಭೀತಿ: ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾ

List of IPL 2023 commentators

ಇಲ್ಲಿದೆ ಐಪಿಎಲ್ -2023 ಕಮೆಂಟೇಟರ್ ಗಳ ಪಟ್ಟಿ: ಬಿಗ್ ಬಾಸ್ ವಿನ್ನರ್ ಈಗ ವೀಕ್ಷಕ ವಿವರಣೆಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.