ವಿಜಯಪುರ : ಕಾಲುಜಾರಿ ಬಾವಿಗೆ ಬಿದ್ದ ಇಬ್ಬರು ಬಾಲಕರ ಸಾವು
Team Udayavani, Apr 26, 2021, 3:08 PM IST
ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳದ ತಾಳಿಕೋಟೆ ಬೈಪಾಸ್ ರಸ್ತೆ ಹತ್ತಿರದ ತೆರೆದ ಬಾವಿಯಲ್ಲಿ ಕಾಲುಜಾರಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟ ದುರ್ಘಟನೆ ಜರುಗಿದೆ.
ಮೃತರನ್ನು ಮುದ್ದೇಬಿಹಾಳ ಆಶ್ರಯ ಕಾಲೋನಿ ನಿವಾಸಿ ಸುನೀಲ ಹಡಪದ ಅವರ ಮಕ್ಕಳಾದ ಪ್ರೇಮನಾಥ (13), ಪುನೀತ್ (10) ಎಂದು ಗುರುತಿಸಲಾಗಿದೆ. ಬಟ್ಟೆ ತೊಳೆಯಲು ಹೋದಾಗ ಈ ದುರ್ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸ್ಥಳೀಯ ಅಗ್ನಿಶಾಮಕ ದಳದ ಠಾಣಾಧಿಕಾರಿ ಪ್ರವೀಣ ಸುಂಕದ ನೇತೃತ್ವದ ತಂಡ ಸಾರ್ವಜನಿಕರ ಸಹಕಾರದೊಂದಿಗೆ ಶವವನ್ನು ಹೊರ ತೆಗೆಯಲಾಗಿದೆ. ಮೃತದೇಹಗಳನ್ನು ಸರ್ಕಾರಿ ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.
ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.